ಆ್ಯಪ್ನಗರ

ಚುನಾವಣೆ ಬಹಿಷ್ಕಾರ: ತಹಸೀಲ್ದಾರ್‌ ಭೇಟಿ

ಸಮೀಪದ ಶಿವನಿ ರೈಲ್ವೇ ಸ್ಟೇಷನ್‌ ಗ್ರಾಮಸ್ಥರು ಲೋಕಸಭಾ ಚುನಾವಣೆಗೆ ಸಾಮೂಹಿಕ ಬಹಿಷ್ಕಾರ ಹಾಕಿದ್ದರಿಂದ ಅಜ್ಜಂಪುರ ತಹಸೀಲ್ದಾರ್‌ ವೈ. ವಿಶ್ವೇಶ್ವರ ರೆಡ್ಡಿ ಬುಧವಾರ ಭೇಟಿ ನೀಡಿ ಅಹವಾಲು ಆಲಿಸಿದರು.

Vijaya Karnataka 28 Mar 2019, 5:00 am
ಅಜ್ಜಂಪುರ : ಸಮೀಪದ ಶಿವನಿ ರೈಲ್ವೇ ಸ್ಟೇಷನ್‌ ಗ್ರಾಮಸ್ಥರು ಲೋಕಸಭಾ ಚುನಾವಣೆಗೆ ಸಾಮೂಹಿಕ ಬಹಿಷ್ಕಾರ ಹಾಕಿದ್ದರಿಂದ ಅಜ್ಜಂಪುರ ತಹಸೀಲ್ದಾರ್‌ ವೈ. ವಿಶ್ವೇಶ್ವರ ರೆಡ್ಡಿ ಬುಧವಾರ ಭೇಟಿ ನೀಡಿ ಅಹವಾಲು ಆಲಿಸಿದರು.
Vijaya Karnataka Web CKM-27AJP04


ನಮಗೆ ಯಾವುದೇ ಸಮಸ್ಯೆ ಇಲ್ಲ. ಮೂಲ ಸಮಸ್ಯೆಯಿಂದ ವಂಚಿತರಾಗಿಲ್ಲ. ಗ್ರಾಮದಲ್ಲಿ 250ರಿಂದ 300 ಮತದಾರರಿದ್ದೇವೆ. ಮತದಾನ ಮಾಡಲು ನಾವು 2 ಕಿ.ಮೀ. ನಡೆದು ಹೋಗಬೇಕು. ಈ ಬಗ್ಗೆ ಹಲವು ವರ್ಷಗಳಿಂದ ಸಂಬಂಧಿಸಿದ ಇಲಾಖೆ ಹಿರಿಯ ಅಧಿಕಾರಿಗಳಿಗೆ ಮತ್ತು ರಾಜಕೀಯ ಮುಖಂಡರಿಗೆ ಶಿವನಿ ಆರ್‌.ಎಸ್‌.ನಲ್ಲಿ ಮತಗಟ್ಟೆ ಸ್ಥಾಪಿಸಲು ಮೌಖಿಕವಾಗಿ ಹೇಳುತ್ತಲೇ ಇದ್ದೇವೆ. ಯಾರೂ ಗಮನಹರಿಸಿಲ್ಲ. ವಿಪರೀತ ಬಿಸಿಲು, ಬಹುತೇಕರಿಗೆ ಯಾವುದೇ ವಾಹನ ಇಲ್ಲ. ವಯಸ್ಸಾದ ಮತದಾರರು ನಡೆದುಕೊಂಡು ಹೋಗಿ ಮತ ನೀಡಲು ಕಷ್ಟ. ಗ್ರಾಮದಲ್ಲೇ ಮತಗಟ್ಟೆ ಸ್ಥಾಪಿಸಿದಲ್ಲಿ ಮತ ಚಲಾವಣೆ ಮಾಡುತ್ತೇವೆ. ಇಲ್ಲವಾದಲ್ಲಿ ಸಾಮೂಹಿಕ ಬಹಿಷ್ಕಾರ ಹಾಕುತ್ತೇವೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ತಹಸೀಲ್ದಾರ್‌ ವೈ. ವಿಶ್ವೇಶ್ವರ ರೆಡ್ಡಿ ಮಾತನಾಡಿ, ಚುನಾವಣೆ ಹೊಸ್ತಿಲಲ್ಲಿ ಇನ್ನು ಕೇವಲ 20 ದಿನದಲ್ಲಿ ಬೂತ್‌ ಸ್ಥಾಪನೆ ಮಾಡಲು ಆಗಲ್ಲ. ಚುನಾವಣಾ ಪ್ರಕ್ರಿಯೆ ಈಗಾಗಲೇ ಪ್ರಾರಂಭ ಆಗಿದೆ. ಮೇಲಾಗಿ ಈಗ ಮತಗಟ್ಟೆ ಪ್ರಾರಂಭಿಸಲು ಅವಕಾಶ ಇಲ್ಲ. ಈ ಬಾರಿ ಮತದಾನಕ್ಕೆ ಸ್ಪಂದಿಸಿ, ಸಾಧ್ಯವಾದರೆ ಅಶಕ್ತರಿಗೆ ಮತದಾನಕ್ಕೆ ವಾಹನ ವ್ಯವಸ್ಥೆ ಮಾಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ. ಮುಂದಿನ ಚುನಾವಣೆಗೆ ಇದೇ ಗ್ರಾಮದಲ್ಲಿ ಮತದಾನ ಮಾಡಲು ಅವಕಾಶ ಮಾಡಿಕೊಡಲಾಗವುದು. ಮತದಾನ ಪವಿತ್ರವಾದ ಕೆಲಸವಾಗಿದ್ದು, ಕಡ್ಡಾಯವಾಗಿ ಎಲ್ಲರೂ ಮತದಾನ ಮಾಡಬೇಕು ಎಂದು ವಿನಂತಿಸಿಕೊಂಡರು. ರಾಜಸ್ವ ನಿರೀಕ್ಷ ಕ ಕೃಷ್ಣಮೂರ್ತಿ, ಸ್ಥಳೀಯ ಮುಖಂಡರಾದ ರುದ್ರಯ್ಯ, ಶಿವಲಿಂಗಸ್ವಾಮಿ, ಟಿ.ಟಿ. ಉಮಾಮಹೇಶ, ಪ್ರಸನ್ನ, ಎನ್‌.ಎಸ್‌. ರಾಜು, ಮುತ್ತಣ್ಣ, ಕಲ್ಲಪ್ಪ, ತಡಗ ಕಾಲೋನಿ ಬಾಬು, ಕುಮಾರ, ಶ್ರೀರಾಮು, ತಿಪ್ಪೇಸ್ವಾಮಿ, ಬಂಡ್ರೆ ಗ್ರಾಮದ ಬಿ.ಜಿ. ಪರಮೇಶ್ವರಪ್ಪ, ಗ್ರಾಮಸ್ಥರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ