ಆ್ಯಪ್ನಗರ

ಇನಾಂ ದತ್ತಪೀಠದಲ್ಲಿ ಉರುಸ್‌ಗೆ ಚಾಲನೆ

ತಾಲೂಕಿನ ಶ್ರೀಗುರುದತ್ತಾತ್ರೇಯ ಬಾಬಾಬುಡನ್‌ಸ್ವಾಮಿ ದರ್ಗಾದಲ್ಲಿ ಶುಕ್ರವಾರ ಸಂದಲ್‌ ಉರುಸ್‌ಗೆ ಚಾಲನೆ ನೀಡಲಾಯಿತು.

Vijaya Karnataka 23 Mar 2019, 5:00 am
ಚಿಕ್ಕಮಗಳೂರು : ತಾಲೂಕಿನ ಶ್ರೀಗುರುದತ್ತಾತ್ರೇಯ ಬಾಬಾಬುಡನ್‌ಸ್ವಾಮಿ ದರ್ಗಾದಲ್ಲಿ ಶುಕ್ರವಾರ ಸಂದಲ್‌ ಉರುಸ್‌ಗೆ ಚಾಲನೆ ನೀಡಲಾಯಿತು.
Vijaya Karnataka Web CKM-22ARAGAP3


ಅತ್ತಿಗುಂಡಿಯಿಂದ ಸಂಜೆ ಫಕೀರರು ಸಂದಲ್‌ನ್ನು ದಫ್‌ ಬಾರಿಸುವ ಮೂಲಕ ಶ್ರೀಗುರು ದತ್ತಾತ್ರೇಯ ಬಾಬಾಬುಡನ್‌ಸ್ವಾಮಿ ದರ್ಗಾಕ್ಕೆ ತರಲಾಯಿತು. ಸಮುದಾಯದ ಮುಖಂಡರು ಗಂಧವನ್ನು ಶ್ರದ್ಧಾ ಭಕ್ತಿಯಿಂದ ಬರಮಾಡಿಕೊಂಡರು.

ಉರುಸ್‌ ನಡೆಸಲು ಗೌಸ್‌ ಮೊಹಿದ್ದೀನ್‌ ಶಾಖಾದ್ರಿಗೆ ಅವಕಾಶ ನೀಡಬೇಕು ಎಂದು ಒಂದು ಗುಂಪು ಜಿಲ್ಲಾಧಿಕಾರಿಗೆ ಮನವಿ ಮಾಡಿತು. ಈ ಗುಂಪಿನೊಂದಿಗೆ ಶಾಖಾದ್ರಿ ಕೂಡ ಇದ್ದರು. ಆದರೆ, ನ್ಯಾಯಾಲಯದ ಆದೇಶ ಹಾಗೂ ಸರಕಾರದ ನಿರ್ದೇಶನದಂತೆ ಕಳೆದ ವರ್ಷಗಳಲ್ಲಿ ನಡೆಸಿದಂತೆ ಮಾತ್ರ ಉರುಸ್‌ ನಡೆಯಬೇಕು ಎಂದರು. ಗುಂಪು ಮೌಖಿಕ ಪ್ರತಿಭಟನೆ ಸಲ್ಲಿಸಿ ಉರುಸ್‌ನಲ್ಲಿ ಭಾಗವಹಿಸದೆ ಹಿಂದಿರುಗಿತು.

ಕಳೆದ ವರ್ಷದಂತೆ ಮುಜಾವರ್‌ ಗುಹೆಯೊಳಗಿರುವ ಗೋರಿಗಳಿಗೆ ಗಂಧ ಹಚ್ಚುವ ಮತ್ತು ಹಸಿರು ಬಟ್ಟೆ ಹೊದಿಸಲಾಯಿತು. ಉರುಸ್‌ ಕಾರ‍್ಯಕ್ರಮಕ್ಕೆ 4 ಸಾವಿರಕ್ಕೂ ಹೆಚ್ಚು ಭಕ್ತರು ಆಗಮಿಸಿದ್ದರು. ಶನಿವಾರ ಫಕೀರರ ಸಮ್ಮೇಳನ ನಡೆಯಲಿದ್ದು, ನಂತರ ಜನ್ನತ್‌ ನಗರದಲ್ಲಿ ಉರುಸ್‌ ನಡೆಯಲಿದೆ ಎಂದರು.ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹರೀಶ್‌ ಪಾಂಡೆ, ಅಪರ ಜಿಲ್ಲಾಧಿಕಾರಿ ಡಾ.ಕುಮಾರ್‌, ಉಪ ವಿಭಾಗಾಧಿಕಾರಿ ಕೆ.ಎಚ್‌.ಶಿವಕುಮಾರ್‌, ಮುಜರಾಯಿ ಇಲಾಖೆ ಅಧಿಕಾರಿಗಳು ಹಾಜರಿದ್ದರು. ದಾದಾ ಹಯಾತ್‌ ಮೀರ್‌ ಖಲಂದರ್‌ ಉರುಸ್‌ ಸಮಿತಿ ಕಾರ‍್ಯದರ್ಶಿ ಸಿ.ಎಸ್‌.ಖಲಂದರ್‌, ಸಿರಾಜ್‌, ಯೂಸುಫ್‌ ಹಾಜಿ, ಜಂಶಿದ್‌ ಖಾನ್‌, ಚಾಂದ್‌ಪಾಶ, ಮುಬಾರಕ್‌, ಶಾಹಿದ್‌, ನಾಸಿರ್‌ ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ