ಆ್ಯಪ್ನಗರ

ಐಟಿ ದಾಳಿಗೂ ಚುನಾವಣೆಗೂ ಸಂಬಂಧವಿಲ್ಲ: ಶೋಭಾ

ರಾಜ್ಯದಲ್ಲಿ ಕೆಲವರ ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆ ನಡೆಸಿರುವ ದಾಳಿಗೂ, ಬಿಜೆಪಿಗೂ ಹಾಗೂ ಚುನಾವಣೆಗೂ ಯಾವುದೇ ಸಂಬಂಧ ಇಲ್ಲ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ‍್ಯದರ್ಶಿ ಶೋಭಾ ಕರಂದ್ಲಾಜೆ ಹೇಳಿದರು.

Vijaya Karnataka 29 Mar 2019, 5:00 am
ಚಿಕ್ಕಮಗಳೂರು : ರಾಜ್ಯದಲ್ಲಿ ಕೆಲವರ ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆ ನಡೆಸಿರುವ ದಾಳಿಗೂ, ಬಿಜೆಪಿಗೂ ಹಾಗೂ ಚುನಾವಣೆಗೂ ಯಾವುದೇ ಸಂಬಂಧ ಇಲ್ಲ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ‍್ಯದರ್ಶಿ ಶೋಭಾ ಕರಂದ್ಲಾಜೆ ಹೇಳಿದರು.
Vijaya Karnataka Web elections are not related to it attack shobha
ಐಟಿ ದಾಳಿಗೂ ಚುನಾವಣೆಗೂ ಸಂಬಂಧವಿಲ್ಲ: ಶೋಭಾ


ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿ, ಹಣಕಾಸು ವ್ಯವಹಾರದಲ್ಲಿ ನಡೆದಿರುವ ಅಕ್ರಮದ ಮಾಹಿತಿ ಸಿಕ್ಕಿದರೆ ಅಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸುತ್ತಾರೆ. ಇದನ್ನು ಇಲಾಖೆ ಕೇವಲ ಒಂದು ದಿನ ಅಥವಾ ಚುನಾವಣೆ ಸಂದರ್ಭ ಮಾಡುವುದಿಲ್ಲ. ಒಂದು ವರ್ಷ ಕಾಲ ಇದಕ್ಕಾಗಿ ತಯಾರಿ ನಡೆಸಿರುತ್ತದೆ ಎಂದರು.

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಮೈತ್ರಿ ಪಕ್ಷದವರು ಬಹುಶಃ ಚುನಾವಣೆಗಾಗಿ ಹಣ ಸಂಗ್ರಹಿಸಿಟ್ಟಿರುವ ಮಾಹಿತಿ ಆದಾಯ ತೆರಿಗೆ ಇಲಾಖೆಗೆ ದೊರೆತಿರಬಹುದೇನೋ, ಅದು ನನಗೆ ಗೊತ್ತಿಲ್ಲ. ಹಣ ಸಂಗ್ರಹಿಸಿರುವ ಮಾಹಿತಿಯಿಂದ ದಾಳಿ ನಡೆಸಿರಬಹುದು ಎಂದು ಹೇಳಿದರು.

ದಾಳಿ ಮಾಡಿದ್ದಕ್ಕೆ ಜೆಡಿಎಸ್‌, ಕಾಂಗ್ರೆಸ್‌ನವರು ಕೇಂದ್ರ ಸರಕಾರ, ಬಿಜೆಪಿ ವಿರುದ್ಧ ಹೇಳಿಕೆ ನೀಡುವುದು, ದೂರು ಸಲ್ಲಿಸುವುದು ಕೇವಲ ರಾಜಕೀಯ ಪ್ರೇರಿತ. ಆದಾಯ ತೆರಿಗೆ ಇಲಾಖೆ ಸ್ವಾಯತ್ತ ಸಂಸ್ಥೆ. ತನ್ನ ಕೆಲಸವನ್ನು ತಾನು ಮಾಡಿದೆ. ದಾಳಿಗೂ ಸರಕಾರಕ್ಕೂ ಸಂಬಂಧ ಇಲ್ಲ. ದಾಳಿಯಿಂದಾಗಿ ಹಣ ಹಂಚಲು ಸಾಧ್ಯವಾಗುವುದಿಲ್ಲ ಎಂಬ ಭೀತಿಯಿಂದ ಅವರು ಇಂತಹ ಹೇಳಿಕೆ ಕೊಡುತ್ತಿರಬಹುದು. ಅಧಿಕಾರಿಗಳು ಯಾವ ಬೆದರಿಕೆಗೂ ಬಗ್ಗದೆ ಕೆಲಸ ಮಾಡುತ್ತಾರೆ. ಮುಂದೆ ನಮ್ಮ ಮನೆ ಮೇಲೆ ದಾಳಿ ನಡೆದರೂ ನಾವು ಅದಕ್ಕೆ ಸಹಕಾರ ಕೊಡಲೇಬೇಕು ಎಂದರು.

ಒಗ್ಗಟ್ಟಿನಿಂದ ಕೆಲಸ

ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ತೇಜಸ್ವಿನಿ ಅನಂತಕುಮಾರ್‌ಗೆ ಟಿಕೆಟ್‌ ದೊರೆಯದಿರುವ ಬಗ್ಗೆ ಶಾಸಕ ವಿ.ಸೋಮಣ್ಣ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿ, ಪಕ್ಷದ ಕೇಂದ್ರ ಸಂಸದೀಯ ಸಮಿತಿ ಅಭ್ಯರ್ಥಿಗಳು ಯಾರು ಎಂಬುದನ್ನು ಘೋಷಿಸಿದೆ. ಪಕ್ಷ ಒಮ್ಮೆ ಒಬ್ಬರಿಗೆ ಟಿಕೆಟ್‌ ನೀಡಿದ ನಂತರ ಎಲ್ಲ ಮುಖಂಡರು, ಕಾರ‍್ಯಕರ್ತರು ಆ ಅಭ್ಯರ್ಥಿಯ ಪರ ಕೆಲಸ ಮಾಡಬೇಕು. ಅದೇ ರೀತಿ ಎಲ್ಲರೂ ಪಕ್ಷದ ಅಭ್ಯರ್ಥಿಗಳ ಪರ ಕೆಲಸ ಮಾಡುತ್ತಾರೆ ಎಂಬ ನಂಬಿಕೆ ಇದೆ ಎಂದು ಹೇಳಿದರು.

========

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ