ಆ್ಯಪ್ನಗರ

ವಿದ್ಯಾರ್ಥಿಗಳೇ ಮೊಬೈಲ್‌ನ ದಾಸರಾಗಬೇಡಿ

ಕೈಗಾರಿಕಾ ತರಬೇತಿ ಸಂಸ್ಥೆಗಳಿಂದ ಪಡೆದ ತರಬೇತಿಯನ್ನು ಸ್ವ ಉದ್ಯೋಗ ಆರಂಭಿಸುವ ಮೂಲಕ ಸಾರ್ಥಕಗಳಿಸಿಕೊಳ್ಳಬೇಕು ಎಂದು ಪಟ್ಟಣದ ವನ ಶ್ರೀ ಕಂಪನಿಯ ಉದ್ಯಮಿ ಬಿ.ವಿ.ದೀಪಕ್‌ಭಟ್‌ ಹೇಳಿದರು.

Vijaya Karnataka 13 Jul 2019, 5:00 am
ಬಾಳೆಹೊನ್ನೂರು : ಕೈಗಾರಿಕಾ ತರಬೇತಿ ಸಂಸ್ಥೆಗಳಿಂದ ಪಡೆದ ತರಬೇತಿಯನ್ನು ಸ್ವ ಉದ್ಯೋಗ ಆರಂಭಿಸುವ ಮೂಲಕ ಸಾರ್ಥಕಗಳಿಸಿಕೊಳ್ಳಬೇಕು ಎಂದು ಪಟ್ಟಣದ ವನ ಶ್ರೀ ಕಂಪನಿಯ ಉದ್ಯಮಿ ಬಿ.ವಿ.ದೀಪಕ್‌ಭಟ್‌ ಹೇಳಿದರು.
Vijaya Karnataka Web CKM-12BHR1


ಪಟ್ಟಣದ ಶ್ರೀ ಜಗದ್ಗುರು ರೇಣುಕಾಚಾರ್ಯ ಕೈಗಾರಿಕಾ ತರಬೇತಿ ಸಂಸ್ಥೆಯ ರಜತ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 2018-19ನೇ ಸಾಲಿನಲ್ಲಿ ಉತ್ತೀರ್ಣರಾದ ತರಬೇತಿದಾರರಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು. ಜೀವನದಲ್ಲಿ ಸಾಧನೆ ಮಾಡುವ ಛಲವಿರಬೇಕು, ಅಲ್ಲದೆ ಕೈಗಾರಿಕೆ ತರಬೇತಿ ಪಡೆದು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಉದ್ಯಮಿಗಳಾಗಿ ಹಲವಾರು ಜನರಿಗೆ ಉದ್ಯೋಗ ನೀಡುವಂತವರಾಗಬೇಕು ಎಂದು ಸಲಹೆ ನೀಡಿದರು.

ಐಟಿಐ ಕಾಲೇಜಿನ ಉಪನ್ಯಾಸಕ ಜಿ.ಟಿ.ರುದ್ರಸ್ವಾಮಿ ಮಾತನಾಡಿ, ವಿದ್ಯಾರ್ಥಿಗಳು ಮೊಬೈಲ್‌ನ ದಾಸರಾಗದೆ ಕೈಗಾರಿಕೆಯಲ್ಲಿ ಉತ್ತಮ ತರಬೇತಿ ಪಡೆದು ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಬೇಕು ಎಂದರು.

ಪ್ರಾಂಶುಪಾಲ ಎಚ್‌.ಆರ್‌.ಆನಂದ್‌ , ಚುಸಾಪ ಜಿಲ್ಲಾಧ್ಯಕ್ಷ ಯಜ್ಞಪುರುಷಭಟ್‌ ಮಾತನಾಡಿದರು. ಶ್ರೀ ರಂಭಾಪುರಿ ಪೀಠದ ಲೆಕ್ಕಾಧಿಕಾರಿ ಸಂಕಪ್ಪ ಅಧ್ಯಕ್ಷ ತೆ ವಹಿಸಿದ್ದರು.ಐಟಿಐ ಕಾಲೇಜಿನ ಮಲ್ಲಿಕಾರ್ಜುನ್‌, ಉಪನ್ಯಾಸಕ ಶ್ರೀನಿವಾಸ್‌, ತಾಲೂಕು ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಜಗದೀಶ್‌, ಉಪಾಧ್ಯಕ್ಷ ಪ್ರವೀಣ್‌, ಶ್ರೀ ರಂಭಾಪುರಿ ಪೀಠದ ಚನ್ನವೀರಯ್ಯ ಚಿಗರೀಮಠ್‌ ಪಾಲ್ಗೊಂಡಿದ್ದರು. ಸುಮಾರು 30 ತರಬೇತುದಾರರಿಗೆ ತರಬೇತಿ ಪ್ರಮಾಣ ಪತ್ರ ವಿತರಿಸಲಾಯಿತು. ಉಪನ್ಯಾಸಕ ಚಂದ್ರಶೇಖರ್‌ ನಿರೂಪಿಸಿ, ಜಿ.ಟಿ.ರುದ್ರಸ್ವಾಮಿ ಸ್ವಾಗತಿಸಿ, ಉಪನ್ಯಾಸಕ ಅಶೋಕ್‌ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ