ಆ್ಯಪ್ನಗರ

ಶಾಲೆಗಳ ಅಭಿವೃದ್ಧಿಗೆ ದಾನಿಗಳು ಮುಂದಾಗಲಿ

ದಕ್ಷಿಣ ಕನ್ನಡ ಜಿಲ್ಲೆಯ ಮಾದರಿಯಲ್ಲಿ ಸರಕಾರಿ ಶಾಲೆಗಳ ಅಭಿವೃದ್ಧಿಗೆ ದಾನಿಗಳು ಮುಂದಾಗಬೇಕು ಎಂದು ಲಯನ್ಸ್‌ ಜಿಲ್ಲಾ ಮಾಜಿ ಗೌರ್ನರ್‌ ಎಚ್‌.ಆರ್‌.ಹರೀಶ್‌ ಮನವಿ ಮಾಡಿದರು.

Vijaya Karnataka 12 Aug 2018, 5:00 am
ಚಿಕ್ಕಮಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಾದರಿಯಲ್ಲಿ ಸರಕಾರಿ ಶಾಲೆಗಳ ಅಭಿವೃದ್ಧಿಗೆ ದಾನಿಗಳು ಮುಂದಾಗಬೇಕು ಎಂದು ಲಯನ್ಸ್‌ ಜಿಲ್ಲಾ ಮಾಜಿ ಗೌರ್ನರ್‌ ಎಚ್‌.ಆರ್‌.ಹರೀಶ್‌ ಮನವಿ ಮಾಡಿದರು.
Vijaya Karnataka Web CKM-11ARAGAP2


ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನಿಂದ ತಾಲೂಕಿನ ಮಳಲೂರಿನ ಶ್ರೀದೇವಿ ಪ್ರೌಢಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಜುಂಜಮ್ಮ ಕೆ.ಎಸ್‌.ರುದ್ರೇಗೌಡ, ಪ್ರೇಮಾ ಎಂ.ಜೆ.ಕೋದಂಡರಾಮಚಂದ್ರ ಶೆಟ್ಟಿ ದತ್ತಿ ಉಪನ್ಯಾಸ ಕಾರ‍್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಲಯನ್ಸ್‌ ಜಿಲ್ಲಾ ಗೌರ್ನರ್‌ ಆದ ಅವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಹಳಷ್ಟು ಶಾಲೆಗಳಿಗೆ ಭೇಟಿ ನೀಡಿದ್ದೇನೆ. ಅಲ್ಲಿನ ಗ್ರಾಮಗಳ ಜನ ಮತ್ತು ದಾನಿಗಳು ಖಾಲಿ ಶಾಲೆಗಳಲ್ಲಿರುವಂತೆ ಎಲ್ಲ ಮೂಲ ಸೌಲಭ್ಯಗಳನ್ನೂ ಸರಕಾರಿ ಶಾಲೆಗೆ ಒದಗಿಸಿದ್ದಾರೆ. ಎಲ್ಲ ಶಾಲೆಗಳಲ್ಲೂ ಹಳೆ ವಿದ್ಯಾರ್ಥಿ ಸಂಘಗಳನ್ನು ಸ್ಥಾಪಿಸಲಾಗಿದೆ. ಹಳೆ ವಿದ್ಯಾರ್ಥಿಗಳು ತಾವು ಓದಿದ ಶಾಲೆಯ ಅಭಿವೃದ್ಧಿಗೆ ದುಡಿಯುತ್ತಿದ್ದಾರೆ ಎಂದರು.

ಡಾ.ಜೆಪಿ.ಕೃಷ್ಣೇಗೌಡ ಮತ್ತು ಸಾಹಿತಿ ಚಂದ್ರಯ್ಯನಾಯ್ಡು ಬದುಕು-ಬರಹದ ಬಗ್ಗೆ ವಾಣಿನಾಯ್ಡು ಉಪನ್ಯಾಸ ನೀಡಿ, ವೈದ್ಯರಾಗಿದ್ದ ಡಾ.ಜೆ.ಪಿ.ಕೃಷ್ಣೇಗೌಡ ಅವರನ್ನು ಜಿಲ್ಲೆಯ ಕನ್ನಡ ಸಾಹಿತ್ಯ ಕ್ಷೇತ್ರದ ಆಸ್ತಿಯನ್ನಾಗಿ ಮಾಡಿದವರು ಚಂದ್ರಯ್ಯನಾಯ್ಡು ಎಂದು ಹೇಳಿದರು.

ಹಳಗನ್ನಡ ಅರ್ಥೈಸುವಲ್ಲಿ ಗಮಕದ ಪಾತ್ರದ ಬಗ್ಗೆ ಗಮಕಿ ಎಸ್‌.ಎಲ್‌.ರಾಧಾಕೃಷ್ಣ ಉಪನ್ಯಾಸ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ಕುಂದೂರು ಅಶೋಕ್‌ ಮಾತನಾಡಿದರು. ಅಂಬಳೆ ಹೋಬಳಿ ಕಸಾಪ ಅಧ್ಯಕ್ಷ ಕುಮಾರ್‌ ಕಂಬಿಹಳ್ಳಿ ಅವರನ್ನು ಗೌರವಿಸಲಾಯಿತು.

ತಾಲೂಕು ಕಸಾಪ ಅಧ್ಯಕ್ಷ ಹಿರೇಮಗಳೂರು ಪುಟ್ಟಸ್ವಾಮಿ, ಗ್ರಾ.ಪಂ. ಅಧ್ಯಕ್ಷ ರುದ್ರೇಗೌಡ, ಮುಖ್ಯ ಶಿಕ್ಷಕ ಎಂ.ಪಿ.ಚಂದ್ರೇಗೌಡ, ನಿವೃತ್ತ ಶಿಕ್ಷಕ ಕೆ.ಆರ್‌.ದಯಾನಂದ, ರೈತ ಸಂಘದ ಮುಖಂಡ ಕೆ.ಕೆ.ಕೃಷ್ಣೇಗೌಡ, ವಾಜುವಳ್ಳಿ ರಮೇಶ್‌ ಹಾಜರಿದ್ದರು. ಜಿಲ್ಲಾ ಕಸಾಪ ಗೌರವ ಕಾರ‍್ಯದರ್ಶಿ ಡಿ.ಎಂ.ಮಂಜುನಾಥಸ್ವಾಮಿ ನಿರೂಪಿಸಿದರು. ಶಿಕ್ಷಕ ಬಸವರಾಜಪ್ಪ ಸ್ವಾಗತಿಸಿ, ಸೋಮಶೇಖರ್‌ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ