ಆ್ಯಪ್ನಗರ

ಪರಿಸರ ಸಂರಕ್ಷ ಣೆ ಎಲ್ಲರ ಹೊಣೆ

ಪರಿಸರ ಸಂರಕ್ಷ ಣೆ ನಮ್ಮೆಲ್ಲರ ಹೊಣೆಯಾಗಿದ್ದು, ಆರೋಗ್ಯ ಪೂರ್ಣ ಬದುಕಿಗೆ ಪರಸರವನ್ನು ಸ್ವಚ್ಛವಾಗಿ ಕಾಪಾಡಿಕೊಳ್ಳುವುದು ಅತಿ ಅಗತ್ಯ ಎಂದು ಒಂದನೇ ಹೆಚ್ಚುವರಿ ಹಿರಿಯ ಸಿವಿಲ್‌ ನ್ಯಾಯಾಧೀಶೆ ಕೆ.ಎಸ್‌.ಶಿಲ್ಪಾ ಹೇಳಿದರು.

Vijaya Karnataka 12 Jun 2019, 5:00 am
ಚಿಕ್ಕಮಗಳೂರು : ಪರಿಸರ ಸಂರಕ್ಷ ಣೆ ನಮ್ಮೆಲ್ಲರ ಹೊಣೆಯಾಗಿದ್ದು, ಆರೋಗ್ಯ ಪೂರ್ಣ ಬದುಕಿಗೆ ಪರಸರವನ್ನು ಸ್ವಚ್ಛವಾಗಿ ಕಾಪಾಡಿಕೊಳ್ಳುವುದು ಅತಿ ಅಗತ್ಯ ಎಂದು ಒಂದನೇ ಹೆಚ್ಚುವರಿ ಹಿರಿಯ ಸಿವಿಲ್‌ ನ್ಯಾಯಾಧೀಶೆ ಕೆ.ಎಸ್‌.ಶಿಲ್ಪಾ ಹೇಳಿದರು.
Vijaya Karnataka Web CKM-11RUDRAP6


ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಅರಣ್ಯ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಎಂಎಲ್‌ಎಂಎನ್‌ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಮಂಗಳವಾರ ಗಿಡ ನೆಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ದಶಕಗಳ ಹಿಂದೆ ಪರಿಸರ ನಮ್ಮನ್ನು ಕಾಪಾಡುತ್ತಿತ್ತು, ಈಗ ನಾವೇ ಪರಿಸರವನ್ನು ಕಾಪಾಡಿಕೊಳ್ಳಬೇಕಾದ ಪರಿಸ್ಥಿತಿ ಬಗ್ಗೆ ವಿಷಾಧ ವ್ಯಕ್ತಪಡಿಸಿದ ಅವರು ಪರಿಸರಕ್ಕೆ ಧಕ್ಕೆಯಾದಲ್ಲಿ ಅದು ಹಲವು ರೀತಿಯ ವ್ಯತಿರಿಕ್ತ ಪರಿಣಾಮ ಬೀರುವುದಲ್ಲದೆ ಜಾಗತಿಕ ತಾಪಮಾನವು ಏರಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪರಿಸರ ಸಂರಕ್ಷ ಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕುಎಂದು ಹೇಳಿದರು.

ಪರಿಸರವಾದಿ ಸ.ಗಿರಿಜಾಶಂಕರ್‌ ಮಾತನಾಡಿ, ಬ್ರಹ್ಮಾಂಡದಲ್ಲಿ ಜೀವಿಸಲು ಯೋಗ್ಯವಾದ ಗ್ರಹ ಭೂಮಿ ಒಂದೇಯಾಗಿದ್ದು, ನಮಗೆ ಬದುಕಲು ಆಸರೆಯಾಗಿದೆ. ಕನಿಷ್ಟ ಶೇ.33 ರಷ್ಟು ಕಾಡಿನ ಅಗತ್ಯತೆ ಇದ್ದು, ಇಂದು ಪರಿಸರಕ್ಕೆ ಧಕ್ಕೆಯಾದ ಹಿನ್ನೆಲೆಯಲ್ಲಿ ಜಾಗತಿಕ ತಾಪಮಾನ ಏರಿಕೆಯಾಗಿದೆ. ಇದೇ ರೀತಿ ಮುಂದುವರದಲ್ಲಿ ಜೀವ ಸಂಕುಲಗಳು ನಾಶವಾಗುವ ಅಪಾಯವಿದೆ ಎಂದು ಹೇಳಿದರು.ಪಶ್ಚಿಮ ಘಟ್ಟಗಳು ಪ್ರಕೃತಿಯ ಆಧಾರ ಸ್ತಂಭವಾಗಿದ್ದು, ಇಲ್ಲಿ ವೈವಿಧ್ಯಮಯ ಜೀವ ಸಂಕುಲಗಳು, ಪ್ರಾಣಿಪಕ್ಷಿಗಳು, ಔಷಧಿ ಸಸ್ಯಗಳು ಹಾಗೂ ಬೃಹತ್‌ ಗಾತ್ರದ ಮರಗಳು ಇದ್ದು, ಒಂದು ವೇಳೆ ಪಶ್ಚಿಮ ಘಟ್ಟ ಶ್ರೇಣಿಗಳಿಗೆ ಧಕ್ಕೆಯಾದಲ್ಲಿ ಇಂತಹ ಅಮೂಲ್ಯ ಜೀವ ಸಂಕುಲಗಳು ನಾಶವಾಗುವ ಅಪಾಯವಿದೆ ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲೆ ವಿಜಯಲಕ್ಷ್ಮಿ ದೇಸಾಯಿ ಅಧ್ಯಕ್ಷ ತೆ ವಹಿಸಿದ್ದರು.ಕಾರ್ಯಕ್ರಮದಲ್ಲಿ ಒಂದನೇ ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶ ಎನ್‌.ಲಕ್ಷ್ಮೀಶ ಶರ್ಮ, ಎಂ.ಇ.ಎಸ್‌ ಗೌರವ ಕಾರ್ಯದರ್ಶಿ ಡಾ.ಡಿ.ಎಲ್‌. ವಿಜಯ ಕುಮಾರ್‌, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಸ್‌.ಎಸ್‌.ವೆಂಕಟೇಶ್‌, ವಲಯ ಅರಣ್ಯ ಅಧಿಕಾರಿ ಶಿಲ್ಪಾ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ