ಆ್ಯಪ್ನಗರ

ನೀತಿ ಸಂಹಿತೆ ಉಲ್ಲಂಘಿಸಬೇಡಿ: ಮಂಗಲ್‌ದಾಸ್‌

ಹಾಸನ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರುವ ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಏ.18 ರಂದು ಚುನಾವಣೆ ನಡೆಯಲಿದ್ದು, ನೀತಿ ಸಂಹಿತೆ ಉಲ್ಲಂಘಿಸಬಾರದು ಎಂದು ಸಹಾಯಕ ಚುನಾವಣಾಧಿಕಾರಿ ಮಂಗಲ್‌ದಾಸ್‌ ರಾಜಕೀಯ ಪಕ್ಷಗಳ ಮುಖಂಡರಿಗೆ ಸೂಚಿಸಿದರು.

Vijaya Karnataka 20 Mar 2019, 5:00 am
ಕಡೂರು: ಹಾಸನ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರುವ ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಏ.18 ರಂದು ಚುನಾವಣೆ ನಡೆಯಲಿದ್ದು, ನೀತಿ ಸಂಹಿತೆ ಉಲ್ಲಂಘಿಸಬಾರದು ಎಂದು ಸಹಾಯಕ ಚುನಾವಣಾಧಿಕಾರಿ ಮಂಗಲ್‌ದಾಸ್‌ ರಾಜಕೀಯ ಪಕ್ಷಗಳ ಮುಖಂಡರಿಗೆ ಸೂಚಿಸಿದರು.
Vijaya Karnataka Web CKM-19KDR2


ತಾಲೂಕು ಕಚೇರಿಯ ಸಭಾಂಗಣದಲ್ಲಿ ತೆರೆದಿರುವ ಚುನಾವಣಾ ಕಚೇರಿಯಲ್ಲಿ ಮಂಗಳವಾರ ವಿವಿಧ ರಾಜಕೀಯ ಪಕ್ಷ ಗಳ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.

ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 1,99,822 ಮತದಾರರಿದ್ದು ಇವರಲ್ಲಿ 1,00,732 ಪುರುಷರು, 99,093 ಮಹಿಳೆಯರು ಮತ್ತು ಇತರೆ 7 ಜನ ಮತದಾರರಿದ್ದಾರೆ. 250 ಮತಗಟ್ಟೆ ತೆರೆಯಲಾಗಿದೆ. 29 ಸೂಕ್ಷ ್ಮ ಮತಘಟ್ಟೆಗಳಿದ್ದು, 20 ಮೈಕ್ರೋ ಅಬ್‌ಸರ್ವರ್‌, 4 ಸಂಪೂರ್ಣ ವಿಡಿಯೋ ಮತಗಟ್ಟೆ, 5 ವೆಬ್‌ ಡಿಸ್‌ಪ್ಲೇ ಮತಗಟ್ಟೆ, 78 ವಿಭಿನ್ನತೆಯ ಮತಗಟ್ಟೆಗಳು, ಉಳಿದಂತೆ 172 ಮತಗಟ್ಟೆಗಳು ಸಾಮಾನ್ಯವಾಗಿರುತ್ತವೆ. 26 ಮಂದಿ ಸೆಕ್ಟರ್‌ ಆಫೀಸರ್‌, ಓರ್ವ ತಾಲೂಕು ಎಂಸಿಸಿ ನೋಡಲ್‌ ಆಫೀಸರ್‌, ಓರ್ವ ಅಕೌಂಟ್‌ ಟೀಮ್‌ ಆಫೀಸರ್‌, 3 ವಿಡೀಯೋ ತಂಡ, 4 ಫ್ಲೈಯಿಂಗ್‌ ಸ್ಕ್ವಾಡ್‌ ಟೀಂ ರಚನೆ ಮಾಡಿದ್ದು ಈಗಾಗಲೇ ಕಾರ್ಯಪ್ರವೃತ್ತವಾಗಿವೆ.ಹೊರ ಜಿಲ್ಲೆಗಳಿಂದ ಬರುವ ವಾಹನಗಳ ತಪಾಸಣೆಗೆ ತಾಲೂಕಿನ ಬಸವನಳ್ಳಿ ದಿಬ್ಬ, ಪಂಚನಹಳ್ಳಿ, ಅಹಮದ್‌ನಗರ ಗಡಿ(ಹೊಸದುರ್ಗ ಮಾರ್ಗ) ದೇವರಹಳ್ಳಿ, ಮರವಂಜಿ ಮತ್ತು ಚೌಳಹಿರಿಯೂರಿನಲ್ಲಿ ಎಸ್‌ಎಸ್‌ಟಿ ಟೀಂ ಕಾರ್ಯನಿರ್ವಹಿಸುತ್ತಿದೆ.ರಾತ್ರಿ 10 ಗಂಟೆ ನಂತರ ಯಾವುದೇ ಕಾರ್ಯಕ್ರಮ ನಡೆಸುವಂತಿಲ್ಲ. ಆಸ್ಪತ್ರೆ, ನ್ಯಾಯಾಲಯ, ಶಾಲಾ ಕಾಲೇಜುಗಳ ಹತ್ತಿರ ಧ್ವನಿವಧÜರ್‍ಕ ಸ್ಥಗಿತಗೊಳಿಸಬೇಕು ಎಂದು ಸೂಚಿಸಿದರು.

ಕೋಮುಭಾವನೆ ಕೆರಳಿಸುವಂತಹ ಪ್ರಚೋಧನಕಾರಿ ಹೇಳಿಕೆ ನೀಡುವುದು ಹಾಗೂ ಭಾಷಣ ಮಾಡುವುದು ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ. ಅನುಮತಿ ನೀಡಿದ ಸ್ಥಳ, ದಿನಾಂಕವನ್ನು ಬದಲಾವಣೆ ಮಾಡುವಂತಿಲ್ಲ. ಚುನಾವಣೆ ಖರ್ಚುವೆಚ್ಚಗಳನ್ನು ಆಯಾಯ ದಿನವೇ ಲೆಕ್ಕಪತ್ರ ಪರಿಶೋಧನ ಸಮಿತಿಗೆ ಸಲ್ಲಿಸಬೇಕು ಎಂದು ರಾಜಕೀಯ ಮುಖಂಡರಿಗೆ ಮಾಹಿತಿ ನೀಡಿದರು. ತಹಶೀಲ್ದಾರ್‌ ಉಮೇಶ್‌, ನೋಡಲ್‌ ಅಧಿಕಾರಿ ಕೆ. ಸಹನಾ, ಬಿಇಒ ರಂಗನಾಥಸ್ವಾಮಿ, ಮುಖ್ಯಾಧಿಕಾರಿ ಮಂಜಪ್ಪ, ಕಿರಣ್‌ಕುಮಾರ್‌ ಸಿಬ್ಬಂದಿವರ್ಗ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ