ಆ್ಯಪ್ನಗರ

ಅಪಹರಣ ಡೀಲ್: ಆರೋಪಿ ಡಿವೈಎಸ್ಪಿ ಸಾವಿಗೆ ಶರಣು

ಡಿವೈಎಸ್ಪಿ ಕಲ್ಲಪ್ಪ ಅವರು ಬೆಳಗಾವಿಯ ಮುರಗೋಡುವಿನ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Vijaya Karnataka Web 5 Jul 2016, 3:22 pm
ಚಿಕ್ಕಮಗಳೂರು: ಹಣಕ್ಕಾಗಿ ವ್ಯಕ್ತಿಯ ಕಿಡ್ನಾಪ್ ಪ್ರಕರಣದಲ್ಲಿ 10 ಲಕ್ಷ ರೂ. ಪಡೆದ ಡಿವೈಎಸ್ಪಿ ಕಲ್ಲಪ್ಪ ಅವರು ಬೆಳಗಾವಿಯ ಮುರಗೋಡುವಿನ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Vijaya Karnataka Web dysp kallappa suicide
ಅಪಹರಣ ಡೀಲ್: ಆರೋಪಿ ಡಿವೈಎಸ್ಪಿ ಸಾವಿಗೆ ಶರಣು


ವ್ಯಕ್ತಿಯ ಕಿಡ್ನಾಪ್ ಪ್ರಕರಣದಲ್ಲಿ 10 ಲಕ್ಷ ರೂ.ಪಡೆದ ಆರೋಪದಡಿ ಸೋಮವಾರ ಚಿಕ್ಕಮಗಳೂರಿನ ಬಸನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ತೇಜಸ್ ಎಂಬುವರು ಡಿವೈಎಸ್ಪಿ ವಿರುದ್ಧ ದೂರು ನೀಡಿದ್ದರು. 2012ರಲ್ಲಿ ಡಿವೈಎಸ್ಪಿಯಾಗಿ ಕಲ್ಲಪ್ಪ ಹಂಡಿಬಾಗ್ ಆಯ್ಕೆ ಆಯ್ಕೆಯಾಗಿದ್ದರು. ಧಾರವಾಡದಲ್ಲಿ ಎರಡು ವರ್ಷ ಸೇವೆ ಸಲ್ಲಿಸಿರುವ ಇವರು ಮೂಲತ: ಬೆಳಗಾವಿಯ ಮುರಗೋಡು ಗ್ರಾಮದವರು. ಚಿಕ್ಕಮಗಳೂರಿನಲ್ಲಿ 2004ರ ಡಿಸೆಂಬರ್‌ನಿಂದ ಸೇವೆ ಆರಂಭಿಸಿದ್ದರು.

ಅಪಹರಣ 10 ಲಕ್ಷ ಡೀಲ್ ಮತ್ತು ಡಿವೈಎಸ್ಪಿ ಆತ್ಮಹತ್ಯೆ ಪ್ರಕರಣದ ಕಿಂಗ್ ಪಿನ್ ಭಜರಂಗ ದಳದ ಮುಖಂಡ ಪ್ರವೀಣ್ ಖಾಂಡ್ಯ ಎಂದು ತಿಳಿದು ಬಂದಿದೆ. ಕಲ್ಲಪ್ಪ ಪ್ರಕರಣದ ತನಿಖೆ ಜವಾಬ್ದಾರಿಯನ್ನು ಶಿವಮೊಗ್ಗ ಎಸ್ಪಿ ರವಿ ಚೆನ್ನಣ್ಣನವರ್ ಅವರಿಗೆ ವಹಿಸಲಾಗಿದೆ.

35 ವರ್ಷದ ಕಲ್ಲಪ್ಪ ಹಂಡಿಭಾಗ್ ರಾಯಭಾಗ ತಾಲೂಕಿನ ಹಂದಿಗುಂದ ಗ್ರಾಮದವರು. ಆರಂಭದಲ್ಲಿ ಸರಕಾರಿ ಶಾಲಾ ಶಿಕ್ಷಕರಾಗಿದ್ದ್ದದರು. 2010ರಲ್ಲಿ ಕೆ ಎ ಎಸ್ ಪಾಸ್ ಮಾಡಿದ್ದ ಅವರು ಬೆಂಗಳೂರು ಮುಖ್ಯ ಚುನಾವಣಾಧಿಕಾರಿ ಕಚೇರಿಯಲ್ಲಿ ಶಾಖಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಮತ್ತೆ ಕೆಎಎಸ್ ಪಾಸ್ ಮಾಡಿ ಡಿವೈಎಸ್ ಪಿ ಹುದ್ದೆ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಮಲ್ಲಪ್ಪ ಅವರ ತಂದೆ ಕೂಡ ಶಿಕ್ಷಕರಾಗಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ