ಆ್ಯಪ್ನಗರ

ಪರಿಸರ ಸಂರಕ್ಷ ಣೆ ನಮ್ಮೆಲ್ಲರ ಹೊಣೆ

ಪ್ರತಿಯೊಬ್ಬರೂ ಕೂಡ ಪರಿಸರ ಸಂರಕ್ಷ ಣೆಗೆ ಮುಂದಾಗಬೇಕು ಎಂದು ಜಾಮಿಯಾ ಮಸ್ಜೀದ್‌ನ ಧರ್ಮಗುರು ಮೌಲಾನಾ ಇರ್ಫಾನ್‌ ಹೇಳಿದರು.

Vijaya Karnataka 22 Jul 2019, 5:00 am
ನರಸಿಂಹರಾಜಪುರ : ಪ್ರತಿಯೊಬ್ಬರೂ ಕೂಡ ಪರಿಸರ ಸಂರಕ್ಷ ಣೆಗೆ ಮುಂದಾಗಬೇಕು ಎಂದು ಜಾಮಿಯಾ ಮಸ್ಜೀದ್‌ನ ಧರ್ಮಗುರು ಮೌಲಾನಾ ಇರ್ಫಾನ್‌ ಹೇಳಿದರು.
Vijaya Karnataka Web CKM-20nrp2


ಪಟ್ಟಣದ ಜಾಮಿಯಾ ಮಸ್ಜೀದ್‌ನಲ್ಲಿ ವಿಶೇಷ ಪ್ರಾರ್ಥನೆ ನಂತರ ವಲಯ ಅರಣ್ಯ ಇಲಾಖೆ ವತಿಯಿಂದ ಭಾನುವಾರ ಹಸಿರು ಕರ್ನಾಟಕ ಯೋಜನೆಯಡಿ ಮಸ್ಜೀದ್‌ ಸುತ್ತಾ ಗಿಡ ನೆಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅರಣ್ಯ ಇಲಾಖೆ ಪರಿಸರ ಸಂರಕ್ಷ ಣೆಗಾಗಿ ಅನೇಕ ಯೋಜನೆಗಳ ಮುಖಾಂತರ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಆದ್ದರಿಂದ ಇಲಾಖೆಯೊಂದಿಗೆ ನಾವೂ ಕೂಡ ಕೈ ಜೋಡಿಸಿ, ಪರಿಸರ ಸಂರಕ್ಷಿಸಬೇಕು ಎಂದರು.

ಪಟ್ಟಣದ ಜಾಮಿಯಾ ಮಸ್ಜೀದ್‌ ಸುತ್ತಾ ಹಲವಾರು ಜಾತಿಯ ಹಣ್ಣಿನ ಗಿಡಗಳು, ನೆರಳು ನೀಡುವ ಗಿಡಗಳನ್ನು ನೆಡಲಾಯಿತು.

ಈ ಸಂದರ್ಭ ಮಸ್ಜೀದ್‌ ಅಧ್ಯಕ್ಷ ಆಬೀದ್‌, ಸಿಬ್ಬುತ್ತುಲ್ಲ, ನರಸಿಂಹರಾಜಪುರ ವಲಯ ಅರಣ್ಯಾಧಿಕಾರಿ ಜಿ.ಟಿ.ರಂಗನಾಥ್‌, ಉಪ ವಲಯ ಅರಣ್ಯಾಧಿಕಾರಿಗಳಾದ ಗೌಸ್‌ ಮೊಹಿಯುದ್ದೀನ್‌, ಮನೋಹರ್‌ ನಾಯಕ್‌, ಮಸ್ಜೀದ್‌ನ ಕಾರ್ಯದರ್ಶಿಗಳು ಹಾಗೂ ಖಜಾಂಚಿ, ಪದಾಧಿಕಾರಿಗಳು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ