ಆ್ಯಪ್ನಗರ

ಸ್ಥಳೀಯರ ಸಮಯಪ್ರಜ್ಞೆ: ತಪ್ಪಿದ ಬೆಂಕಿ ಅನಾಹುತ

ಪಟ್ಟಣ ಸಮೀಪದ ಅಮೃತಮಹಲ್‌ ಕಾವಲಿನ ಪ್ರದೇಶದಲ್ಲಿ ಕಾವಲಿನ ಹುಲ್ಲಿಗೆ ಹತ್ತಿದ್ದ ಬೆಂಕಿ ಯುವಕರ ಸಮಯಪ್ರಜ್ಞೆಯಿಂದ ಶಮನಗೊಂಡಿದ್ದು ಆಗಬಹುದಾಗಿದ್ದ ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ.

Vijaya Karnataka 27 Feb 2019, 10:46 am
ಬೀರೂರು:ಪಟ್ಟಣ ಸಮೀಪದ ಅಮೃತಮಹಲ್‌ ಕಾವಲಿನ ಪ್ರದೇಶದಲ್ಲಿ ಕಾವಲಿನ ಹುಲ್ಲಿಗೆ ಹತ್ತಿದ್ದ ಬೆಂಕಿ ಯುವಕರ ಸಮಯಪ್ರಜ್ಞೆಯಿಂದ ಶಮನಗೊಂಡಿದ್ದು ಆಗಬಹುದಾಗಿದ್ದ ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ.
Vijaya Karnataka Web CKM-26BRR2


ಪಟ್ಟಣದ ಅಮೃತಮಹಲ್‌ ಕಾವಲಿನಲ್ಲಿ ಅತ್ಯಂತ ವಿಶಾಲವಾದ 900 ಎಕರೆಗೂ ಹೆಚ್ಚಿನ ಪ್ರದೇಶವಿದೆ. ಹಲವು ಜಾತಿಯ ಕಾಡಿನ ಮರಗಳು ಹಾಗೂ ಕುರುಚಲು ಗಿಡಗಳು ಹಲವು ಕಾಡುಪ್ರಾಣಿಗಳು, ಹೆಚ್ಚಿನ ಸಂಖ್ಯೆಯ ನವಿಲು ಮತ್ತು ಕಡವೆಗಳು ಇದ್ದು ಬೆಂಕಿ ಅನಾಹುತ ಸಂಭವಿಸಿದರೆ ಹೆಚ್ಚಿನ ಅನಾಹುತವಾಗುತ್ತಲಿತ್ತು. ಪಟ್ಟಣದ ಛಾಯಾಗ್ರಾಹಕ ಸಂಘದ ಯುವಕರು ಕಾವಲುಚೌಡಮ್ಮ ದೇವಿಯ ಪೂಜೆ ಸಲ್ಲಿಸುತ್ತಿರುವ ಸಂದರ್ಭ ಬೆಂಕಿಯನ್ನು ಗಮನಿಸಿದ ಯುವಕರು ತಕ್ಷಣವೇ ಕಡೂರು ಅಗ್ನಿಶಾಮಕ ದಳಕ್ಕೆ ದೂರವಾಣಿ ಮೂಲಕ ಸಂಪರ್ಕಿಸಿ ಬೆಂಕಿ ನಂದಿಸಲು ಕ್ರಮಕೈಗೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಮಂಗಳವಾರ ಸಂಜೆ ನಾಲ್ಕುಗಂಟೆಯ ಸಂದರ್ಭ ಘಟನೆ ಸಂಭವಿಸಿದ್ದು ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಬಸವರಾಜ್‌,ದೀಕ್ಷಿತ್‌ನಾಯಕ್‌, ಶಿವಪ್ರಸಾದ್‌, ದೇವರಾಜಯ್ಯ ಹಾಗೂ ಹರೀಶ್‌ ಯುವಕರ ಸಹಕಾರದಿಂದ ಬೆಂಕಿನಂದಿಸುವಲ್ಲಿ ಯಶಸ್ವಿಯಾದರು. ಬೇಸಿಗೆ ಸಮೀಪಿಸುತ್ತಿದ್ದು ಈ ಪ್ರದೇಶ ಸೂಕ್ಷ ವಲಯವಾಗಿದ್ದು ಅರಣ್ಯಇಲಾಖೆ ಹಾಗೂ ಅಮೃತಮಹಲ್‌ ಸಂವರ್ಧನಾ ಕೇಂದ್ರದವರು ಸೂಕ್ತ ಮುನ್ನೆಚ್ಚರಿಕೆಯನ್ನು ಕೈಗೊಳ್ಳುವ ಮೂಲಕ ಬೆಂಕಿ ಅನಾಹುತ ಸಂಭವಿಸದಂತೆ ಸೂಕ್ಷ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ