ಆ್ಯಪ್ನಗರ

ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷ ಣೆ ಕಾಳಜಿಯೂ ಇರಲಿ

ಹೆಚ್ಚುತ್ತಿರುವ ಜಾಗತಿಕ ತಾಪಮಾನ ಹಾಗೂ ಪರಿಸರ ಸಂರಕ್ಷ ಣೆಯ ನಿರ್ಲಕ್ಷ್ಯ ಪರಿಣಾಮ ನೈಸರ್ಗಿಕ ಹಾಗೂ ಪ್ರಾಕೃತಿಕ ವಿಕೋಪಗಳ ಅನಾಹುತ ಹೆಚ್ಚುತ್ತಿದ್ದು ವಿದ್ಯಾರ್ಥಿಗಳು ಪರಿಸರ ಸಂರಕ್ಷ ಣೆ ಕಾಳಜಿ ವಹಿಸಬೇಕೆಂದು ಜೋಡಿತಿಮ್ಮಾಪುರ ಸರಕಾರಿ ಪ್ರೌಢಶಾಲಾ ವಿಜ್ಞಾನ ಶಿಕ್ಷ ಕ ಸಂಪತ್‌ಕುಮಾರ್‌ ಹೇಳಿದರು.

Vijaya Karnataka 30 Jul 2019, 5:00 am
ಬೀರೂರು : ಹೆಚ್ಚುತ್ತಿರುವ ಜಾಗತಿಕ ತಾಪಮಾನ ಹಾಗೂ ಪರಿಸರ ಸಂರಕ್ಷ ಣೆಯ ನಿರ್ಲಕ್ಷ್ಯ ಪರಿಣಾಮ ನೈಸರ್ಗಿಕ ಹಾಗೂ ಪ್ರಾಕೃತಿಕ ವಿಕೋಪಗಳ ಅನಾಹುತ ಹೆಚ್ಚುತ್ತಿದ್ದು ವಿದ್ಯಾರ್ಥಿಗಳು ಪರಿಸರ ಸಂರಕ್ಷ ಣೆ ಕಾಳಜಿ ವಹಿಸಬೇಕೆಂದು ಜೋಡಿತಿಮ್ಮಾಪುರ ಸರಕಾರಿ ಪ್ರೌಢಶಾಲಾ ವಿಜ್ಞಾನ ಶಿಕ್ಷ ಕ ಸಂಪತ್‌ಕುಮಾರ್‌ ಹೇಳಿದರು.
Vijaya Karnataka Web CKM-PHO BRR


ಪಟ್ಟಣದ ಕೆಎಲ್‌ಕೆ ಪದವಿಪೂರ್ವ ಕಾಲೇಜಿನಲ್ಲಿ ಸೋಮವಾರ ನಡೆದ ಜಲಾಮೃತ ಯೋಜನಾ ಕಾರ್ಯಕ್ರಮದಲ್ಲಿ ಜಲ ಹಾಗೂ ಪರಿಸರ ಸಂರಕ್ಷ ಣೆ ಕುರಿತಂತೆ ಉಪನ್ಯಾಸ ನೀಡಿದರು.

ದೇಶದ 117 ಜಿಲ್ಲೆಗಳ 1500ಕ್ಕೂ ಹೆಚ್ಚಿನ ತಾಲೂಕಿನಲ್ಲಿ ಅಂತರ್ಜಲ ಕುಸಿತದಿಂದ ಪರಿಸರದ ಮೇಲೆ ಹೆಚ್ಚಿನ ದುಷ್ಪರಿಣಾಮ ಉಂಟಾಗಿದೆ. ಕಳೆದ ಏಳೆಂಟು ವರ್ಷಗಳಲ್ಲಿ ಈ ಭಾಗಗಳಲ್ಲಿ ಉಂಟಾಗಿರುವ ಮಳೆಯ ಕೊರತೆ ಹಾಗೂ ವಾರ್ಷಿಕ ಮಳೆ ಕಡಿತದಿಂದ ಉಂಟಾಗಿರುವ ಸಮಸ್ಯೆಗಳ ಪರಿಹಾರಕ್ಕೆ ಸರಕಾರದ ಕಾರ್ಯಕ್ರಮದ ಜತೆ ವಿದ್ಯಾರ್ಥಿಗಳು, ಸಾರ್ವಜನಿಕರು, ಪರಿಸರ ಪ್ರೇಮಿಗಳು ಕೈಜೋಡಿಸಬೇಕಿದೆ ಎಂದರು.

ಶಾಲಾ ಆವರಣದಲ್ಲಿ ಸಸಿನೆಡುವಿಕೆ, ನೀರಿನ ಇಂಗು ಗುಂಡಿಗೆ ಆದ್ಯತೆ, ಕೃಷಿಭೂಮಿಯ ಹತ್ತಿರ ಬದುಗಳ ನಿರ್ಮಾಣ, ಚೆಕ್‌ಡ್ಯಾಂ, ಕೆರೆಗಳ ಸಂರಕ್ಷ ಣೆ, ಸಸಿ ದತ್ತು ತೆಗೆದುಕೊಳ್ಳುವಿಕೆ, ಕೊಳವೆ ಬಾವಿಗಳ ಮರುಪೂರ್ಣ ಬಳಕೆಗೆ ಮಹತ್ವ, ಬೀದಿನಾಟಕ,ಚಿತ್ರಕಲಾ ಸ್ಪರ್ಧೆ ಸೇರಿದಂತೆ ಶಾಲಾ ಕಾಲೇಜು ಹಾಗೂ ಸರಕಾರಿ ಕಚೇರಿಗಳಲ್ಲಿ ಮಳೆಕೊಯ್ಲು ನಿರ್ಮಾಣಕ್ಕೆ ಆದ್ಯತೆ ನೀಡಬೇಕೆಂದರು.

ಪುರಸಭೆ ಪರಿಸರ ಎಂಜಿನಿಯರ್‌ ನೂರುದ್ದಿನ್‌ ಮಾತನಾಡಿ, ಪಟ್ಟಣದಲ್ಲಿನ ಶಾಲೆಗಳಲ್ಲಿ ಮಕ್ಕಳು ಪರಿಸರ ಸಂರಕ್ಷ ಣೆಗೆ ತೋರುವ ಕಾಳಜಿಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು. ಪಟ್ಟಣದಲ್ಲಿ 3ಸಾವಿರಕ್ಕೂ ಹೆಚ್ಚಿನ ಸಸಿಗಳನ್ನು ವಿವಿಧ ಬಡಾವಣೆಗಳಲ್ಲಿ ನೆಟ್ಟು ಪೋಷಿಸುತ್ತಿದ್ದು ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿ ಹೆಚ್ಚಾದರೆ ಸಸ್ಯ ಸಂರಕ್ಷ ಣೆ ಸುಲಭ ಸಾಧ್ಯ ಎಂದರು.

ಕಾಲೇಜು ಪ್ರಾಚಾರ್ಯ ಡಾ.ತವರಾಜ್‌, ಉಪನ್ಯಾಸಕರಾದ ಯೋಗರಾಜ್‌, ಮಲ್ಲೇಶಪ್ಪ, ಭಾಗ್ಯಮ್ಮ, ಕೃಷ್ಣಸ್ವಾಮಿ, ಗಿರಿಧರ್‌, ಸತೀಶ್‌ಕುಮಾರ್‌ ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ