ಆ್ಯಪ್ನಗರ

ತಾಲೂಕು ಕಚೇರಿಯಲ್ಲಿ ರೈತರ ಕಡೆಗಣನೆ

ತಾಲೂಕು ಕಚೇರಿಗೆ ರೈತರು ಹೋದರೆ ಯಾವುದೇ ಕೆಲಸ ಸರಿಯಾಗಿ ಆಗುತ್ತಿಲ್ಲ, ರೈತರಿಗೆ ಗೌರವವೂ ನೀಡುತ್ತಿಲ್ಲ ಎಂದು ಸೀತೂರು ಗ್ರಾಮ ಪಂಚಾಯಿತಿಗೆ ಸೇರಿದ ವಿವಿಧ ಗ್ರಾಮಸ್ಥರು ಆರೋಪಿಸಿದರು.

Vijaya Karnataka 31 Jul 2019, 7:49 pm
ನರಸಿಂಹರಾಜಪುರ : ತಾಲೂಕು ಕಚೇರಿಗೆ ರೈತರು ಹೋದರೆ ಯಾವುದೇ ಕೆಲಸ ಸರಿಯಾಗಿ ಆಗುತ್ತಿಲ್ಲ, ರೈತರಿಗೆ ಗೌರವವೂ ನೀಡುತ್ತಿಲ್ಲ ಎಂದು ಸೀತೂರು ಗ್ರಾಮ ಪಂಚಾಯಿತಿಗೆ ಸೇರಿದ ವಿವಿಧ ಗ್ರಾಮಸ್ಥರು ಆರೋಪಿಸಿದರು.
Vijaya Karnataka Web CKM-30NRP2


ಸೀತೂರು ಶಾಲಾ ಆವರಣದಲ್ಲಿ ಮಂಗಳವಾರ ನಡೆದ ಗ್ರಾಮ ಸಭೆಯಲ್ಲಿ ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗ ಕುಮಾರಸ್ವಾಮಿ ಕಂದಾಯ ಇಲಾಖೆಯ ಬಗ್ಗೆ ಮಾಹಿತಿ ನೀಡುತ್ತಿದ್ದಾಗ ಗ್ರಾಮಸ್ಥರು ಮಾತನಾಡಿದರು.

ಮಲೆನಾಡಿನ ರೈತರು ಸೌಮ್ಯ ಸ್ವಭಾವದವರು, ಶುದ್ಧ ಹಸ್ತರು. ಆದರೆ, ತಾಲೂಕು ಕಚೇರಿಗೆ ಹೋಗಿ ಬೆಳಿಗ್ಗೆಯಿಂದ ಸಂಜೆಯವರೆಗೂ ಕಾದರೂ ಸರಿಯಾಗಿ ಕೆಲಸ ಆಗುತ್ತಿಲ್ಲ.ಪಹಣಿಗಾಗಿ ಕ್ಯೂ ನಿಂತರೆ ಮಧ್ಯೆ ಬೇರೆಯವರು ಬಂದು ಪಹಣಿ ಪಡೆದುಕೊಂಡು ಹೋಗುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮ ಪಂಚಾಯಿತಿ ಸದಸ್ಯ ಎಚ್‌.ಇ.ದಿವಾಕರ ಮಾತನಾಡಿ,ನೆಮ್ಮದಿ ಕೇಂದ್ರದಲ್ಲಿ ಗಂಟೆಗಟ್ಟಳೆ ಕ್ಯೂ ನಿಲ್ಲಬೇಕಾಗುತ್ತದೆ. ಆದ್ದರಿಂದ ವಯಸ್ಸಾದವರ ಪರವಾಗಿ ಬೇರೆಯವರು ಬಂದರೆ ಅವರ ಹತ್ತಿರ ದಾಖಲೆ ಕೊಡುವ ವ್ಯವಸ್ಥೆ ಮಾಡಬೇಕು ಎಂದು ಸಲಹೆ ನೀಡಿದರು. ಮಳೆ ದಾಖಲೆ ನೀಡುವಾಗ ಬಾಳೆಹೊನ್ನೂರು ಹೋಬಳಿಯಲ್ಲಿ ಬರುವ ಮಳೆಯ ದಾಖಲೆಯನ್ನು ಸೀತೂರು ಗ್ರಾಮ ಪಂಚಾಯಿತಿಗೆ ಸೇರಿಸಬೇಡಿ, ಇಲ್ಲಿ ಮಳೆ ಕಡಿಮೆಯಾಗುತ್ತದೆ, ಈ ಬಗ್ಗೆ ಕಂದಾಯ ಇಲಾಖೆಯವರು ಗಮನ ನೀಡಬೇಕು ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್‌.ಪಿ.ರಮೇಶ್‌ ಮಾತನಾಡಿ, ಆದಾಯ ಸರ್ಟಿಫಿಕೇಟ್‌ ನೀಡುವಾಗ 32 ಸಾವಿರ ರೂ. ಮಿತಿ ಇದ್ದು, ಇದರಿಂದ ತೊಂದರೆಯಾಗುತ್ತಿದೆ ಎಂದರು.ಗ್ರಾಮ ಲೆಕ್ಕಿಗ ಕುಮಾರಸ್ವಾಮಿ ಮಾಹಿತಿ ನೀಡಿ, ಪ್ರಧಾನ ಮಂತ್ರಿ ಸಮ್ಮಾನ್‌ ಯೋಜನೆಯಡಿ ರೈತರು ಇನ್ನೂ ಅರ್ಜಿ ನೀಡಬಹುದಾಗಿದೆ.ಬೆಳೆ ಸಮೀಕ್ಷೆಗೆ ಬಂದಾಗ ರೈತರು ಸಹಕಾರ ನೀಡಬೇಕು. ರೈತರ ಸಮಸ್ಯೆಯನ್ನು ತಹಶೀಲ್ದಾರ್‌ ಅವರ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.

ಪೊಲೀಸ್‌ ಇಲಾಖೆಯ ರಘು ಮಾತನಾಡಿ, ಸೀತೂರು ಗ್ರಾಮದ ಅಬ್ಬಿಗುಂಡಿ ಡ್ಯಾಂಗೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದ್ದು, ಕೆಲವು ಗ್ರಾಮಸ್ಥರು ಪ್ರವಾಸಿಗರು ಬರದಂತೆ ಕಡಿವಾಣ ಹಾಕಬೇಕು ಎನ್ನುತ್ತಾರೆ.ಕೆಲವರು ಪ್ರವಾಸಿಗರು ಬರಲಿ ಎನ್ನುತ್ತಾರೆ.ಕಳೆದ ವರ್ಷ ಒಬ್ಬ ಪ್ರವಾಸಿಗರು ಇಲ್ಲಿ ಮೃತಪಟ್ಟಿದ್ದರು.ಈ ಬಗ್ಗೆ ಗ್ರಾಮದ ಜನತೆ ಒಮ್ಮತದ ತೀರ್ಮಾನಕ್ಕೆ ಬರಬೇಕು ಎಂದರು.

ಹಾಳಾದ ಸಿದ್ದರಗವಿ ರಸ್ತೆ : ಆರೋಗ್ಯ ಇಲಾಖೆ,ಪಶು ವೈದ್ಯ ಇಲಾಖೆ,ಕೃಷಿ ಇಲಾಖೆ,ಶಿಕ್ಷ ಣ ಇಲಾಖೆಯ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.ಗ್ರಾಮ ಪಂಚಾಯಿತಿ ಪಿ.ಡಿ.ಓ. ಸಂತೋಷ್‌ ಕುಮಾರ್‌ ಸ್ವಾಗತಿಸಿದರು.ಗ್ರಾಮ ಪಂಚಾಯಿತಿ ಕಾರ್ಯದರ್ಶಿ ನವೀನ್‌ ಕಾಮಗಾರಿಗಳ ಯೋಜನಾ ವರದಿ ವಾಚಿಸಿದರು. ಅಧ್ಯಕ್ಷ ತೆಯನ್ನು ಸೀತೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್‌.ಪಿ.ರಮೇಶ್‌ ವಹಿಸಿದ್ದರು. ತಾಲೂಕು ಪಂಚಾಯಿತಿ ಅಧ್ಯಕ್ಷೆ ಜಯಶ್ರೀ ಮೋಹನ್‌, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸುನಂದ, ಸದಸ್ಯರುಗಳಾದ ಎಸ್‌.ಕೆ.ಚಿದಂಬರ್‌,ಶಾರದಮ್ಮ, ಬಿ.ಎಸ್‌.ಸುಮ, ಶಶಿಕುಮಾರ್‌, ನಾಗವೇಣಿ, ಕೆ.ಎಸ್‌.ಜ್ಯೋತಿ ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ