ಆ್ಯಪ್ನಗರ

ಚಕ್ರಾಧಿಪತಿ ಮಹಿಷಾಸುರ ಉತ್ಸವ ನಾಳೆ

ವಿಜಯದಶಮಿ ಮುನ್ನಾ ದಿನ ಅ.18ರಂದು ಚಕ್ರಾಧಿಪತಿ ಮಹಿಷಾಸುರ ಉತ್ಸವ ನಡೆಸಲು ತಾಲೂಕಿನ ಪ್ರಗತಿಪರರು ಮತ್ತು ಮೂಲ ನಿವಾಸಿ ಸಾಂಸ್ಕೃತಿಕ ವೇದಿಕೆಯಿಂದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಪರಿಶಿಷ್ಟ ಜಾತಿ, ಪಂಗಡಗಳ ಹಿತರಕ್ಷ ಣಾ ವೇದಿಕೆ ಪ್ರಧಾನ ಕಾರ್ಯದರ್ಶಿ ಕೆ.ಕೆ.ರಾಮಯ್ಯ ತಿಳಿಸಿದರು.

Vijaya Karnataka 16 Oct 2018, 7:36 pm
ಮೂಡಿಗೆರೆ : ವಿಜಯದಶಮಿ ಮುನ್ನಾ ದಿನ ಅ.18ರಂದು ಚಕ್ರಾಧಿಪತಿ ಮಹಿಷಾಸುರ ಉತ್ಸವ ನಡೆಸಲು ತಾಲೂಕಿನ ಪ್ರಗತಿಪರರು ಮತ್ತು ಮೂಲ ನಿವಾಸಿ ಸಾಂಸ್ಕೃತಿಕ ವೇದಿಕೆಯಿಂದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಪರಿಶಿಷ್ಟ ಜಾತಿ, ಪಂಗಡಗಳ ಹಿತರಕ್ಷ ಣಾ ವೇದಿಕೆ ಪ್ರಧಾನ ಕಾರ್ಯದರ್ಶಿ ಕೆ.ಕೆ.ರಾಮಯ್ಯ ತಿಳಿಸಿದರು.
Vijaya Karnataka Web emperor mahishasura festival tomorrow
ಚಕ್ರಾಧಿಪತಿ ಮಹಿಷಾಸುರ ಉತ್ಸವ ನಾಳೆ


ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಂದು ಮಧ್ಯಾಹ್ನ 2ಗಂಟೆಗೆ ಪಟ್ಟಣದ ಪ್ರಮುಖ ಬೀದಿಯಲ್ಲಿ ಸಾವಿರಾರು ಮಂದಿ ಪ್ರಗತಿಪರರು ಮತ್ತು ಚಿಂತಕರನ್ನೊಳಗೊಂಡ ತಂಡ ಮೆರವಣಿಗೆಯಲ್ಲಿ ಸಾಗಿ ಲಯನ್ಸ್‌ ವೃತ್ತದಲ್ಲಿ ಬೃಹತ್‌ ಸಮಾವೇಶ ನಡೆಸಲಾಗುವುದು. ಮೈಸೂರಿನ ಮಾನಸ ಗಂಗೋತ್ರಿ ವಿ.ವಿ.ಪ್ರಾಧ್ಯಾಪಕ ಮಹೇಶ್‌ಚಂದ್ರ ಗುರು ಮಹಿಷಾಸುರನ ಬಗ್ಗೆ ಸಂಕ್ಷಿಪ್ತ ವಿವರ ನೀಡಲಿದ್ದಾರೆ ಎಂದು ತಿಳಿಸಿದರು.

ಕೋಮುವಾದವನ್ನು ಮೈಗೂಡಿಸಿಕೊಂಡಿರುವ ದುಷ್ಟರು ರಾಜಕೀಯ ಕಾರಣಕ್ಕಾಗಿ ದುರ್ಗೆ ಪ್ರತಿಮೆಯನ್ನು ಪ್ರತಿಷ್ಠಾಪಿಸಿಕೊಂಡು ಮಹಿಷಾಸುರ ಕೆಟ್ಟವನು, ಆತ ರಾಕ್ಷ ಸನಾಗಿದ್ದ, ಜನಾಡಳಿತ ವಿರೋಧಿಯಾಗಿದ್ದ ಎಂದು ಕಟ್ಟು ಕಥೆ ಸೃಷ್ಟಿಸಿ ಮೈಸೂರು ದಸರಾ ಹೆಸರಿನಲ್ಲಿ ವಿಜಯ ದಶಮಿಯಂದು ಮಹಿಷಾಸುರ ಸಂಹಾರ ನಡೆಸಲಾಗುತ್ತಿದೆ. ಇದು ಹೀಗೆ ಮುಂದುವರಿದರೆ ಮುಂದಿನ ದಿನದಲ್ಲಿ ಜನಸಾಮಾನ್ಯರನ್ನೇ ಸಂಹಾರ ಮಾಡಲು ಮುಂದಾಗುವ ಅಪಾಯವಿದೆ. ಇತಿಹಾಸದ ದೃಷ್ಟಿಕೋನದಲ್ಲಿ ಮಹಿಷಾ ರಾಕ್ಷ ಸನಾಗಿರಲಿಲ್ಲ. ಆತ ಮೂಲ ನಿವಾಸಿಗಳ ರಕ್ಷ ಕನಾಗಿದ್ದ. ವೈದಿಕರ ಅಧಾರ್ಮಿಕ ಆಚರಣೆಗಳನ್ನು ವಿರೋಧಿಸಿ ಜನರ ಕಲ್ಯಾಣಕ್ಕಾಗಿ ಶ್ರಮಿಸಿದ್ದ ಒಬ್ಬ ಬೌದ್ಧ ರಾಜನಾಗಿದ್ದ ಎಂದು ಹೇಳಿದರು.

ಪ್ರಗತಿಪರ ಮೂಲ ನಿವಾಸಿ ಸಾಂಸ್ಕೃತಿಕ ವೇದಿಕೆ ಮುಖಂಡ ಬಕ್ಕಿ ಮಂಜು ಮಾತನಾಡಿ, ಚಾಮುಂಡಿ ಬೆಟ್ಟದಲ್ಲಿ ಚಾಮುಂಡಿಗೂ ಮಹಿಷಾಸುರನಿಗೂ ಯುದ್ಧ ನಡೆದ ಯಾವುದೇ ಕುರುಹುಗಳು ಇದೂವರೆಗೂ ಎಲ್ಲಿಯೂ ಉಲ್ಲೇಖಗೊಂಡಿಲ್ಲ. ಪುರಾಣಕ್ಕೂ ಇತಿಹಾಸಕ್ಕೂ ಅಜಗಜಾಂತರವಿದೆ. ಇತಿಹಾಸವನ್ನು ನಂಬಬಹುದು. ಆದರೆ ಪುರಾಣ ಎಂಬುದು ಸುಳ್ಳಿನ ಕಂತೆ. ಇತಿಹಾಸದ ಪ್ರಕಾರ ಮಹಿಷಾಸುರನ ಹೆಸರನ್ನೇ ಮೈಸೂರೆಂದು ಆ ಊರಿಗೆ ನಾಮಕರಣ ಮಾಡಲಾಗಿದೆ. ರಾಜನೊಬ್ಬನ ಪ್ರತಿಕೃತಿಯನ್ನು ದುಷ್ಟನದೆಂದು ಬಿಂಬಿಸಿ ಸಂಹಾರ ಮಾಡುವುದು ಸರಿಯಲ್ಲ. ಇದಕ್ಕೆ ಪ್ರಗತಿಪರರ ವಿರೋಧವಿದೆ ಎಂದು ಹೇಳಿದರು.

ಮುಖಂಡ ಯು.ಬಿ.ಮಂಜಯ್ಯ ಮಾತನಾಡಿ, ಮಹಿಷ ರಾಜನನ್ನು ನಂಬದ ಮನುವಾದಿಗಳು ಪುರಾಣದ ನೆಪವೊಡ್ಡಿ ಶ್ರೀರಾಮನನ್ನು ದೇವರೆಂದು ಬಿಂಬಿಸುತ್ತಿದ್ದಾರೆ. ಇತಿಹಾಸದ ಪ್ರಕಾರ ಶ್ರೀರಾಮ ದೇವರಾಗಿದ್ದಾರೆ ಎಂಬುವುದು ಎಲ್ಲಿಯೂ ಉಲ್ಲೇಖವಿಲ್ಲ. ಧಾರ್ಮಿಕ ಅಲ್ಪಸಂಖ್ಯಾತರು ಮತ್ತು ದಲಿತರ ಮೇಲೆ ದೌರ್ಜನ್ಯ ದಬ್ಬಾಳಿಕೆ ಮೂಲಕ ಆ ವರ್ಗವನ್ನು ತುಳಿಯಲು ಶ್ರೀರಾಮನ ಹೆಸರನ್ನು ಕೋಮುವಾದಿಗಳು ಬಳಸುತ್ತಿದ್ದಾರೆ. ಅದರಂತೆ ಮಹಿಷಾಸುರನನ್ನು ಸುಳ್ಳು ಪ್ರಚಾರ ಮೂಲಕ ಸಂಹಾರ ಮಾಡಿ ಮೆರೆಯುವುದು ಸರಿಯಲ್ಲ ಎಂದು ಹೇಳಿದರು.
ಗೋಷ್ಠಿಯಲ್ಲಿ ಪ್ರಗತಿಪರ ಮುಖಂಡರಾದ ಯು.ಬಿ.ಮಂಜಯ್ಯ, ಬೆಟಗೆರೆ ಮಂಜುನಾಥ್‌, ಶ್ರೀಕಾಂತ್‌ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ