ಆ್ಯಪ್ನಗರ

ಸ್ವಾಸ್ಥ್ಯ ಸಮಾಜ ಕ್ಕೆ ವೈದ್ಯರ ಪಾತ್ರ ಹಿರಿದು

ಸ್ವಾಸ್ಥ್ಯಸಮಾಜ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸುವ ವೈದ್ಯರನ್ನು ನಾರಾಯಣ-ಹರಿ ಎಂದು ಸಮಾಜ ಆದರಿಸುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ವೈದ್ಯರ ಮೇಲೆ ದಬಾವಣೆಯಂತಹ ಪ್ರಕರಣಗಳು ಆತಂಕಕಾರಿ ಸಂಗತಿ ಎಂದು ಐಎಂಎ ಚಿಕ್ಕಮಗಳೂರು ಘಟಕದ ಅಧ್ಯಕ್ಷ ಡಾ.ಡಿ.ಪಿ.ಮೋಹನ್‌ ಹೇಳಿದರು.

Vijaya Karnataka 11 Jul 2019, 5:00 am
ಚಿಕ್ಕಮಗಳೂರು : ಸ್ವಾಸ್ಥ್ಯಸಮಾಜ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸುವ ವೈದ್ಯರನ್ನು ನಾರಾಯಣ-ಹರಿ ಎಂದು ಸಮಾಜ ಆದರಿಸುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ವೈದ್ಯರ ಮೇಲೆ ದಬಾವಣೆಯಂತಹ ಪ್ರಕರಣಗಳು ಆತಂಕಕಾರಿ ಸಂಗತಿ ಎಂದು ಐಎಂಎ ಚಿಕ್ಕಮಗಳೂರು ಘಟಕದ ಅಧ್ಯಕ್ಷ ಡಾ.ಡಿ.ಪಿ.ಮೋಹನ್‌ ಹೇಳಿದರು.
Vijaya Karnataka Web CKM-9RUDRAP1


ನಗರದ ದಂಟರಮಕ್ಕಿ ಬಡಾವಣೆಯ ಐಎಂಎ ಭವನದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ 'ವೈದ್ಯರ ದಿನಾಚರಣೆ' ಅಧ್ಯಕ್ಷ ತೆ ವಹಿಸಿ ಅವರು ಮಾತನಾಡಿದರು. ದೇಶದ ಜನಸಂಖ್ಯೆಗೆ ಹೋಲಿಸಿದರೆ ವೈದ್ಯರ ಪ್ರಮಾಣ ಕಡಿಮೆ. ಬಹುತೇಕ ಸಂದರ್ಭ ವೈದ್ಯರು ಒತ್ತಡದಲ್ಲಿ ಕಾರ‍್ಯನಿರ್ವಹಿಸಬೇಕಾಗುತ್ತದೆ. ಕಾರ‍್ಯಭಾರದ ಸ್ಥಿತಿಯಲ್ಲಿ ಕೆಲವುಬಾರಿ ನಿರ್ಣಯ ಕೈಗೊಳ್ಳುವುದು ವ್ಯತ್ಯಾಸವಾಗುವ ಸಂಭವ ಸಹಜವೇ. ಸಂಕಷ್ಟ-ನೋವು ನಿವಾರಣೆ ಅಥವಾ ಕಡಿಮೆ ಮಾಡುವುದು ವೈದ್ಯರ ಆದ್ಯತೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದರು.

ಐಎಂಎ ರಾಜ್ಯಸಂಚಾಲಕ ಡಾ.ವಿಜಯಕುಮಾರ್‌ ಮಾತನಾಡಿ, ಭಾರತದ ವೈದ್ಯಕೀಯ ರಂಗದಲ್ಲಿ ಮಹತ್ವದ ಸೇವೆಸಲ್ಲಿಸಿರುವ ಪಶ್ಚಿಮಬಂಗಾಳದ ಡಾ.ಬಿ.ಸಿ.ರಾಯ್‌ 1882ರ ಜುಲೈ 1ರಂದು ಜನಿಸಿದ್ದು, ಆ ದಿನವನ್ನು ರಾಷ್ಟ್ರಾದ್ಯಂತ ವೈದ್ಯರದಿನವಾಗಿ ಆಚರಿಸಲಾಗುತ್ತಿದೆ ಎಂದರು.

ನಗರದ ಹಿರಿಯವೈದ್ಯರಾದ ಡಾ.ಕೆ.ಜಿ.ಶ್ರೀನಿವಾಸ್‌ ಮತ್ತು ಡಾ.ಶಿವಶಂಕರ್‌ ದಂಪತಿಯನ್ನು ಸನ್ಮಾನಿಸಲಾಯಿತು. ಮಕ್ಕಳತಜ್ಞರಾದ ಡಾ.ಜೆ.ಪಿ.ಕೃಷ್ಣೇಗೌಡ ಮತ್ತು ಡಾ.ರಾಜು ಅಭಿನಂದನಾಭಾಷಣ ಮಾಡಿದರು. ಐಎಂಎ ಖಜಾಂಚಿ ಡಾ.ರವಿಪ್ರಕಾಶ್‌ ಸ್ವಾಗತಿಸಿ, ಕಾರ‍್ಯದರ್ಶಿ ಡಾ.ಸಂತೋಷ ನೇತಾ ವಂದಿಸಿದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಶ್ವಥ್‌ಬಾಬು, ಡಾ.ರಾಮಕೃಷ್ಣ, ಡಾ.ಸಾಲ್ಹಿಮೊಹಮ್ಮದ್‌, ಡಾ.ಮಂಜುನಾಥ್‌, ಡಾ.ಎಚ್‌.ಎನ್‌.ಸ್ವಾಮಿ, ಡಾ.ಅಡ್ಯಂತಾಯ, ಡಾ.ಶುಭಾವಿಜಯ್‌, ಡಾ.ವಿನಯ್‌, ಡಾ.ಪ್ಯಾಟ್ರಿಕ್‌, ಡಾ.ನಂದಾ, ಡಾ.ಸುನೀತಾಶಶಿಧರ್‌, ಡಾ.ಸುಂದರೇಶ್‌ ಹಾಜರಿದ್ದರು. ಡಾ.ಗೀತಾವೆಂಕಟೇಶ್‌ ಸಾರಥ್ಯದಲ್ಲಿ ವೈದ್ಯರು ಹಾಗೂ ಅವರ ಕುಟುಂಬವರ್ಗದಿಂದ ನೃತ್ಯ, ಗಾಯನ, ವಾದನ ಸೇರಿದಂತೆ ಸಾಂಸ್ಕೃತಿಕ ಕಾರ‍್ಯಕ್ರಮ ಗಮನಸೆಳೆದವು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ