ಆ್ಯಪ್ನಗರ

ಕಾಟಾಚಾರಕ್ಕೆ ಜಾಗೃತಿ ಕಾರ್ಯಕ್ರಮ

ಆಲ್ದೂರಿನಲ್ಲಿ ಕಾಟಾಚಾರಕ್ಕೆ ನಡೆದ ಜಾಗೃತಿ ಕಾರ್ಯಕ್ರಮ, ಅರಿವು ಮೂಡಿಸುವ ಕೆಲಸ ಮಾಡಬೇಕಿದ್ದ ಸದಸ್ಯರೇ ನಾಪತ್ತೆ !

Vijaya Karnataka 17 Nov 2018, 5:00 am
ಆಲ್ದೂರು : ಆಲ್ದೂರಿನಲ್ಲಿ ಕಾಟಾಚಾರಕ್ಕೆ ನಡೆದ ಜಾಗೃತಿ ಕಾರ್ಯಕ್ರಮ, ಅರಿವು ಮೂಡಿಸುವ ಕೆಲಸ ಮಾಡಬೇಕಿದ್ದ ಸದಸ್ಯರೇ ನಾಪತ್ತೆ !
Vijaya Karnataka Web CKM-16aldur2


ಗ್ರಾಮಿಣಾಭಿವೃದ್ಧಿ, ಪಂಚಾಯತ್‌ ರಾಜ್‌ ಇಲಾಖೆ, ಜಿಲ್ಲಾ ಪಂಚಾಯಿತಿ, ತಾ ಪಂ. ಗ್ರಾಮ ಪಂಚಾಯಿತಿ ವತಿಯಿಂದ ಶುಕ್ರವಾರ ಸ್ವಚ್ಚಭಾರತ್‌ ಮಿಷನ್‌ ಗ್ರಾಮೀಣ ಯೋಜನೆಯಡಿ ಆಚರಿಸಿದ ವಿಶ್ವ ಶೌಚಾಲಯ ದಿನಾಚಾರಣೆ ನೀರಸವಾಗಿ ನಡೆದು ಸಾರ್ವಜನಿಕ ವಲಯದಲ್ಲಿ ಅಭಾಸಕ್ಕೆ ಕಾರಣವಾಯಿತು.

ಕಾರಣ ಅರಿವು ಮೂಡಿಸಬೇಕಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಲಿ, ಸದಸ್ಯರುಗಳಾಗಲಿ ಯಾರೊಬ್ಬರೂ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರಲಿಲ್ಲ. ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳು, ಕೆಲ ಅಂಗನವಾಡಿ ಕಾರ್ಯಕರ್ತೆಯರು, ಪಿಡಿಓ, ಹಾಗೂ ಸಿಬ್ಬಂದಿ ಮಾತ್ರ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಗ್ರಾ ಪಂನಿಂದ ಪ್ರಾರಂಭವಾದ ಜಾಥಾ ಗಣಪತಿ ದೇವಸ್ಥಾನದವರೆಗೆ ಸಾಗಿತು. ಜಾಥಾದಲ್ಲಿ ಪಿಡಿಓ ಸೋಮೇಗೌಡ, ಸಿಬ್ಬಂದಿಗಳಾದ ಸತೀಶ್‌, ಪ್ರೇಮಾ, ಮಂಜುನಾಥ್‌,ಮಂಜು, ಅಂಗನವಾಡಿ ಕಾರ್ಯಕರ್ತೆಯರಾದ ಜಯಾಶೇಖರ್‌, ಕಾಮಾಕ್ಷಿ, ದೇವಿರಮ್ಮ, ಸರ್ಕಾರಿ ಶಾಲೆಯ ಶಿಕ್ಷಕರು ಮಕ್ಕಳು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ