ಆ್ಯಪ್ನಗರ

ಮಾನವಕುಲದ ಸುಧಾರಣೆಗೆ ಶಿಕ್ಷಣ ಸಹಕಾರಿಯಾಗಲಿ

ಮಾನವಕುಲದ ಸುಧಾರಣೆಗೆ ಶಿಕ್ಷಣ ಸಹಕಾರಿಯಾಗಬೇಕು. ಮನುಷ್ಯತ್ವ ನಿರ್ಮಾಣವೇ ಶಿಕ್ಷಣದ ಗುರಿಯಾಗಬೇಕು ಎಂಬುದು ಸ್ವಾಮಿ ವಿವೇಕಾನಂದ ಅವರ ಆಶಯವೂ ಆಗಿತ್ತು ಎಂದು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ವಿಶ್ರಾಂತ ಜಂಟಿ ನಿರ್ದೇಶಕ ಬಿ.ಪಿ.ಶಿವಮೂರ್ತಿ ಹೇಳಿದರು.

Vijaya Karnataka 12 Jan 2019, 5:00 am
ಚಿಕ್ಕಮಗಳೂರು : ಮಾನವಕುಲದ ಸುಧಾರಣೆಗೆ ಶಿಕ್ಷಣ ಸಹಕಾರಿಯಾಗಬೇಕು. ಮನುಷ್ಯತ್ವ ನಿರ್ಮಾಣವೇ ಶಿಕ್ಷಣದ ಗುರಿಯಾಗಬೇಕು ಎಂಬುದು ಸ್ವಾಮಿ ವಿವೇಕಾನಂದ ಅವರ ಆಶಯವೂ ಆಗಿತ್ತು ಎಂದು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ವಿಶ್ರಾಂತ ಜಂಟಿ ನಿರ್ದೇಶಕ ಬಿ.ಪಿ.ಶಿವಮೂರ್ತಿ ಹೇಳಿದರು.
Vijaya Karnataka Web ckm-11aragap1


ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನದಿಂದ ಸ್ವಾಮಿ ವಿವೇಕಾನಂದರ ಜನ್ಮ ದಿನೋತ್ಸವ ಅಂಗವಾಗಿ ನಗರದ ವಾಸವಿ ವಿದ್ಯಾ ಸಂಸ್ಥೆಯಲ್ಲಿ ಶುಕ್ರವಾರ ಆಯೋಜಿಸಿದ್ದ ವಿವೇಕ ಯುವ ಸಂಭ್ರಮ ಕಾರ‍್ಯಕ್ರಮದಲ್ಲಿ ವಿವೇಕಾನಂದ ಮತ್ತು ಶಿಕ್ಷಣ ವಿಷಯದ ಬಗ್ಗೆ ಉಪನ್ಯಾಸ ನೀಡಿದರು.

ಒಂದಷ್ಟು ಮಾಹಿತಿ ಸಂಗ್ರಹಿಸುವುದಷ್ಟೇ ಶಿಕ್ಷಣವಾಗುವುದಿಲ್ಲ. ವ್ಯಕ್ತಿಯ ಸರ್ವಾಂಗೀಣ ವಿಕಾಸವೇ ಶಿಕ್ಷಣ. ದೇಹ, ಮನಸ್ಸು, ಆತ್ಮ ವಿಕಾಸವಾಗಬೇಕು. ಪ್ರತಿಯೊಬ್ಬರಲ್ಲೂ ಪೂರ್ಣತೆ ಇರುತ್ತದೆ. ಅದರ ಅರಿವು ಹೊಂದುವುದು ಮುಖ್ಯ. ಅಜ್ಞಾನ ಮತ್ತು ಅಹಂಕಾರದಿಂದ ಹೊರಬರಬೇಕು. ವೇದಾಂತ ಆಧಾರಿತ ಶಿಕ್ಷಣ ಪರಿಣಾಮಕಾರಿ ಎಂಬುದು ವಿವೇಕಾನಂದ ಅವರ ಅನಿಸಿಕೆಯಾಗಿತ್ತು ಎಂದರು.

ಚಾರಿತ್ರ್ಯ ನಿರ್ಮಾಣವೇ ಶಿಕ್ಷಣದ ಪರಮ ಗುರಿ. ಸ್ವಂತ ಕಾಲಮೇಲೆ ನಿಲ್ಲುವಂತೆ ಮಾಡುವ ಶಿಕ್ಷಣ ನಮ್ಮ ಅಗತ್ಯ. ನಮ್ಮ ಬಗ್ಗೆ ನಮಗೆ ನಂಬಿಕೆ, ವಿಶ್ವಾಸ ಇದ್ದರೆ ಮಾತ್ರ ದೇವರ ಬಗ್ಗೆ ವಿಶ್ವಾಸ ಮೂಡುತ್ತದೆ. ಆತ್ಮವಿಶ್ವಾಸ ಇಲ್ಲದವನೇ ನಿಜವಾದ ನಾಸ್ತಿಕ. ಯಾವುದೇ ದೇಶದ ಶ್ರೇಷ್ಠತೆಯ ಮಾನದಂಡ ಹಣ, ಐಶ್ವರ‍್ಯವಲ್ಲ. ಬದಲಿಗೆ ಅಲ್ಲಿನ ನಾಗರಿಕರ ನೈತಿಕತೆ ಮತ್ತು ಸಾಂಸ್ಕೃತಿಕ ಹಿರಿಮೆ ಎಂದಿದ್ದ ವಿವೇಕಾನಂದರು, ಉಪನಿಷತ್ತು, ಭಗವದ್ಗೀತೆಯನ್ನು ಹೆಚ್ಚು ಉಲ್ಲೇಖಿಸುತ್ತಿದ್ದರು. ಎಲ್ಲ ಧರ್ಮಗಳ ಸಾರವನ್ನು ಅರಿತಿದ್ದರಿಂದಲೇ ಹಿಂದೂ ಧರ್ಮದ ಹಿರಿಮೆಯನ್ನು ಪ್ರಬಲವಾಗಿ ಮಂಡಿಸಿದರು ಎಂದು ಹೇಳಿದರು.

ಹಿರಿಯ ಪತ್ರಕರ್ತ ಎಸ್‌.ಕೆ.ದತ್ತಾತ್ರಿ ಕಾರ‍್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿವೇಕಾನಂದರು ಯುವಶಕ್ತಿಯ ಪ್ರತೀಕ. ಅವರ ಚಿಂತನಾಧಾರೆಗಳನ್ನು ಪ್ರಚುರಪಡಿಸುವ ವಿವೇಕ ಸಂಭ್ರಮ ಅರ್ಥಪೂರ್ಣ ಕಾರ‍್ಯಕ್ರಮ ಎಂದರು.

ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕ ಬಿ.ಆರ್‌.ಕುಮಾರ್‌ ಮಾತನಾಡಿ, ವಿವೇಕಾನಂದರ ಗುರಿ ಯುವಜನರೇ ಆಗಿದ್ದರು. ಯುವಜನರು ಸಕಾರಾತ್ಮಕ ಆಲೋಚನೆಗಳನ್ನು ಹೊಂದಿರಬೇಕು ಎಂದು ಬಯಸುತ್ತಿದ್ದರು. ಗುರಿ, ನಡವಳಿಕೆ, ಆತ್ಮವಿಶ್ವಾಸ ಅವರ ಬೋಧನೆಯ ಸಾರವಾಗಿತ್ತು ಎಂದರು.

ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನದ ಕಾರಾರ‍ಯಧ್ಯಕ್ಷ ಪ್ರಭುಲಿಂಗಶಾಸ್ತ್ರಿ ಪ್ರಾಸ್ತಾವಿಕ ಮಾತನಾಡಿದರು. ಸಾಹಿತಿ ರಮೇಶ್‌ ಬೊಂಗಾಳೆ ಹಾಜರಿದ್ದರು. ಶ್ರೇಯಾ ಮತ್ತು ಸಂಗಡಿಗರು ಪ್ರಾರ್ಥಿಸಿ, ಪ್ರಿಯಾಂಕ ಚೌಧರಿ ಸ್ವಾಗಿಸಿದರು. ವಿದ್ಯಾಶ್ರೀ ನಿರೂಪಿಸಿ, ಗಗನಾ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ