ಆ್ಯಪ್ನಗರ

ಕಳಸ ಆಸ್ಪತ್ರೆಗೆ ವೈದ್ಯರ ಕೊರತೆ ಖಂಡಿಸಿ ಪ್ರತಿಭಟನೆ

ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಮತ್ತು ಸಿಬ್ಬಂದಿ ಕೊರತೆಯನ್ನು ಕೂಡಲೇ ನೀಗಿಸುವಂತೆ ಒತ್ತಾಯಿಸಿ ಭಾರತೀಯ ಕಮ್ಯೂನಿಷ್ಟ್‌ ಪಕ್ಷ ದ ಕಾರ್ಯಕರ್ತರು ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದರು.

Vijaya Karnataka 24 Sep 2018, 5:00 am
ಕಳಸ : ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಮತ್ತು ಸಿಬ್ಬಂದಿ ಕೊರತೆಯನ್ನು ಕೂಡಲೇ ನೀಗಿಸುವಂತೆ ಒತ್ತಾಯಿಸಿ ಭಾರತೀಯ ಕಮ್ಯೂನಿಷ್ಟ್‌ ಪಕ್ಷ ದ ಕಾರ್ಯಕರ್ತರು ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದರು.
Vijaya Karnataka Web CKM-23kls1


ಪ್ರತಿಭಟನಾಕಾರರು ಪಟ್ಟಣದ ಮುಖ್ಯ ರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ನಂತರ ಸರಕಾರಿ ಆರೋಗ್ಯ ಕೇಂದ್ರಕ್ಕೆ ಮುತ್ತಿಗೆ ಹಾಕಿ ಘೋಷಣೆ ಕೂಗಿದರು.

ನಂತರ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಿಪಿಐ ಮುಖಂಡ ಗೋಪಾಲ ಎನ್‌ ಶೆಟ್ಟಿ, ಕಳಸ ಪಟ್ಟಣದಲ್ಲಿ ಸುಸಜ್ಜಿತ ಆರೋಗ್ಯ ಕೇಂದ್ರವಿದೆ. ಆದರೆ ಅದರಲ್ಲಿ ಕಾರ್ಯನಿರ್ವಹಿಸಬೇಕಾದ ವೈದ್ಯರು ಮತ್ತು ಸಿಬ್ಬಂದಿಗಳ ಕೊರತೆ ಇದೆ. ಈ ಬಗ್ಗೆ ಒಂದು ವರ್ಷದ ಹಿಂದೆ ನಮ್ಮ ಸಂಘಟನೆಯಿಂದ ಪ್ರತಿಭಟನೆ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಜಿಲ್ಲಾ ವೈದ್ಯರು ಸೂಕ್ತ ವೈದ್ಯರು ಮತ್ತು ಸಿಬ್ಬಂದಿಗಳ ನೇಮಕ ಮಾಡುವ ಭರವಸೆ ನೀಡಿದ್ದರು. ನಂತರದಲ್ಲಿ ಇಲ್ಲಿರುವ ಎಲ್ಲ ವೈದ್ಯರು ಮತ್ತು ಸಿಬ್ಬಂದಿಗಳನ್ನು ಇಲ್ಲಿಂದ ತೆರವು ಮಾಡಿದ್ದೇ ಹೋರತು ನೇಮಕ ಮಾಡಲಿಲ್ಲ.

ಜಿಲ್ಲೆಯ ಯಾವುದೇ ಭಾಗದ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇಲ್ಲ. ಆದರೆ ತಾಲೂಕು ಕೇಂದ್ರದಿಂದ 100 ಕಿ.ಮೀ. ದೂರ ಇರುವ ಕಳಸ ಆಸ್ಪತ್ರೆಗೆ ಸೂಕ್ತವಾದ ವೈದ್ಯರು ಮತ್ತು ಸಿಬ್ಬಂದಿಗಳ ನೇಮಕ ಮಾಡದೆ ಇರುವುದು ಜಿಲ್ಲಾ ವೈದ್ಯಾದಿಕಾರಿ ಮತ್ತು ಈ ಭಾಗದ ಶಾಸಕರು, ಜಿಲ್ಲಾ ಪಂಚಾಯಿತಿ ಸದಸ್ಯರ ನಿರ್ಲಕ್ಷ ್ಯ ಎದ್ದು ಕಾಣುತ್ತಿದೆ ಎಂದು ಹೇಳಿದರು.

ಮುಖಂಡ ಲಕ್ಷ ್ಮಣಾಚಾರ್‌ ಮಾತನಾಡಿ, ಇಲ್ಲಿ ತಾತ್ಕಾಲಿಕ ವೈದ್ಯರಾಗಿ ತಾಲೂಕು ವೈದ್ಯರನ್ನು ನೇಮಕ ಮಾಡಿದರೂ, ಅವರೂ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿಲ್ಲ. ಇಲ್ಲಿ ಹೆರಿಗೆ, ಅಪಘಾತ, ಶವ ಪರೀಕ್ಷೆ ಮಾಡಲು ಸಾಕಷ್ಟು ತೊಂದರೆ ಅನುಭವಿಸಬೇಕಾಗಿದೆ. ಬಡವರು ಸಣ್ಣ ಚಿಕಿತ್ಸೆಗಾಗಿಯೂ ಖಾಸಾಗಿ ಆಸ್ಪತ್ರೆಗೆ ಹೋಗಿ ನಂತರ ಜೀವಮಾನವಿಡೀ ಆಸ್ಪತ್ರೆಯ ಖರ್ಚಿಗೆ ಮಾಡಿದ ಸಾಲವನ್ನು ತೀರಿಸಬೇಕಾದ ಪರಿಸ್ಥಿತಿಯಾಗಿದೆ. ಆಂಬ್ಯುಲೆನ್ಸ್‌, 108 ವಾಹನಗಳು ಇದ್ದರೂ ಕಾರ್ಯ ನಿರ್ವಹಿಸದೆ ಹದಿನೈದು ದಿನಗಳೇ ಕಳೆದಿವೆ. ನಮ್ಮ ಜನಪ್ರತಿನಿದಿಗಳಿಗೆ ಆರೋಗ್ಯ ಸೇವೆಯನ್ನು ನಿಭಾಯಿಸಲು ಮನಸ್ಸಿಲ್ಲ, ತಮ್ಮ ಕರ್ತವ್ಯವನ್ನು ಜನರ ಹಿತಾಸಕ್ತಿಗೆ ತಕ್ಕಂತೆ ಮಾಡುತ್ತಿಲ್ಲ. ನಮ್ಮ ಪ್ರತಿಭಟನೆ ಇವತ್ತು ಒಂದು ದಿನಕ್ಕೆ ಸೀಮಿತವಾಗದೆ ನಮ್ಮ ಬೇಡಿಕೆ ಈಡೇರುವ ವರೆಗೂ ಮುಂದುವರಿಯಲಿದೆ ಎಂದು ತಿಳಿದರು.
ಪ್ರತಿಭಟನಾಕಾರರು ಆಸ್ಪತ್ರೆ ಮುಂಭಾಗ ಟೆಂಟ್‌ ಹಾಕಿ ಕುಳಿತಿದ್ದು ಪ್ರತಿಭಟನೆಯನ್ನು ಸೋಮವಾರಕ್ಕೂ ಮುಂದುವರಿಸಲು ನಿರ್ಧರಿಸಿದ್ದಾರೆ. ಈ ಸಂದರ್ಭದಲ್ಲಿ ಸಿಪಿಐ ಮುಖಂಡರಾದ ಸುಂಕಸಾಲೆ ರವಿ, ಹರೀಶ್‌, ಪೂವಯ್ಯ, ಸುಂದರ, ಲೋಕೇಶ್‌, ವಜೀರ್‌ ಅಹಮ್ಮದ್‌, ಅಣ್ಣಪ್ಪ, ಮಂಜುನಾಥ್‌, ಜಯಂತಿ, ಪ್ರೇಮ, ಅಬ್ದುಲ್‌ ರಝಾಕ್‌ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ