ಆ್ಯಪ್ನಗರ

ಶಿಕ್ಷಣ, ಆರೋಗ್ಯ ದುಬಾರಿಯಾಗಬಾರದು :ಎಸ್‌ಎಲ್‌ಬಿ

ದೇಶದಲ್ಲಿ ಉಳ್ಳವರು ಮತ್ತು ಬಡವರು ಇಬ್ಬರಿಗೂ ಜ್ಞಾನಾರ್ಜನೆ ಮತ್ತು ಆರೋಗ್ಯ ಅತ್ಯಗತ್ಯವಾಗಿರುವುದರಿಂದ ಶಿಕ್ಷಣ ಮತ್ತು ಆರೋಗ್ಯ ಈ ಎರಡೂ ದುಬಾರಿಯಾಗಬಾರದು ಎಂದು ಎಂಎಲ್ಸಿ ಎಸ್‌.ಎಲ್‌.ಭೋಜೇಗೌಡ ಹೇಳಿದರು.

Vijaya Karnataka 16 Jun 2019, 5:00 am
ಚಿಕ್ಕಮಗಳೂರು: ದೇಶದಲ್ಲಿ ಉಳ್ಳವರು ಮತ್ತು ಬಡವರು ಇಬ್ಬರಿಗೂ ಜ್ಞಾನಾರ್ಜನೆ ಮತ್ತು ಆರೋಗ್ಯ ಅತ್ಯಗತ್ಯವಾಗಿರುವುದರಿಂದ ಶಿಕ್ಷಣ ಮತ್ತು ಆರೋಗ್ಯ ಈ ಎರಡೂ ದುಬಾರಿಯಾಗಬಾರದು ಎಂದು ಎಂಎಲ್ಸಿ ಎಸ್‌.ಎಲ್‌.ಭೋಜೇಗೌಡ ಹೇಳಿದರು.
Vijaya Karnataka Web CKM-14RUDRAP5


ಕಳಸಾಪುರ ಕರ್ನಾಟಕ ಪಬ್ಲಿಕ್‌ ಶಾಲೆಯಲ್ಲಿ ಇತ್ತೀಚೆಗೆ ಎಲ್‌ಕೆಜಿ ಮತ್ತು ಒಂದನೇ ತರಗತಿ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದ ಅಭಿವೃದ್ಧಿಗೆ ಪ್ರತಿಯೊಬ್ಬ ಪ್ರಜೆಯೂ ಸುಶಿಕ್ಷಿತನಾಗಬೇಕು ಮತ್ತು ಆರೋಗ್ಯವಂತನಾಗಿರಬೇಕು. ಈ ಹಿಂದೆ ಊರಲ್ಲಿ ಶಾಲೆಗಳಿರಲಿಲ್ಲ. ಇದ್ದರೂ ಮಕ್ಕಳನ್ನು ಕಳುಹಿಸುತ್ತಿರಲಿಲ್ಲ. ಈಗ ಶಾಲೆ ಮನೆ ಬಾಗಿಲಿಗೆ ಬಂದಿವೆ. ಜನ ವಿಚಾರವಂತರಾಗುತ್ತಿದ್ದಾರೆ. ಕಲಿಯುವ ಮಕ್ಕಳ ಪೋಷಕರಿಗೆ ಖಾಸಗಿ ಶಾಲೆಗಳ ದುಬಾರಿ ದರದ ಭಾರ ತಪ್ಪಿಸಲು ಸರಕಾರ ಈ ಸಾಲಿನಿಂದಲೇ 1 ಸಾವಿರ ಆಂಗ್ಲ ಮಾಧ್ಯಮ ಶಾಲೆ ತೆರೆದಿದೆ ಎಂದು ಹೇಳಿದರು.

ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಜಸಂತಾ ಮಾತನಾಡಿ, ಕೆಪಿಎಸ್‌ನಂತಹ ಮಾದರಿ ಶಾಲೆಗಳಲ್ಲಿ ಬೋಧನೆ ಮಾಡಲು ಶಿಕ್ಷಕರ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯರಾದ ಪ್ರೇಮ ಮಂಜುನಾಥ್‌, ರವೀಂದ್ರ ಬೆಳವಾಡಿ, ತಾ.ಪಂ. ಅಧ್ಯಕ್ಷ ಜಯಣ್ಣ, ಬಿಇಒ ವೆಂಕಟರಾಮ್‌, ಮುಖ್ಯ ಶಿಕ್ಷಕಿ ಶಾರದಮ್ಮ, ಉಪನ್ಯಾಸಕ ಡಾ.ಸುದರ್ಶನ್‌ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ