ಆ್ಯಪ್ನಗರ

ಫೆ.2 ರಿಂದ ಜಿಲ್ಲಾಮಟ್ಟದ ಯುವಜನ ಮೇಳ

ನಗರದ ಹಿರೇಮಗಳೂರು ಶ್ರೀ ಪ್ರಭುಲಿಂಗಸ್ವಾಮಿ ಪ್ರೌಢಶಾಲೆಯಲ್ಲಿ ಫೆ.2, 3 ರಂದು ಜಿಲ್ಲಾ ಯುವ ತರಬೇತಿ ಮತ್ತು ಕಾರ್ಯಾಗಾರ , ಜಿಲ್ಲಾ ಮಟ್ಟದ ಯುವಜನ ಮೇಳ ಏರ್ಪಡಿಸಲಾಗಿದೆ ಎಂದು ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಪ್ರಕಟಣೆ ತಿಳಿಸಿದೆ.

Vijaya Karnataka 23 Jan 2019, 5:00 am
ಚಿಕ್ಕಮಗಳೂರು : ನಗರದ ಹಿರೇಮಗಳೂರು ಶ್ರೀ ಪ್ರಭುಲಿಂಗಸ್ವಾಮಿ ಪ್ರೌಢಶಾಲೆಯಲ್ಲಿ ಫೆ.2, 3 ರಂದು ಜಿಲ್ಲಾ ಯುವ ತರಬೇತಿ ಮತ್ತು ಕಾರ್ಯಾಗಾರ , ಜಿಲ್ಲಾ ಮಟ್ಟದ ಯುವಜನ ಮೇಳ ಏರ್ಪಡಿಸಲಾಗಿದೆ ಎಂದು ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಪ್ರಕಟಣೆ ತಿಳಿಸಿದೆ.
Vijaya Karnataka Web district level youth fair from feb 2
ಫೆ.2 ರಿಂದ ಜಿಲ್ಲಾಮಟ್ಟದ ಯುವಜನ ಮೇಳ


ಜಿಲ್ಲಾಡಳಿತ, ಜಿಲ್ಲಾಪಂಚಾಯಿತಿ, ನವಚೇತನ ಯುವಕ ಸಂಘದ ಆಶ್ರಯದಲ್ಲಿ ಕಾರ್ಯಕ್ರಮ ಸಂಘಟಿಸಲಾಗಿದೆ. ಜನಪದ ಕಲಾ ಪ್ರಾಕಾರಗಳಿಗೆ ಆದ್ಯತೆ ನೀಡುವ ಯುವ ತರಬೇತಿ ಕಾರ್ಯಾಗಾರ ಹಾಗೂ ಜಿಲ್ಲಾ ಯುವಜನಮೇಳದಲ್ಲಿ ಆಸಕ್ತ ಯುವಜನರು ನೇರವಾಗಿ ಸ್ಪರ್ಧಿಸಬಹುದಾಗಿದೆ. ಭಾಗವಹಿಸಲಿಚ್ಚಿಸುವ 15-30ರ ವಯೋಮಿತಿಯ ಯುವಜನರು ಫೆ.1 ರಂದು ಬೆಳಗ್ಗೆ 10 ಗಂಟೆಯೊಳಗೆ ಶ್ರೀ ಪ್ರಭುಲಿಂಗಸ್ವಾಮಿ ಪ್ರೌಢಶಾಲೆಯಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು.

ವಿಜೇತ ಸ್ಪರ್ಧಿಗಳು ತುಮಕೂರು ಜಿಲ್ಲೆಯಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಯುವಜನಮೇಳದಲ್ಲಿ ಭಾಗವಹಿಸುವ ಅವಕಾಶ ಪಡೆಯುತ್ತಾರೆ. ಜತೆಗೆ ವೈಯಕ್ತಿಕ ಸ್ಪರ್ಧೆ ಹಾಗೂ ಗುಂಪು ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ನಗದು ಬಹುಮಾನ ನೀಡಲಾಗುವುದು. ವೈಯಕ್ತಿಕ ಸ್ಪರ್ಧೆ-ಪ್ರಥಮ 1500 ರೂ.,ದ್ವಿತೀಯ 1 ಸಾವಿರ ರೂ., ತೃತೀಯ 750 ರೂ, ಗುಂಪು ಸ್ಪರ್ಧೆ- ಪ್ರಥಮ 4,500 ರೂ., ದ್ವಿತೀಯ 2,500 ರೂ. ಹಾಗೂ ಭಾಗವಹಿಸುವ ಎಲ್ಲ ಯುವಸ್ಪರ್ಧಿಗಳಿಗೆ ಅವರ ತಾಲೂಕು ಕೇಂದ್ರದಿಂದ ಚಿಕ್ಕಮಗಳೂರಿನವರೆಗಿನ ಪ್ರಯಾಣ ಭತ್ಯೆ ನೀಡಲಾಗುವುದು. ಆಸಕ್ತ ಸ್ಪರ್ಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲಾ ಯುವ ತರಬೇತಿ ಕಾರ್ಯಾಗಾರ ಹಾಗೂ ಜಿಲ್ಲಾ ಯುವಜನಮೇಳದಲ್ಲಿ ಭಾಗವಹಿಸಲು ಇಲಾಖೆಯ ಸಹಾಯಕ ನಿರ್ದೇಶಕರು ಮನವಿ ಮಾಡಿದ್ದಾರೆ

ಭಾವಗೀತೆ - ಯುವಕ, ಯುವತಿಯರಿಗೆ ವೈಯಕ್ತಿಕ ಅವಧಿ 3 ನಿಮಿಷ, ಯುವಕ, ಯುವತಿಯರಿಗೆ ಲಾವಣಿ -ವೈಯಕ್ತಿಕ 4 ನಿಮಿಷ, ರಂಗಗೀತೆ -ಯುವಕ, ಯುವತಿಯರಿಗೆ ವೈಯಕ್ತಿಕ 3 ನಿಮಿಷ, ಏಕಪಾತ್ರಾಭಿನಯ -ಯುವಕ, ಯುವತಿಯರಿಗೆ ವೈಯಕ್ತಿಕ 5 ನಿಮಿಷ, ಗೀಗೀ ಪದಗಳು -ಯುವಕ, ಯುವತಿಯರಿಗೆ 5 ಜನ, 4 ನಿಮಿಷ, ಭಜನೆ -ಯುವ, ಯುವತಿಯರು 8 ಜನ, 7 ನಿಮಿಷ, ಜನಪದ ಗೀತೆ -ಯುವಕ ಯುವತಿಯರು 6 ಜನ, 4 ನಿಮಿಷ, ಕೋಲಾಟ- ಯುವಕ, ಯುವತಿಯರು 12 ಜನ, 6 ನಿಮಿಷ, ಜಾನಪದ ನೃತ್ಯ -ಯುವಕ , ಯುವತಿಯರಿಗೆ 12 ಜನ, 10 ನಿಮಿಷ, ಜೋಳ, ರಾಗಿ ಬೀಸುವ ಪದ -ಯುವತಿಯರಿಗೆ ಮಾತ್ರ 4 ಜನ, 5 ನಿಮಿಷ, ಸೋಬಾನೆ ಪದಗಳು -ಯುವತಿಯರಿಗೆ ಮಾತ್ರ 4 ಜನ, 5 ನಿಮಿಷ, ವೀರಗಾಸೆ -ಯುವಕರಿಗೆ ಮಾತ್ರ 12 ಜನ , 10ನಿಮಿಷ, ಡೊಳ್ಳು ಕುಣಿತ -ಯುವಕರಿಗೆ ಮಾತ್ರ 12 ಜನ, 10 ನಿಮಿಷ, ದೊಡ್ಡಾಟ -ಯುವಕರಿಗೆ ಮಾತ್ರ 15 ಜನ ,45 ನಿಮಿಷ, ಸಣ್ಣಾಟ- ಯುವಕರಿಗೆ ಮಾತ್ರ 12 ಜನ, 45 ನಿಮಿಷ, ಯಕ್ಷಗಾನ- ಯುವಕರಿಗೆ ಮಾತ್ರ 12 ಜನ, 45 ನಿಮಿಷ, ಚರ್ಮವಾದ್ಯಮೇಳ -ಯುವಕರಿಗೆ ಮಾತ್ರ 6 ಜನ, 10 ನಿಮಿಷ,

ಹೆಚ್ಚಿನ ವಿವರಗಳಿಗೆ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಶತಮಾನೋತ್ಸವ ಕ್ರೀಡಾಂಗಣ, ಜ್ಯೋತಿನಗರ,ಇವರನ್ನು ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ: 08262-220324 ಮೂಲಕ ಕಚೇರಿ ವೇಳೆಯಲ್ಲಿ ಅಥವಾ ಅಧ್ಯಕ್ಷ ರು, ನವಚೇತನ ಯುವಕ ಸಂಘ (ರಿ.), ಹಿರೇಮಗಳೂರು ಇವರನ್ನು (ಮೊ.ನಂ:8123827238, 9980144277) ಸಂಪರ್ಕಿಸಲು ಕೋರಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ