ಆ್ಯಪ್ನಗರ

ಡಾ.ರಾಜ್‌ ಮರೆಯಲಾಗದ ಮಾಣಿಕ್ಯ

ನಟಸಾರ್ವಭೌಮ ಡಾ.ರಾಜ್‌ಕುಮಾರ್‌ ಅವರು ಚಿತ್ರಗಳನ್ನು ಇಂದಿಗೂ ಕೂಡ ಇಡಿ ಸಂಸಾರದೊಂದಿಗೆ ಕುಳಿತು ನೋಡಬಹುದು ಎಂದು ಪತ್ರಕರ್ತ ಸ.ಗಿರಿಜಾಶಂಕರ್‌ ಹೇಳಿದರು.

Vijaya Karnataka 25 Apr 2019, 5:00 am
ಚಿಕ್ಕಮಗಳೂರು: ನಟಸಾರ್ವಭೌಮ ಡಾ.ರಾಜ್‌ಕುಮಾರ್‌ ಅವರು ಚಿತ್ರಗಳನ್ನು ಇಂದಿಗೂ ಕೂಡ ಇಡಿ ಸಂಸಾರದೊಂದಿಗೆ ಕುಳಿತು ನೋಡಬಹುದು ಎಂದು ಪತ್ರಕರ್ತ ಸ.ಗಿರಿಜಾಶಂಕರ್‌ ಹೇಳಿದರು.
Vijaya Karnataka Web CKM-24rudrap5


ನಗರದ ಬಸವನಹಳ್ಳಿ ರಾಜಾಸ್ಟುಡಿಯೊ ಮುಂಭಾಗ ರಾಜ್‌ಕುಮಾರ್‌ ಅಭಿಮಾನಿ ಎ.ಎನ್‌.ಮೂರ್ತಿ ಬುಧವಾರ ಏರ್ಪಡಿಸಿದ್ದ ಡಾ.ರಾಜ್‌ 90ನೇ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ರಂಗಭೂಮಿ ಮೂಲಕ ಚಿತ್ರರಂಗ ಪ್ರವೇಶಿಸಿದ ಡಾ.ರಾಜ್‌ ಅವರ ನಟನೆಯನ್ನು ರಂಗಭೂಮಿಯಲ್ಲೂ ಜನ ಮೆಚ್ಚಿಕೊಂಡಿದ್ದರು. ಬೇಡರ ಕಣ್ಣಪ್ಪ ಚಿತ್ರ ನೋಡಿದರೆ ರಾಜ್‌ ಓರ್ವ ಬೇಡನಾಗಿ ಮಾಡಿದ ಪಾತ್ರ ಅತ್ಯದ್ಭುತ. ಬೇಡ ಜನಾಂಗದವರನ್ನು ನೋಡಿದಾಗಲೆಲ್ಲಾ ರಾಜ್‌ಕುಮಾರ್‌ ನಮ್ಮ ಕಣ್ಮುಂದೆ ಬರುತ್ತಾರೆ. ಪಂಚಭಾಷ ನಟರಾಗಿ ಇನ್ನಷ್ಟು ಹೆಚ್ಚು ಹಣ ಸಂಪಾದಿಸುವ ಬಹಳಷ್ಟು ಅವಕಾಶ ಡಾ.ರಾಜ್‌ಅವರಿಗೆ ಇತ್ತು. ಆದರೆ, ಕನ್ನಡ ಚಿತ್ರವನ್ನು ಬಿಟ್ಟು ಬೇರೆ ಚಿತ್ರ ಮಾಡಲಿಲ್ಲ. ಇಂತಹ ಬದ್ಧತೆ ರಾಜ್‌ ಅವರ ಹೃದಯವಂತಿಕೆಗೆ ಸಾಕ್ಷಿ ಎಂದರು.

ಅಭಿಮಾನಿ ಎ.ಎನ್‌.ಮೂರ್ತಿ ಮಾತನಾಡಿ, ಕನ್ನಡಿಗರ ಆರಾಧ್ಯ ದೈವ ಡಾ.ರಾಜ್‌ಕುಮಾರ್‌ ಓರ್ವ ಮರೆಯಲಾಗದ ಮಾಣಿಕ್ಯ, ಚಿತ್ರರಂಗದಲ್ಲಿ ಅಣ್ಣಾವ್ರು ಎಷ್ಟು ಎತ್ತರಕ್ಕೆ ಬೆಳೆದಿದ್ದಾರೊ ಅಷ್ಟೆದೊಡ್ಡ ವ್ಯಕ್ತಿತ್ವವನ್ನು ಕಾಪಾಡಿಕೊಂಡು ಬಂದಿದ್ದರೆಂದು ಬಣ್ಣಿಸಿದರು. ಮಿಲನ್‌ ಚಿತ್ರಮಂದಿರದ ವ್ಯವಸ್ಥಾಪಕ ಶಿವಪ್ಪ, ಪತ್ರಕರ್ತ ಜಿ.ವಿ.ಚೂಡನಾಥ್‌ ಅಯ್ಯರ್‌, ಕಸಾಪ ಜಿಲ್ಲಾ ಮಾಜಿ ಅಧ್ಯಕ್ಷ ಎನ್‌.ಎಸ್‌.ಶಿವಸ್ವಾಮಿ, ನೆಹರು ಯುವ ಕೇಂದ್ರದ ನಿವೃತ್ತ ಅಧಿಕಾರಿ ಎಂ.ಎನ್‌.ಮಂಜುನಾಥರಾವ್‌, ಕಲ್ಕಟ್ಟೆ ನಾಗರಾಜ್‌ರಾವ್‌, ಕನ್ನಡಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ, ನೀಲೇಶ್‌, ಉಮ್ಮಣ್ಣ, ಗುರುವೇಶ್‌, ವಕೀಲ ಸಂಘದ ಅಧ್ಯಕ್ಷ ಎಸ್‌.ಎಸ್‌.ವೆಂಕಟೇಶ್‌, ವಕೀಲ ಜಗದೀಶ್‌, ನಾರಾಯಣಸ್ವಾಮಿ ಎಂ.ಎಸ್‌.ಉಮೇಶ್‌ಕುಮಾರ್‌, ಗಿರಿಧರ್‌ಯತೀಶ್‌, ಎ.ಎನ್‌.ದೀಪಕ್‌ ಇತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ