ಆ್ಯಪ್ನಗರ

ಹಿಂದೂ ಸಮಾಜ ಒಗ್ಗೂಡಿಸಲು ಆರೆಸ್ಸೆಸ್‌ ಸ್ಥಾಪನೆ

ಹಿಂದೂ ಸಮಾಜ ಒಗ್ಗೂಡಿಸಿ ದೇಶಕ್ಕಾಗಿ ಬದುಕಲು ಆರೆಸ್ಸೆಸ್‌ ಸ್ಥಾಪನೆ ಮಾಡಲಾಯಿತು ಎಂದು ಆರೆಸ್ಸೆಸ್‌ನ ಮಧ್ಯಕ್ಷೇತ್ರದ ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯ ಡಾ.ಪ್ರಭಾಕರ ಭಟ್‌ ಕಲ್ಲಡ್ಕ ಹೇಳಿದರು.

Vijaya Karnataka 9 Dec 2019, 5:00 am
ಕೊಪ್ಪ: ಹಿಂದೂ ಸಮಾಜ ಒಗ್ಗೂಡಿಸಿ ದೇಶಕ್ಕಾಗಿ ಬದುಕಲು ಆರೆಸ್ಸೆಸ್‌ ಸ್ಥಾಪನೆ ಮಾಡಲಾಯಿತು ಎಂದು ಆರೆಸ್ಸೆಸ್‌ನ ಮಧ್ಯಕ್ಷೇತ್ರದ ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯ ಡಾ.ಪ್ರಭಾಕರ ಭಟ್‌ ಕಲ್ಲಡ್ಕ ಹೇಳಿದರು.
Vijaya Karnataka Web 8KPH1_35


ಪಟ್ಟಣದಲ್ಲಿಆರೆಸ್ಸೆಸ್‌ ವತಿಯಿಂದ ಭಾನುವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿಅವರು ಮಾತನಾಡಿ, ಇಡಿ ಹಿಂದೂ ಸಮಾಜ ಒಂದಾಗಿ ದೇಶದ ಬಗ್ಗೆ ಯೋಚಿಸುವಂತಾಗಬೇಕು ಎಂಬ ಉದ್ದೇಶದಿಂದ ಅಂದು ಕೇಶವ ಬಲಿರಾಮ್‌ ಹೆಡೆಗೆವಾರ್‌ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸ್ಥಾಪಿಸಿದ್ದರು. ದಿನದಲ್ಲಿಕನಿಷ್ಟ 1 ಗಂಟೆ ದೇಶಕ್ಕಾಗಿ, ಭೂಮಿತಾಯಿಗಾಗಿ ಶ್ರಮಿಸಬೇಕೆಂದು ಅವರು ಹೇಳಿದ್ದರು. ಭಾರತ ದೇಶ ಭಿಕ್ಷೆ ಬೇಡುವ ದೇಶವಲ್ಲ. ಇಲ್ಲಿಹಿಂದೆ ಹತ್ತಾರು ವಿಶ್ವವಿದ್ಯಾಲಯವಿದ್ದವು. ಪ್ರತಿ ಗ್ರಾಮದಲ್ಲಿಗುರುಕುಲವಿತ್ತು. ಕೃಷಿ, ಖಗೋಳ ಶಾಸ್ತ್ರ, ವಿಜ್ಞಾನ, ಗ್ರಹಣ ಮತ್ತಿತರ ವೈಜ್ಞಾನಿಕ ವಿಷಯ ನಮಗೆ ಮೊದಲೆ ಗೊತ್ತಿತ್ತು. ಇಲ್ಲಿನ ಸಂಪತ್ತು ಲೂಟಿ ಮಾಡಲು ವಿದೇಶಿಯರು ಆಕ್ರಮಣ ಮಾಡಿದ್ದರು. ಪ್ರಸ್ತುತ ಪ್ರಧಾನಿ ಮೋದಿ, ಜಗತ್ತಿನ ಜನ ಭಾರತೆದೆಡೆಗೆ ನೋಡುವಂತೆ ಮಾಡಿದ್ದಾರೆ. ಸೇವಾ ಮನೋಭಾವನೆ ನಮ್ಮಲ್ಲಿಜಾಗೃತವಾಗುತ್ತಿದೆ. ಇದು ಒಬ್ಬ ವ್ಯಕ್ತಿಯ ಕಾರ್ಯವಲ್ಲ. ಇಡಿ ದೇಶ ಬದಲಾಗುತ್ತಿದೆ. ಸರ್ವರಿಗೆ ಒಳಿತು ಬಯಸುವ ಹಿಂದೂ ಸಮಾಜವು ಜಗತ್ತಿನ ಹಿತಕ್ಕಾಗಿ ಒಂದಾಗಬೇಕು. ಆರೆಸ್ಸೆಸ್‌ ಚಿಂತನೆಯೂ ಅದೆ ಆಗಿದೆ ಎಂದರು.

ವಕೀಲ ಎಂ.ನಾರಾಯಣಸ್ವಾಮಿ ಹಾಜರಿದ್ದರು. ನಂತರ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ