ಆ್ಯಪ್ನಗರ

ಕೆರೆ ಸ್ವಚ್ಛತೆಗೆ ಮುಂದಾದ ಪರಿಸರ ಪ್ರೇಮಿ

ಗಣೇಶೋತ್ಸವವನ್ನು ಸಂಭ್ರದಿಂದ ಆಚರಿಸುವ ಯುವಕರು ಪರಿಸರ ಸಂರಕ್ಷ ಣೆಯ ಕಾಳಜಿಯನ್ನು ಮರೆತು ಕೆರೆಗಳಿಗೆ ಗಣಪತಿ ವಿಸರ್ಜನೆ ಮಾಡಿ ಕೈತೊಳೆದುಕೊಳ್ಳುತ್ತಿರುವುದು ಸಾಮಾನ್ಯ. ಆದರೆ ಇಲ್ಲೊಬ್ಬ ಪರಿಸರ ಪ್ರೇಮಿ ಮಕ್ಕಳೊಂದಿಗೆ ಕೆರೆ ಸ್ವಚ್ಛಗೊಳಿಸುವ ಕಾಯಕದಲ್ಲಿ ತೊಡಗಿದ್ದಾರೆ.

Vijaya Karnataka 29 Sep 2018, 5:00 am
ಬೀರೂರು : ಗಣೇಶೋತ್ಸವವನ್ನು ಸಂಭ್ರದಿಂದ ಆಚರಿಸುವ ಯುವಕರು ಪರಿಸರ ಸಂರಕ್ಷ ಣೆಯ ಕಾಳಜಿಯನ್ನು ಮರೆತು ಕೆರೆಗಳಿಗೆ ಗಣಪತಿ ವಿಸರ್ಜನೆ ಮಾಡಿ ಕೈತೊಳೆದುಕೊಳ್ಳುತ್ತಿರುವುದು ಸಾಮಾನ್ಯ. ಆದರೆ ಇಲ್ಲೊಬ್ಬ ಪರಿಸರ ಪ್ರೇಮಿ ಮಕ್ಕಳೊಂದಿಗೆ ಕೆರೆ ಸ್ವಚ್ಛಗೊಳಿಸುವ ಕಾಯಕದಲ್ಲಿ ತೊಡಗಿದ್ದಾರೆ.
Vijaya Karnataka Web CKM-28BRR12


ಪಟ್ಟಣದಲ್ಲಿನ ಮಕ್ಕಳ ಕೂಟದಿಂದ ಶ್ರೀ ಪಟ್ಟಾಭಿರಾಮ ಚಂದ್ರಮೌಳೀಶ್ವರ ದೇವಾಲಯದಲ್ಲಿ ವಿದ್ಯಾಗಣಪತಿಯನ್ನು ಪ್ರತಿಷ್ಠಾಪಿಸಿ ಮಳೆಯಿಂದ ಈ ಬಾರಿ ತುಂಬಿದ್ದ ದೇವನಕೆರೆಯಲ್ಲಿ ಗಣಪತಿ ವಿಸರ್ಜಿಸಲು ಸಿದ್ಧ್ದತೆ ನಡೆಸಿದ್ದರು. ಈ ಮೊದಲು ಹಲವಾರು ಗಣಪತಿ ಮಣ್ಣಿನ ಮೂರ್ತಿಗಳನ್ನು ಇಲ್ಲಿ ವಿಸರ್ಜಿಸಲಾಗಿತ್ತು ಅಲ್ಲದೇ ನಾಲ್ಕಾರು ವರ್ಷದಿಂದ ಮಳೆಯಿಲ್ಲದೇ ಕೆರೆ ಬತ್ತಿದ್ದು ಗಿಡಗಂಟೆ ಜೆಂಡು ಹಾಗೂ ಹರಕು ಬಟ್ಟೆಗಳು ಕೆರೆಯ ದಂಡೆಯನ್ನು ಆಕ್ರಮಿಸಿ ಕೊಳಚೆಪ್ರದೇಶವಾಗಿ ಮಾರ್ಪಟ್ಟಿತ್ತು. ಇದನ್ನು ಗಮನಿಸಿದ ಪರಿಸರ ಪ್ರೇಮಿ ಕೇಶವಶಾಸ್ತ್ರೀ ಕೆರೆಯ ದಂಡೆಯ ಬಹುಭಾಗವನ್ನು ಸ್ವಚ್ಛಗೊಳಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ. ಕೆರೆಯ ಬದಿ ಬಿದಿದ್ದ ಮದ್ಯದ ಬಾಟಲಿ, ಗಾಜಿನಚೂರುಗಳನ್ನು ತೆರವುಗೊಳಿಸಿದ್ದಾರೆ.

ಈ ಕುರಿತಂತೆ ಅಭಿಪ್ರಾಯ ಹಂಚಿಕೊಂಡ ಪರಿಸರಪ್ರೇಮಿ, ಇಂದು ಎಲ್ಲರೂ ಸ್ವಾರ್ಥಕ್ಕಾಗಿ ಮಾತ್ರ ಚಿಂತನೆ ಮಾಡುತ್ತಾರೆ. ಕಣ್ಣಿದ್ದು ಕುರುಡರಂತೆ ವರ್ತಿಸುತ್ತಾರೆ. ಕೈಲಾದ ಸೇವೆಯನ್ನು ಯಾವರೂಪದಲ್ಲಿ ಮಾಡಿದರೂ ಜನಹಿತಕ್ಕೆ ಶ್ರಮ ಬಳಕೆಯಾದರೆ ಪರಿಸರ ಸಂರಕ್ಷ ಣೆಗೆ ಅದೇ ನಾವು ನೀಡುವ ದೊಡ್ಡಕೊಡುಗೆ.ಜನ ಇಲ್ಲಿಯೇ ತಮ್ಮ ಬಟ್ಟೆಗಳನ್ನು ತೊಳೆಯುತ್ತಾರೆ,ಮಲಿನಯುಕ್ತ ನೀರಿನಿಂದ ಪಾಚಿ ಸಂಗ್ರಹಗೊಂಡು ಕೆರೆಯ ನೀರು ಬಳಕೆಗೆ ಯೋಗ್ಯವಾಗದಂತಹ ವಾತಾವರಣ ನಿರ್ಮಿಸುವ ಇಂತಹ ಚಟುವಟಿಕೆ ಕಡಿವಾಣ ಹಾಕಲು ಸಣ್ಣನೀರಾವರಿ ಇಲಾಖೆ ಕೆರೆ ಸಂರಕ್ಷ ಣೆಗೆ ಸೂಕ್ತ ಕ್ರಮವಹಿಸಬೇಕಿದೆ ಎಂಬುದು ಇವರ ಮನವಿ.

---------------

ಗಣಪತಿ ವಿಸರ್ಜನೆ ವೇಳೆ ಮಕ್ಕಳ ಕಾಳಜಿ ಹಾಗೂ ಪರಿಸರ ಸಂರಕ್ಷ ಣೆಯ ಪ್ರೇಮ ಮೆರೆದ ಯುವಕ ಕೇಶವಶಾಸ್ತ್ರೀ ಯುವಪೀಳಿಗೆಯ ಒಳ್ಳೆಯ ಚಿಂತನೆಗಳಿಗೆ ನೀಡಿದ ದೊಡ್ಡ ಕೊಡುಗೆಯಾಗಿದೆ .

-ದಿನೇಶ್‌ ಬೀರೂರು.


----------

ಕೆರೆಯ ನೀರನ್ನು ಮಲಿನಗೊಳಿಸದಂತೆ ಎಚ್ಚರಿಕೆ ಹಾಗೂ ಕೆರೆಯ ದಂಡೆಗಳಲ್ಲಿ ಸೂಕ್ತ ನಾಮಫಲಕ ಅಳವಡಿಸುವ ಮೂಲಕ ಜಾಗೃತಿ ಮೂಡಿಸುವ ಕೆಲಸವನ್ನು ನೀರಾವರಿ ಇಲಾಖೆ ಮಾಡಬೇಕಿದೆ.

-ಪ್ರಸನ್ನಕುಮಾರ್‌ ಬೀರೂರು.


-----------------


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ