ಆ್ಯಪ್ನಗರ

ಬಲಿಗೆ ಸಿದ್ಧವಾಗಿದೆ ವಿದ್ಯುತ್‌ ಕಂಬ

ಬಣಕಲ್‌ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಬ್ರಿಗೆ ಸಮೀಪ ವಿದ್ಯುತ್‌ ಕಂಬ ಗದ್ದೆಗೆ ವಾಲಿ ನಿಂತಿದ್ದು ಬಲಿಗೆ ಕಾದು ಕುಳಿತಂತಿದೆ.

Vijaya Karnataka 17 May 2019, 5:00 am
ಕೊಟ್ಟಿಗೆಹಾರ : ಬಣಕಲ್‌ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಬ್ರಿಗೆ ಸಮೀಪ ವಿದ್ಯುತ್‌ ಕಂಬ ಗದ್ದೆಗೆ ವಾಲಿ ನಿಂತಿದ್ದು ಬಲಿಗೆ ಕಾದು ಕುಳಿತಂತಿದೆ.
Vijaya Karnataka Web electric pole ready for the trap
ಬಲಿಗೆ ಸಿದ್ಧವಾಗಿದೆ ವಿದ್ಯುತ್‌ ಕಂಬ


ವಿಲ್ಲುಪುರಂ ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಈ ಕಂಬವಿದ್ದು ಮತ್ತೊಂದು ಬದಿಯಲ್ಲಿ ಗದ್ದೆ ಇದೆ. ರಸ್ತೆ ಪಕ್ಕದ ದಿಬ್ಬದ ಮೇಲೆ ಕಂಬವಿದ್ದು ಗದ್ದೆಯ ಕಡೆಗೆ ವಾಲಿ ನಿಂತಿದೆ. ವಿದ್ಯುತ್‌ ಪ್ರವಹಿಸುವ ತಂತಿಗಳಿರುವ ಕಂಬವು ನೆಲಕುರುಳಿದರೆ ಅವಘಡ ಸಂಭವಿಸುವ ತೀವ್ರ ಅಪಾಯ ಇದೆ. ಸದ್ಯದಲ್ಲೆ ಮಳೆಗಾಲ ಪ್ರಾರಂಭವಾಗುವುದರಿಂದ ಮಳೆಗಾಲಕ್ಕೂ ಮೊದಲೆ ಕಂಬ ಬದಲಿಸುವ ಅಗತ್ಯವಿದೆ. ಮೆಸ್ಕಾಂನವರು ಈ ಬಗ್ಗೆ ಗಮನ ಹರಿಸಿ ಕಂಬ ಬದಲಿಸಬೇಕಿದೆ.

ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಮೆಸ್ಕಾಂ ಸಹಾಯಕ ಎಂಜಿನಿಯರ್‌ ಮಂಜುನಾಥ್‌, ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ವಿಸ್ತರಣೆ ಕಾಮಗಾರಿ ನಡೆಯುತ್ತಿದ್ದು ಮೂಡಿಗೆರೆಯಿಂದ ಕೊಟ್ಟಿಗೆಹಾರದವರೆಗೆ ಹೆದ್ದಾರಿ ಬದಿಯ ಎಲ್ಲ ಕಂಬಗಳನ್ನು ಬದಲಾಯಿಸಬೇಕಾಗಿದೆ. ಸದ್ಯದಲ್ಲೆ ಈ ಕಂಬವನ್ನೂ ಬದಲಾಯಿಸಲಾಗುವುದು ಎಂದು ತಿಳಿಸಿದ್ದಾರೆ.

ಚಿತ್ರ:15ಕೆಟಿಜಿ1:ಗದ್ದೆಗೆ ವಾಲಿ ನಿಂತ ವಿದ್ಯುತ್‌ ಕಂಬ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ