ಆ್ಯಪ್ನಗರ

ಸಾಂಪ್ರದಾಯಿಕ ಮಿಶ್ರಬೆಳೆ ಕೃಷಿಗೆ ಮಹತ್ವ ನೀಡಿ

ಪೂರ್ವಿಕರಿಂದ ಬಂದ ಕೃಷಿ ಪದ್ಧತಿಯ ಜ್ಞಾನವನ್ನು ಸದ್ಬಳಕೆ ಮಾಡಿಕೊಳ್ಳದೇ ತಾತ್ಸಾರ ಮಾಡಿದ ಪರಿಣಾಮ ಆಧುನಿಕ ಬೆಳೆ ಪದ್ದತಿ ರೈತರ ಬದುಕಿನ ನಗುಮೊಗವನ್ನು ಕಸಿದಿದ್ದು, ರೈತರು ಸಾಂಪ್ರದಾಯಿಕ ಕೃಷಿ ಪದ್ಧತಿಗೆ ಮಹತ್ವ ನೀಡಬೇಕೆಂದು ನೈಸರ್ಗಿಕ ಕೃಷಿಕ ಶಿವನಂಜಯ್ಯ ಬಾಳೆಕಾಯಿ ತಿಳಿಸಿದರು.

Vijaya Karnataka 10 Nov 2018, 5:00 am
ಬೀರೂರು : ಪೂರ್ವಿಕರಿಂದ ಬಂದ ಕೃಷಿ ಪದ್ಧತಿಯ ಜ್ಞಾನವನ್ನು ಸದ್ಬಳಕೆ ಮಾಡಿಕೊಳ್ಳದೇ ತಾತ್ಸಾರ ಮಾಡಿದ ಪರಿಣಾಮ ಆಧುನಿಕ ಬೆಳೆ ಪದ್ದತಿ ರೈತರ ಬದುಕಿನ ನಗುಮೊಗವನ್ನು ಕಸಿದಿದ್ದು, ರೈತರು ಸಾಂಪ್ರದಾಯಿಕ ಕೃಷಿ ಪದ್ಧತಿಗೆ ಮಹತ್ವ ನೀಡಬೇಕೆಂದು ನೈಸರ್ಗಿಕ ಕೃಷಿಕ ಶಿವನಂಜಯ್ಯ ಬಾಳೆಕಾಯಿ ತಿಳಿಸಿದರು.
Vijaya Karnataka Web CKM-9BRR1


ಪಟ್ಟಣದ ರಾಜಾಜಿನಗರ ಬಡಾವಣೆಯ ಉಪನ್ಯಾಸಕ ಬಿ.ಅಶೋಕ್‌ ಮನೆಯಲ್ಲಿ ಶುಕ್ರವಾರ ನಡೆದ ವಿಚಾರ ಸಂಕಿರಣದಲ್ಲಿ 'ಕೃಷಿ ಕ್ಷೇತ್ರದ ತಲ್ಲಣ ಹಾಗೂ ಪರಿಹಾರೋಪಾಯ' ಕುರಿತು ಉಪನ್ಯಾಸ ನೀಡಿದರು.

ಪೂರ್ವಿಕರು ವೈವಿಧ್ಯಮಯ ಸಾವಯವ ಕೃಷಿಗೆ ಮಹತ್ವ ನೀಡಿ ರಾಗಿ ಬೆಳೆಯುವ ಸಂದರ್ಭದಲ್ಲಿ ಅವರೆ,ತೊಗರಿ,ಹುಚ್ಚೆಳ್ಳು,ತೊಗರಿ,ಜೋಳ ಸೇರಿದಂತೆ ಹಲವು ಬೆಳೆಯನ್ನು ಹೊಲದಲ್ಲಿ ಬಿತ್ತುವ ಮೂಲಕ ಆರೋಗ್ಯಪೂರ್ಣ ಉತ್ತಮ ಇಳುವರಿಯ ಕೃಷಿಗೆ ಮಹತ್ವನೀಡಿದ್ದರು. ಆದರೆ, ಇಂದು ಎಡಬಿಡಂಗಿ ಕೃಷಿಯಿಂದ ಬೆಳೆಪದ್ಧತಿ ನಾಶ ಹಾಗೂ ರಾಸಾಯನಿಕ ಬಳಕೆ ಮೂಲಕ ರೈತರ ಆತ್ಮಹತ್ಯೆಯಂತಹ ಪ್ರಕರಣಗಳು ಹೆಚ್ಚುತ್ತಿವೆ. ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ,ಕೃಷಿ ಉಪಕಸುಬಿಗೆ ಆದ್ಯತೆ,ಪರಿಸರ ಹಾಗೂ ಪ್ರದೇಶಾಧಾರಿತ ಕೃಷಿ ಹಾಗೂ ಮರ ಹಾಗೂ ಫಲ ಆಧರಿತ ಕೃಷಿಗೆ ಮಹತ್ವ ನೀಡಿ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಭಾಸ್ಕರರಾವ್‌, ಇಂದು ಕೃಷಿ ಕ್ಷೇತ್ರದ ತಲ್ಲಣವಷ್ಟೇ ಅಲ್ಲ ಎಲ್ಲಾ ಕ್ಷೇತ್ರಗಳಲ್ಲೂ ತಲ್ಲಣವಾಗುತ್ತಿದೆ. ಮುಂದಿನ ದಿನಗಳಲ್ಲಿ ರೈತರ ಆತ್ಮಹತ್ಯೆಯಲ್ಲ, ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರತಿದಿನದ ಸುದ್ದಿಯಾಗುವ ಲಕ್ಷ ಣ ಗೋಚರಿಸುತ್ತಿದೆ. ಹಿಂದೆ ತಂದೆತಾಯಿಗೆ ಮಕ್ಕಳು ಹೆದರುತ್ತಿದ್ದರೆ ಇಂದು ಮಕ್ಕಳಿಗೆ ತಂದೆತಾಯಿ ಹೆದರುವ ಸ್ಥಿತಿ ನಿರ್ಮಾಣವಾಗಿದೆ. ಮಕ್ಕಳಿಗೆ ಎಲ್ಲಾ ರೀತಿಯ ಸೌಲಭ್ಯನೀಡಿ ಕಷ್ಟಸುಖದ ಅರಿವನ್ನು ಕಲಿಸದಿರುವ ಪರಿಣಾಮ ನಮ್ಮ ಕುಟುಂಬ ಸಂಸ್ಕಾರ ಮೌಲ್ಯಗಳನ್ನು ಹಾಳಾಗುತ್ತಿದೆ. ಅಪರಾಧಯುಕ್ತ ಸಮಾಜ ನಿರ್ಮಾಣಕ್ಕೆ ನಾಂದಿಹಾಡುತ್ತಿದ್ದೇವೆ ಎಂದು ವಿಷಾದಿಸಿದರು.

ಪ್ರಾಸ್ತಾವಿಕ ಮಾತನಾಡಿದ ನೈಸರ್ಗಿಕ ಕೃಷಿಕ ಚಂದ್ರಶೇಖರ ನಾರಣಾಪುರ, ದೇಶದಲ್ಲಿ ಶೇ. 87ರಷ್ಟಿದ್ದ ಕೃಷಿಕರ ಸಂಖ್ಯೆ ಇಂದು ಶೇ. 47ಕ್ಕೆ ಇಳಿದಿದೆ. ನಾವೂ ಇಸ್ರೇಲ್‌ ಕೃಷಿ ಅನುಸರಣೆ ಮಾಡ ಹೊರಟಿರುವುದು ನಮ್ಮ ದುರ್ದೈವ. ಕೃಷಿ ಪ್ರಾಧಾನ್ಯತೆ ಮರೆಯಾಗಿ ಕೃಷಿಕರ ಮಕ್ಕಳು ಪಟ್ಟಣ ಸೇರುತ್ತಿರುವುದು ನಮ್ಮ ಸಾಂಪ್ರದಾಯಿಕತೆಗೆ ಬಿದ್ದ ಕೊಡಲಿ ಪೆಟ್ಟು ಎಂದರು.

ಜಲತಜ್ಞ ಹಾಗೂ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎನ್‌.ಜಿ.ದೇವರಾಜರೆಡ್ಡಿ, ಭವಿಷ್ಯಕ್ಕಾಗಿ ನೀರಿನ ಸಂರಕ್ಷ ಣೆ ಹಾಗೂ ನಿರ್ವಹಣೆ ಕುರಿತು ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು. ನಿವೃತ್ತ ಅಧೀಕ್ಷ ಕ ಎಂಜಿನಿಯರ್‌ ಗೌರಾಪುರ ಜಿ.ಎಚ್‌.ಮುರುಗೇಶಪ್ಪ ಅಧ್ಯಕ್ಷ ತೆ ವಹಿಸಿ ಮಾತನಾಡಿದರು.

ಬಡಗನಾಡು ರೆಡ್ಡಿ ಸಮಾಜ ಅಧ್ಯಕ್ಷ ರೇವಣಸಿದ್ದಪ್ಪ, ಸಾಹಿತಿ ಸಿಂಗಟಗೆರೆ ಸಿದ್ದಪ್ಪ, ಪ್ರಾಧ್ಯಾಪಕ ಅಶೋಕ್‌ ಇದ್ದರು. ಸಂಜನಾ ಸಂಗಡಿಗರು ಪ್ರಾರ್ಥಿಸಿ, ಅಶೋಕ್‌ ಸ್ವಾಗತಿಸಿ, ಸುದರ್ಶನ್‌ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ