ಆ್ಯಪ್ನಗರ

ತಪ್ಪನ್ನು ಮರೆಮಾಚಲು ಸುಳ್ಳು ಆರೋಪ

ಪೊಲೀಸ್‌ ಇಲಾಖೆ ತಮ್ಮ ತಪ್ಪನ್ನು ಮರೆಮಾಚಲು ಕಸಾಪ ಉಳಿಸಿ ವೇದಿಕೆ ಮೇಲೆ ಸುಳ್ಳು ಆರೋಪ ಹೊರಿಸಿರುವುದು ಸರಿಯಲ್ಲಎಂದು ಕಸಾಪ ಉಳಿಸಿ ವೇದಿಕೆಯ ತಲಗಾರು ಉಮೇಶ್‌ ಹೇಳಿದ್ದಾರೆ.

Vijaya Karnataka 12 Jan 2020, 5:00 am
Vijaya Karnataka Web false accusation for concealing guilt
ತಪ್ಪನ್ನು ಮರೆಮಾಚಲು ಸುಳ್ಳು ಆರೋಪ
ಶೃಂಗೇರಿ: ಪೊಲೀಸ್‌ ಇಲಾಖೆ ತಮ್ಮ ತಪ್ಪನ್ನು ಮರೆಮಾಚಲು ಕಸಾಪ ಉಳಿಸಿ ವೇದಿಕೆ ಮೇಲೆ ಸುಳ್ಳು ಆರೋಪ ಹೊರಿಸಿರುವುದು ಸರಿಯಲ್ಲಎಂದು ಕಸಾಪ ಉಳಿಸಿ ವೇದಿಕೆಯ ತಲಗಾರು ಉಮೇಶ್‌ ಹೇಳಿದ್ದಾರೆ.

ಪಟ್ಟಣದಲ್ಲಿಶನಿವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ಪೊಲೀಸ್‌ ಇಲಾಖೆ ನೀಡಿದ್ದ ನೋಟೀಸ್‌ ಅನ್ನು ಕನ್ನಡ ಸಾಹಿತ್ಯ ಪರಿಷತ್‌ ಸ್ಪಷ್ಟವಾಗಿ ಉಲ್ಲಂಘನೆ ಮಾಡಿದ್ದರೂ, ಇಲಾಖೆ ಮೌನಕ್ಕೆ ಶರಣಾಗಿದೆ. ಕನ್ನಡ ಸಾಹಿತ್ಯ ಪರಿಷತ್‌ ಜ.10 ರಂದು ಆಯೋಜಿಸಿದ್ದ ಜಿಲ್ಲಾಸಮ್ಮೇಳನದ ಅಧ್ಯಕ್ಷರ ಬದಲಾವಣೆಯೇ ನಮ್ಮ ನಿಲುವಾಗಿತ್ತು. ಸಮ್ಮೇಳನ ಬೇಡ ಎಂದು ನಾವು ಹೇಳಿಲ್ಲ. ಜಾತಿ ವ್ಯವಸ್ಥೆ ಬಗ್ಗೆ ಮಾತನಾಡಿಲ್ಲ. ಯಾರನ್ನೋ ಬಲಿಪಶು ಮಾಡಲು ಸಮ್ಮೇಳನ ಆಯೋಜಿಸಲಾಗಿತ್ತು. ಎಲ್ಲವನ್ನು ಸಾರ್ವಜನಿಕರ ಮೇಲೆ ಹಾಕಿ ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಉದ್ಧಟತನ ತೋರಿದೆ ಎಂದು ದೂರಿದರು.

ಮುಖಂಡ ಹರೀಶ್‌ ಶೆಟ್ಟಿ ಮಾತನಾಡಿ, ಸಮ್ಮೇಳನವನ್ನು ಮುಂದೂಡಿ ಮತ್ತೆ ಈಗಿನ ಅಧ್ಯಕ್ಷರ ನೇತೃತ್ವದಲ್ಲಿಸಮ್ಮೇಳನ ನಡೆಸುವುದಾದರೆ ಅದಕ್ಕೆ ನಮ್ಮ ವಿರೋಧವಿದೆ. ಸಮ್ಮೇಳನ ನಡೆಸಲು ಹಣ ಸಂಗ್ರಹಿಸಿದ ಬಗ್ಗೆ ಸಾರ್ವಜನಿಕರಿಗೆ ಲೆಕ್ಕಪತ್ರ ನೀಡಲಿ. ನುಡಿ ಜಾತ್ರೆ ಸಂಭ್ರಮದ ಹಬ್ಬವಾಗಬೇಕಿದ್ದು, ಅದು ಸೂತಕದ ವಾತಾವರಣದಲ್ಲಿನಡೆದಿದೆ ಎಂದರು.

ಕೆ.ಎಂ.ಶ್ರೀನಿವಾಸ್‌, ಮಂಜುನಾಥ ನಾಯ್‌್ಕ, ಶೃಂಗೇರಿ ಸುಬ್ಬಣ್ಣ, ಬಿ.ಶಿವಶಂಕರ್‌, ಸುರೇಶ್ಚಂದ್ರ, ಅಶೋಕ್‌, ವೇಣುಗೋಪಾಲ್‌, ನಾಗೇಂದ್ರ, ಭಾಗ್ಯಲಕ್ಷಿತ್ರ್ಮೕ, ಸುಧೀಂದ್ರ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ