ಆ್ಯಪ್ನಗರ

ಕದಳಿ ವನಕ್ಕೆ ಕಾಡಾನೆ ದಾಳಿ

ಲಿಂಗದಹಳ್ಳಿ ಹೋಬಳಿಯ ಹಲವೆಡೆ ಕಾಡಾನೆ ದಾಳಿ ನಡೆಸಿದ್ದು, ಫಸಲಿಗೆ ಬಂದ ಬಾಳೆಯನ್ನು ತಿಂದು, ತುಳಿದು ನಾಶಪಡಿಸಿವೆ.

Vijaya Karnataka 15 Jun 2019, 5:00 am
ತರೀಕೆರೆ ಗ್ರಾಮಾಂತರ : ಲಿಂಗದಹಳ್ಳಿ ಹೋಬಳಿಯ ಹಲವೆಡೆ ಕಾಡಾನೆ ದಾಳಿ ನಡೆಸಿದ್ದು, ಫಸಲಿಗೆ ಬಂದ ಬಾಳೆಯನ್ನು ತಿಂದು, ತುಳಿದು ನಾಶಪಡಿಸಿವೆ.
Vijaya Karnataka Web CKM-14SID1


ತಣಿಗೆಬೈಲು, ಹುಣಸೆಬೈಲು, ಜೈಪುರ ತಿಮ್ಮನಬೈಲು ಗ್ರಾಮಗಳಲ್ಲಿ ಇತ್ತೀಚಿನ ಕೆಲ ದಿನಗಳಿಂದ ರೈತರು ಬೆಳೆದ ತೋಟದ ಬೆಳೆಗಳ ಜಮೀನುಗಳಿಗೆ ಕಾಡಾನೆಗಳು ರಾತ್ರಿ ವೇಳೆ ನಿತ್ಯದಾಳಿ ಮಾಡುತ್ತಿರುವ ಘಟನೆಗಳು ನಡೆಯುತ್ತಲೇ ಇವೆ. ಫಸಲಿಗೆ ಬಂದಿರುವ ಬಾಳೆ, ತೆಂಗು, ಅಡಕೆ, ಮಾವು, ಹಲಸು ಸೇರಿದಂತೆ ಇನ್ನಿತರೆ ಬೆಳೆಗಳನ್ನು ತಿಂದು, ತುಳಿದು ನಾಶ ಪಡಿಸುತ್ತಿವೆ. ಕಾಟಾವಿಗೆ ಬಂದಿರುವ ಲಕ್ಷಾಂತರ ರೂ. ಬೆಲೆ ಬಾಳುವ ಬೆಳೆಗಳು ನೆಲದ ಪಾಲಾಗಿವೆ ಎಂದು ಬೆಳೆಗಾರರಾದ ಮಲ್ಲೇನಹಳ್ಳಿ ರಾಮಪ್ಪ, ಜೈಪುರ ಗ್ರಾಮದ ಪಾಪಣ್ಣ ತಿಳಿಸಿದ್ದಾರೆ.

ಲಿಂಗದಹಳ್ಳಿ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ರೂ ಆಗಿರುವ ಮಲ್ಲೇನಹಳ್ಳಿ ರಾಮಪ್ಪ, ತಿಗಡ ಸರ್ವೆ ನಂಬರ್‌ 85 ಮತ್ತು 86 ರಲ್ಲಿರುವ 6 ಎಕರೆ 20 ಗುಂಟೆ ಜಮೀನಿನಲ್ಲಿರುವ ಬಾಳೆ ಮುಂದಿನ ಒಂದೆರಡು ತಿಂಗಳುಗಳಲ್ಲಿ ಬೆಳೆ ತಮ್ಮ ಕೈ ಸೇರಬೇಕಿತ್ತು. ಆದರೆ ಕಾಡಾನೆಗಳ ದಾಳಿಯಿಂದಾಗಿ ಸಂಪೂರ್ಣ ಬಾಳೆಯ ಬೆಳೆ ಕೈ ತಪ್ಪಿ ಹೋಗಿದೆ ಎನ್ನುತ್ತಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ