ಆ್ಯಪ್ನಗರ

ಉಪ ಕಸುಬಿನಿಂದ ಆರ್ಥಿಕ ಸ್ವಾವಲಂಬನೆ

ಇಂದಿನ ಪೈಪೋಟಿ ಹಾಗೂ ಯಾಂತ್ರೀಕತೆಯ ಜೀವನದಲ್ಲಿ ಆರ್ಥಿಕವಾಗಿ ಸಬಲರಾಗಲು ಎಲ್ಲರೂ ದುಡಿಯಲೇಬೇಕಾದ ಅನಿವಾರ್ಯತೆ ಇದೆ ಎಂದು ಹಿಂದೂ ಸೇವಾ ಪ್ರತಿಷ್ಠಾನದ ರಾಜ್ಯ ಸಂಯೋಜಕ ನಟರಾಜ ರಾನಡೆ ಹೇಳಿದರು.

Vijaya Karnataka 5 Dec 2018, 5:00 am
ಶೃಂಗೇರಿ: ಇಂದಿನ ಪೈಪೋಟಿ ಹಾಗೂ ಯಾಂತ್ರೀಕತೆಯ ಜೀವನದಲ್ಲಿ ಆರ್ಥಿಕವಾಗಿ ಸಬಲರಾಗಲು ಎಲ್ಲರೂ ದುಡಿಯಲೇಬೇಕಾದ ಅನಿವಾರ್ಯತೆ ಇದೆ ಎಂದು ಹಿಂದೂ ಸೇವಾ ಪ್ರತಿಷ್ಠಾನದ ರಾಜ್ಯ ಸಂಯೋಜಕ ನಟರಾಜ ರಾನಡೆ ಹೇಳಿದರು.
Vijaya Karnataka Web financial self reliance with the depository
ಉಪ ಕಸುಬಿನಿಂದ ಆರ್ಥಿಕ ಸ್ವಾವಲಂಬನೆ


ತಾಲೂಕಿನ ಮೆಣಸೆಯಲ್ಲಿ ದೀಪ ಪೂಜೆ ಹಾಗೂ ಹೊಲಿಗೆ ತರಬೇತಿ ಪಡೆದ ಮಹಿಳೆಯರಿಗೆ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸ್ವಾವಲಂಬಿ ಜೀವನಕ್ಕೆ ಉಪ ಕಸುಬು ಹೊಂದಿರಬೇಕಾದ ಅಗತ್ಯವಿದ್ದು, ಮಹಿಳೆಯರು ಮನೆಯಲ್ಲಿಯೇ ಬಟ್ಟೆ ಹೊಲಿಯುವ ಮೂಲಕ ಆರ್ಥಿಕವಾಗಿ ಸಬಲರಾಗುವ ಅವಕಾಶವಿದೆ ಎಂದರು.

ಪ್ರತಿಷ್ಠಾನದ ತಾಲೂಕು ಸಂಯೋಜಕ ಅರುಣ್‌ ಹರೂರ್‌ ಮಾತನಾಡಿ, ಗ್ರಾಮೀಣ ಭಾಗದಲ್ಲಿರುವ ಮಹಿಳೆಯರಿಗೆ ಉದ್ಯೋಗವಕಾಶ ಕಡಿಮೆ. ಆದರೆ ಕಸೂತಿ, ಹೊಲಿಗೆ ಮುಂತಾದ ಉಪ ಉದ್ಯೋಗವನ್ನು ಮನೆಯಲ್ಲಿ ಮಾಡಬಹುದಾಗಿದೆ. ಇದರೊಂದಿಗೆ ದೀಪ ಪೂಜನಾ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸ್ವಾಗತಾರ್ಹ ಎಂದರು.

ಕಾರ್ಯಕ್ರಮಕ್ಕೂ ಮುನ್ನ ಸಾಮೂಹಿಕ ದೀಪ ಪೂಜನಾ ಕಾರ್ಯಕ್ರಮ ನಡೆಯಿತು. ಮಂಡಲ ಸಂಯೋಜಕ ಸುಮಂಗಲ, ಮಹಾಭಲಬೀಡೆ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ