ಆ್ಯಪ್ನಗರ

ಜಾಗ್ರತೆಯಿಂದ ವಾಹನ ಚಲಾಯಿಸಿ

ಬಹುತೇಕ ಅಪಘಾತಗಳಿಗೆ ಚಾಲಕರ ಲೋಪವೇ ಕಾರಣ ಎಂಬುವುದರಲ್ಲಿಅನುಮಾನವೇ ಇಲ್ಲ, ಹಾಗಾಗಿ ಹೊಣೆಗಾರಿಕೆಯಿಂದ ವಾಹನ ಓಡಿಸಿದರೆ ಬಹಳಷ್ಟು ಸಾವು ನೋವುಗಳಾಗುವುದನ್ನು ತಡೆಯಬಹುದು ಎಂದು ಬಾಳೆಹೊನ್ನೂರು ಪೋಲೀಸ್‌ ಠಾಣೆಯ ಉಪ ಠಾಣಾಧಿಕಾರಿ ರವಿಕುಮಾರ್‌ ಹೇಳಿದರು.

Vijaya Karnataka 14 Sep 2019, 5:00 am
ಬಾಳೆಹೊನ್ನೂರು : ಬಹುತೇಕ ಅಪಘಾತಗಳಿಗೆ ಚಾಲಕರ ಲೋಪವೇ ಕಾರಣ ಎಂಬುವುದರಲ್ಲಿಅನುಮಾನವೇ ಇಲ್ಲ, ಹಾಗಾಗಿ ಹೊಣೆಗಾರಿಕೆಯಿಂದ ವಾಹನ ಓಡಿಸಿದರೆ ಬಹಳಷ್ಟು ಸಾವು ನೋವುಗಳಾಗುವುದನ್ನು ತಡೆಯಬಹುದು ಎಂದು ಬಾಳೆಹೊನ್ನೂರು ಪೋಲೀಸ್‌ ಠಾಣೆಯ ಉಪ ಠಾಣಾಧಿಕಾರಿ ರವಿಕುಮಾರ್‌ ಹೇಳಿದರು.
Vijaya Karnataka Web 12BHR1_35


ಅವರು ಬುಧುವಾರ ಪಟ್ಟಣದ ಶ್ರೀ ನಾರಾಯಣಗುರು ಸಮುದಾಯಭವನದಲ್ಲಿಬಾಳೆಹೊನ್ನುರು ರೋಟರಿ ಕ್ಲಬ್‌, ಇನ್ನರ್ವೀಲ್‌ ಕ್ಲಬ್‌ ಹಾಗೂ ದಿವ್ಯ ಭಾರತಿ ಮಹಿಳಾ ಮಂಡಳಿ ಸಂಯುಕ್ತಾಶ್ರಯದಲ್ಲಿಹಮ್ಮಿಕೊಂಡಿದ್ದ ರಸ್ತೆ ಸುರಕ್ಷತೆ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಚಾಲಕರು ಅತ್ಯಂತ ಜವಾಬ್ದಾರಿಯುತವಾಗಿ ವಾಹನ ಚಲಾಯಿಸಬೇಕೆಂದರು.

ಬಾಳೆಹೊನ್ನೂರು ಪೋಲೀಸ್‌ ಇಲಾಖೆಯ ನಂದೀಶ್‌ ಮಾತನಾಡಿ, ಸಂಚಾರಿ ಪೋಲೀಸ್‌ ಇಲಾಖೆ, ಹಾಗೂ ಸಾರಿಗೆ ಇಲಾಖೆಗಳು ಸೂಚಿಸಿರುವ ರಸ್ತೆ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿದರೆ ಅಪಘಾತಗಳು ಸಂಭವಿಸುವುದಿಲ್ಲಎಂದರು.

ರೋಟರಿ ಅಧ್ಯಕ್ಷ ಎಂ.ಸಿ.ಯೋಗೇಶ್‌ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಾಳೆಹೊನ್ನೂರಿನ ಸರಕಾರಿ ಪ್ರೌಢಶಾಲೆ ಆವರಣದಲ್ಲಿಸೆ.22 ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2ಗಂಟೆಯವರೆಗೆ ಆರೋಗ್ಯ ಶಿಬಿರವನ್ನು ಆಯೋಜಿಸಿದ್ದು ಇದರ ಸದುಪಯೋಗ ಪಡೆಯಬೇಕೆಂದರು.ಜೇಸಿ ಕ್ಲಬ್‌ ಅಧ್ಯಕ್ಷ ಸಿ.ಪಿ.ರಮೇಶ್‌, ಇನ್ನರ್‌ ವೀಲ್‌ ಕ್ಲಬ್‌ ಅಧ್ಯಕ್ಷೆ ಸೀಮಾ ಅಶೋಕ್‌ ಮಾತನಾಡಿದರು, ರೋಟರಿ ಕ್ಲಬ್‌ ನ ಝೊನಲ್‌ ಲೆಪ್ಟಿನೆಂಟ್‌ ಟಿ.ಸುರೇಶ್‌, ದಿವ್ಯ ಭಾರತಿ ಮಹಿಳಾ ಮಂಡಳಿ ಅಧ್ಯಕ್ಷೆ ಕವಿತಾ ಕೇಶವ್‌, ಇನ್ನರ್ವೀಲ್‌ ಕ್ಲಬ್‌ ಕಾರ್ಯದರ್ಶಿ ಸುಚೇತಾ, ಲಯನ್ಸ್‌ ಕ್ಲಬ್‌ ಅಧ್ಯಕ್ಷ ಎ.ಸಿ.ಕೃಷ್ಣಮೂರ್ತಿ, ಕಾರ್ಯದರ್ಶಿ ಎನ್‌.ಸಿ.ಸುಬ್ರಹ್ಮಣ್ಯ, ಬಿ.ಸಿ.ಗೀತಾ, ನವೀನ್‌ ಲಾಯ್ಡ್‌ ಮಿಸ್ಕಿತ್‌, ಹೋಬಳಿ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಅರಳಿಕೊಪ್ಪ ಸತೀಶ್‌, ಬಿಲ್ಲವ ಸಂಘದ ಅಧ್ಯಕ್ಷ ದಯಾನಂದ್‌, ಮೆಣಸುಕುಡಿಗೆ ಕಾಪಿ ಬೆಳೆಗಾರ ಬಾಲಕೃಷ್ಣ ಪಾಲ್ಗೊಂಡಿದ್ದರು.ವೈಶಾಲಿ ಕುಡ್ವ ಪ್ರಾರ್ಥಿಸಿ, ಮಾಗುಂಡಿ ರವಿ ನಿರೂಪಿಸಿ, ರೋಟರಿ ಕಾರ್ಯದರ್ಶಿ ಕೆ.ಕೆ.ರಮೇಶ್‌ ವಂದಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ