ಆ್ಯಪ್ನಗರ

ಎಲ್ಲರಿಗೂ ಟಿಕೆಟ್‌ ಕೊಡಲಾಗದು: ಕುಮಾರಸ್ವಾಮಿ

ಪ್ರಜ್ವಲ್ ಕೂಡ ಟಿಕೆಟ್ ಆಕಾಂಕ್ಷಿ. ಆದರೆ ಟಿಕೆಟ್ ಯಾರಿಗೆ ಕೊಡಬೇಕು ಎಂಬುದನ್ನು ಪಕ್ಷ ನಿರ್ಧರಿಸುತ್ತದೆ. ಪಕ್ಷದ ನಿರ್ಧಾರಕ್ಕೆ ಎಲ್ಲರೂ ಬದ್ಧವಾಗಿರಬೇಕು ಎಂದು ಜೆಡಿಎಸ್‌ ಮುಖಂಡ ಕುಮಾರಸ್ವಾಮಿ ಹೇಳಿದ್ದಾರೆ.

Vijaya Karnataka Web 8 Nov 2017, 12:01 pm
ಚಿಕ್ಕಮಗಳೂರು: ಪ್ರತಿಯೊಂದು ಕ್ಷೇತ್ರದಲ್ಲಿ 10-12 ಟಿಕೆಟ್ ಆಕಾಂಕ್ಷಿಗಳು ಇರುತ್ತಾರೆ. ಎಲ್ಲರಿಗೂ ಟಿಕೆಟ್ ಕೊಡಲು ಆಗುವುದಿಲ್ಲ. ಪ್ರಜ್ವಲ್ ಕೂಡ ಟಿಕೆಟ್ ಆಕಾಂಕ್ಷಿ. ಆದರೆ ಟಿಕೆಟ್ ಯಾರಿಗೆ ಕೊಡಬೇಕು ಎಂಬುದನ್ನು ಪಕ್ಷ ನಿರ್ಧರಿಸುತ್ತದೆ. ಪಕ್ಷದ ನಿರ್ಧಾರಕ್ಕೆ ಎಲ್ಲರೂ ಬದ್ಧವಾಗಿರಬೇಕು ಎಂದು ಜೆಡಿಎಸ್‌ ಮುಖಂಡ ಕುಮಾರಸ್ವಾಮಿ ಹೇಳಿದ್ದಾರೆ.
Vijaya Karnataka Web election ticket from jds
ಎಲ್ಲರಿಗೂ ಟಿಕೆಟ್‌ ಕೊಡಲಾಗದು: ಕುಮಾರಸ್ವಾಮಿ


ಎಚ್.ಡಿ.ರೇವಣ್ಣ ಪೂರ್ವ ನಿಯೋಜಿತ ಕೆಲಸದ ಕಾರಣ ನಿನ್ನೆ ದೆಹಲಿಗೆ ತೆರಳಿದ್ದರು. ಹಾಗಾಗಿ ಮೈಸೂರಿಗೆ ಬರಲಿಲ್ಲ. ಬಸವರಾಜ ಹೊರಟ್ಟಿ ಹುಬ್ಬಳ್ಳಿ ಸಮಾವೇಶದ ಸಿದ್ಧತೆಯಲ್ಲಿದ್ದಾರೆ. ಮಧುಬಂಗಾರಪ್ಪ ಪಾದಯಾತ್ರೆ ಮಾಡುತ್ತಿದ್ದಾರೆ. ಜೆಡಿಎಎಸ್‌ನಲ್ಲಿ ಯಾವುದೇ ಒಡಕಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.

ಸಿದ್ದರಾಮಯ್ಯನವರದು ಜಾಹೀರಾತು ಮೂಲಕ ನಡೆಯುತ್ತಿರುವ ಸರಕಾರ. ರಾಜ್ಯದಲ್ಲಿ ಅತೀ ಹೆಚ್ಚು ಹಾಲು ಉತ್ಪಾದನೆ ಅಗಲು ಹೆಚ್.ಡಿ.ರೇವಣ್ಣ ಕಾರಣ. ಪ್ರತಿಕುಟುಂಬದ ಮೇಲೆ ಐವತ್ತು ಸಾವಿರ ಹೊರೆ ನೀಡಿರುವುದೇ ಸಿದ್ದರಾಮಯ್ಯ. ನೀರಾವರಿ, ರಸ್ತೆ, ಹಣ ದೋಚಿ ನಾಡಿನ ಜನರನ್ನು ಸಾಲಗಾರನ್ನಾಗಿ ಮಾಡಿರುವುದೇ ಸಾಧನೆ . ಸಾಲಮನ್ನಾ ಘೋಷಣೆ ಮಾಡಿ ನಾಲ್ಕು ತಿಂಗಳಾಗಿದೆ. ಎಷ್ಟು ಜನರಿಗೆ ಸಾಲಮನ್ನಾ ಮಾಡಲು ಹಣ ನೀಡಿದ್ದಾರೆ. ಸಿದ್ದರಾಮಯ್ಯ ಅವರ ಪೋಟೊ ಹಾಕಿ ಸಾಲ ಮನ್ನ ಮಾಡಿದ್ದೇವೆ ಎಂದು ಕರಪತ್ರ ಹಂಚುತ್ತಿದ್ದಾರೆ. ಗ್ರಾಮ ವಾಸ್ತವ್ಯದ ಮೂಲಕ ಜನರ ಸಮಸ್ಯೆ ಅಲಿಸಿ ಪ್ರಣಾಳಿಕೆಯಲ್ಲಿ ನೀಡುವ ಉದ್ದೇಶವಿದೆ. ಜೆಡಿಎಸ್ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ, ಹಾಲಿ ಶಾಸಕರಿಗೆ ಟಿಕೆಟ್‌ ನೀಡಲಾಗುವುದು. ಎರಡು ರಾಷ್ಟ್ರೀಯ ಪಕ್ಷಗಳು ದ್ವೇಷದ ರಾಜಕಾರಣ ಮಾಡುತ್ತಿದ್ದು ಲೂಟಿಕಾರರ ವಿರುದ್ದ ಕ್ರಮ ಕೈಗೊಳ್ಳುತ್ತಿಲ್ಲ. ಟಿಪ್ಪುಜಯಂತಿ ಸೇರಿದಂತೆ ಜಯಂತಿಗಳನ್ನು ನಡೆಸಿ ಸಮುದಾಯದ ಜನರನ್ನ ತೃಪ್ತಿ ಪಡಿಸಲು ಮುಂದಾಗಿದ್ದಾರೆ. ಇದನ್ನು ಬಿಟ್ಟು ಸಮುದಾಯದ ಅಭಿವೃದ್ದಿಗೆ ಪ್ರಾಮಾಣಿಕ ಕೆಲಸ ಮಾಡಲಿ ಎಂದರು.

ಕೆಟ್ಟು ನಿಂತ ವಿಕಾಸವಾಹಿನಿ

ಕುಮಾರಸ್ವಾಮಿ ಪ್ರಯಾಣಿಸಬೇಕಿದ್ದ ವಿಕಾಸವಾಹಿನಿ ಬಸ್ ತಾಂತ್ರಿಕ ದೋಷದಿಂದ ಮುಗುಳುವಳ್ಳಿ ಗ್ರಾಮದಲ್ಲಿ 30 ನಿಮಿಷಕ್ಕೂ ಹೆಚ್ಚು ಕಾಲ ಕೆಟ್ಟು ನಿಂತಿತ್ತು. ಇದರಿಂದ ಕಾರ್ಯಕರ್ತರಲ್ಲಿ ಕೆಲ ಕಾಲ ಗೊಂದಲವುಂಟಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ