ಆ್ಯಪ್ನಗರ

ಮೀನಿನ ಟ್ಯಾಂಕ್‌ನಲ್ಲಿ ಒಣಗುತ್ತಿರುವ ಕಾಫಿ ಬೀಜ!

ಇಲ್ಲಿನ ಮೀನುಗಾರಿಕೆ ಇಲಾಖೆಯಲ್ಲಿ ಮೀನು ಸಾಕಣೆಗೆ ಸರಕಾರ ನಿರ್ಮಿಸಿ ಕೊಟ್ಟಿರುವ ಟ್ಯಾಂಕನ್ನು ಖಾಸಗಿ ವ್ಯಕ್ತಿಯೊಬ್ಬರಿಗೆ ಕಾಫಿ ಬೀಜ ಒಣಗಿಸಲು ನೀಡಿದ ಪ್ರಕರಣ ಬೆಳಕಿಗೆ ಬಂದಿದೆ.

Vijaya Karnataka 29 Jan 2019, 5:00 am
ಮೂಡಿಗೆರೆ : ಇಲ್ಲಿನ ಮೀನುಗಾರಿಕೆ ಇಲಾಖೆಯಲ್ಲಿ ಮೀನು ಸಾಕಣೆಗೆ ಸರಕಾರ ನಿರ್ಮಿಸಿ ಕೊಟ್ಟಿರುವ ಟ್ಯಾಂಕನ್ನು ಖಾಸಗಿ ವ್ಯಕ್ತಿಯೊಬ್ಬರಿಗೆ ಕಾಫಿ ಬೀಜ ಒಣಗಿಸಲು ನೀಡಿದ ಪ್ರಕರಣ ಬೆಳಕಿಗೆ ಬಂದಿದೆ.
Vijaya Karnataka Web CKM-28MDG-P1


ಮೂಡಿಗೆರೆ ಮೀನುಗಾರಿಕೆ ಇಲಾಖೆಗೆ ಮೀನು ಸಾಕಣೆ ಮಾಡಿ, ಮೀನು ಕೃಷಿಕರಿಗೆ ಮಾರಾಟ ಮಾಡಲು ಸರಕಾರ ಸುಮಾರು 8ಕ್ಕೂ ಅಧಿಕ ಟ್ಯಾಂಕ್‌ಗಳನ್ನು ನಿರ್ಮಿಸಿದೆ. ಈಗಾಗಲೇ ನಾಲ್ಕೈದು ಟ್ಯಾಂಕ್‌ಗಳಲ್ಲಿ ಮೀನು ಸಾಕಣೆ ಮಾಡುತ್ತಿದ್ದು, ಉಳಿದ ಟ್ಯಾಂಕ್‌ಗಳು ಖಾಲಿಯಾಗಿದ್ದವು. ಈ ಖಾಲಿ ಟ್ಯಾಂಕ್‌ನಲ್ಲಿ ಮೀನುಗಾರಿಕೆ ಇಲಾಖೆ ಅಧಿಕಾರಿ ಖಾಸಗಿ ವ್ಯಕ್ತಿಯೊಬ್ಬರಿಗೆ ಕಾಫಿ ಬೀಜವನ್ನು ಒಣಗಿಸಲು ಅವಕಾಶ ನೀಡಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.

ಹಲವು ದಿನಗಳ ಹಿಂದೆ ಎರಡು ಟ್ಯಾಂಕ್‌ಗಳನ್ನು ಬಳಸಿಕೊಂಡು ಕಾಫಿ ಬೀಜ ಒಣಗಿಸಿ ತೆರವುಗೊಳಿಸಲಾಗಿದೆ. ಇತ್ತೀಚೆಗೆ ಮತ್ತೆರಡು ಟ್ಯಾಂಕ್‌ ಬಳಸಿಕೊಂಡು ಕಾಫಿ ಬೀಜ ಒಣಗಿಸಲು ಹಾಕಲಾಗಿತ್ತು. ಈ ವಿಷಯ ಸಾರ್ವಜನಿಕವಾಗಿ ಬಹಿರಂಗವಾಗುತ್ತಿದ್ದಂತೆ ಕೂಡಲೇ ಇಲಾಖೆ ಟ್ಯಾಂಕಿನೊಳಗೆ ಒಣಗಲು ಹರಡಿದ್ದ ಕಾಫಿ ಬೀಜವನ್ನು ತೆರವುಗೊಳಿಸಿದೆ. ಇಲಾಖೆ ಅಧಿಕಾರಿಗಳ ಅನುಮತಿ ಇಲ್ಲದೇ ಈ ರೀತಿ ಕಾಫಿ ಒಣಗಿಸಲು ಸಾಧ್ಯವಿಲ್ಲ. ಹಾಗಾಗಿ, ಇದಕ್ಕೆ ಅವಕಾಶ ನೀಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

-------
ನಮ್ಮ ಇಲಾಖೆಯ ಟ್ಯಾಂಕಿನೊಳಗೆ ಕಾಫಿ ಬೀಜ ಒಣಗಿಸಲು ಹೇಳಿರಲಿಲ್ಲ. ಶನಿವಾರ ಗಣರಾಜ್ಯೋತ್ಸವ ಹಾಗೂ ಭಾನುವಾರ ರಜೆ ಇದ್ದುದ್ದರಿಂದ ಎರಡು ದಿನ ಇಲಾಖೆಯ ಟ್ಯಾಂಕ್‌ನ್ನು ಖಾಸಗಿ ವ್ಯಕ್ತಿ ದುರ್ಬಳಕೆ ಮಾಡಿಕೊಂಡಿದ್ದಾರೆ. ತನ್ನ ಗಮನಕ್ಕೆ ಬಂದ ಕೂಡಲೇ ಅದನ್ನು ತೆರವುಗೊಳಿಸಿದ್ದೇನೆ.

-ವೆಂಕಟೇಶ್‌, ಮೀನುಗಾರಿಕೆ ಇಲಾಖೆ ಅಧಿಕಾರಿ, ಮೂಡಿಗೆರೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ