ಆ್ಯಪ್ನಗರ

ದತ್ತಮಾಲಾ ಅಭಿಯಾನಕ್ಕೆ ಚಾಲನೆ

ವಿಶ್ವ ಹಿಂದೂ ಪರಿಷತ್‌ ಹಾಗೂ ಭಜರಂಗದಳ ಹಮ್ಮಿಕೊಂಡಿರುವ ದತ್ತಜಯಂತಿ ಅಭಿಯಾನಕ್ಕೆ ಬುಧವಾರ ಚಾಲನೆ ನೀಡಲಾಯಿತು.

Vijaya Karnataka 13 Dec 2018, 5:00 am
ಚಿಕ್ಕಮಗಳೂರು: ವಿಶ್ವ ಹಿಂದೂ ಪರಿಷತ್‌ ಹಾಗೂ ಭಜರಂಗದಳ ಹಮ್ಮಿಕೊಂಡಿರುವ ದತ್ತಜಯಂತಿ ಅಭಿಯಾನಕ್ಕೆ ಬುಧವಾರ ಚಾಲನೆ ನೀಡಲಾಯಿತು.
Vijaya Karnataka Web drive to datamala campaign
ದತ್ತಮಾಲಾ ಅಭಿಯಾನಕ್ಕೆ ಚಾಲನೆ


ನಗರದ ಶ್ರೀ ಕಾಮದೇನು ಗಣಪತಿ ದೇವಾಲಯದಲ್ಲಿ ದತ್ತಾತ್ರೇಯ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಭಕ್ತರು ದತ್ತಮಾಲೆ ಧರಿಸಿದರು. ದೇವಾಲಯದ ಪುರೋಹಿತ ರಘುನಾಥ ಅವದಾನಿ ಅವರು ಪೂಜಾ ವಿಧಿವಿಧಾನ ನಡೆಸಿದ ಬಳಿಕ ವಿಶ್ವ ಹಿಂದೂಪರಿಷತ್‌ ಜಿಲ್ಲಾ ಕಾರ್ಯಾಧ್ಯಕ್ಷ ಶಿವಶಂಕರ್‌, ಜಿಲ್ಲಾ ಕಾರ್ಯದರ್ಶಿ ಯೋಗೀಶ್‌ ರಾಜ್‌ ಅರಸ್‌, ಭಜರಂಗದಳದ ಜಿಲ್ಲಾ ಸಂಚಾಲಕ ತುಡಕೂರು ಮಂಜು, ಪ್ರೇಮ್‌ಕಿರಣ್‌, ಶಶಿ ಆಲ್ದೂರು ಇತರರು ಧತ್ತಮಾಲೆ ಧರಿಸಿದರು. ಆನಂತರ 100ಕ್ಕೂ ಹೆಚ್ಚು ಧತ್ತ ಭಕ್ತರು ದತ್ತಮಾಲೆ ಧರಿಸಿದರು. ಪೂಜೆ ನಡೆಯುತ್ತಿದ್ದ ಸಂದರ್ಭ ದತ್ತಮಾಲಾದಾರಿಗಳು ಭಜನೆ ಮಾಡಿದರು. ಹೋಮ, ಹವನಗಳು ನಡೆದವು. ವಿಎಚ್‌ಪಿ ಜಿಲ್ಲಾ ಕಾರ್ಯಾಧ್ಯಕ್ಷ ಶಿವಶಂಕರ್‌ ಈ ಸಂದರ್ಭ ಮಾತನಾಡಿ, ರಾಜ್ಯಾದ್ಯಂತ ಇಂದಿನಿಂದ ದತ್ತಭಕ್ತರು ದತ್ತಮಾಲಾಧಾರಣೆ ಮಾಡುತ್ತಿದ್ದಾರೆ. ಡಿ.20 ರಿಂದ 23ರವರೆಗೆ ದತ್ತಜಯಂತಿ ಕಾರ್ಯಕ್ರಮಗಳು ನಡೆಯಲಿವೆ. ಡಿ.20 ರಂದು ಮಹಿಳೆಯರು ನಗರದಲ್ಲಿ ಸಂಕೀರ್ತನಾ ಯಾತ್ರೆ ನಡೆಸಿ ದತ್ತಪೀಠಕ್ಕೆ ತೆರಳಿ ಅನುಸೂಯ ಜಯಂತಿ ಆಚರಿಸುವರು. 21 ರಂದು ದತ್ತಮಾಲಾದಾರಿಗಳಿಂದ ನಗರದಲ್ಲಿ ಬೃಹತ್‌ ಶೋಭಾಯಾತ್ರೆ ಇದೆ. ಡಿ.23 ರಂದು ರಾಜ್ಯದ ವಿವಿಧೆಡೆಯಿಂದ ದತ್ತಮಾಲೆ ಧರಿಸಿರುವ ಸಹಸ್ರಾರು ದತ್ತಮಾಲಾಧಾರಿಗಳು ದತ್ತಪೀಠಕ್ಕೆ ತೆರಳಿ ದತ್ತಪಾದುಕೆಗಳ ದರ್ಶನ ಪಡೆಯುವರು. ದತ್ತಪೀಠದಲ್ಲಿ ತಾವು ಸಂಗ್ರಹಿಸಿರುವ ಪಡಿಯನ್ನು ಶ್ರೀ ದತ್ತಾತ್ರೇಯರಿಗೆ ಸಮರ್ಪಿಸುವರು. ಆ ನಂತರ ತಮ್ಮ ಊರುಗಳಿಗೆ ತೆರಳಿ ದತ್ತಮಾಲೆ ವಿಸರ್ಜಿಸಲಿದ್ದಾರೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ