ಆ್ಯಪ್ನಗರ

ಚಿಕ್ಕಮಗಳೂರು: ಕೊರೊನಾಗೆ ಜಿಲ್ಲೆಯಲ್ಲಿ ಒಂದೇ ದಿನ ಐವರು ಸಾವು, ಕೇಸ್‌ ಎಷ್ಟು?

ಅನ್‌ಲಾಕ್‌ ಬಳಿಕ ​​​ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ರಾಜ್ಯ ಜಿಲ್ಲೆಗಳಲ್ಲೂ ಕೊರೊನಾ ಆರ್ಭಟಿಸುತ್ತಿದೆ. ಸದ್ಯ ಭಾರತವು ಕೊರೊನಾ ಲಸಿಕೆಯನ್ನ ಅತೋ ಶೀಘ್ರದಲ್ಲೇ ಹೊರತರುವ ಭರವಸೆಯನ್ನ ವ್ಯಕ್ತಪಡಿಸಿದೆ. ಹೀಗಾಗಿ ಮುಂಜಾಗ್ರತಾ ಕ್ರಮ ವಹಿಸುವುದು ಉತ್ತಮ.

Vijaya Karnataka Web 15 Aug 2020, 4:55 pm
ಚಿಕ್ಕಮಗಳೂರು: ಕಾಫಿನಾಡಲ್ಲಿ ಕೊರೊನಾಗೆ ಶನಿವಾರ ಒಂದೇ ದಿನ ಐವರು ಸಾವನಪ್ಪುವ ಮೂಲಕ ಕೊರೊನಾ ವೈರಸ್‌ ಅಬ್ಬರಿಸಿ ಬೊಬ್ಬಿರಿದಿದೆ. ಅಲ್ಲದೇ ಜಿಲ್ಲೆಯಲ್ಲಿ ಒಂದೇ ದಿನ 79 ಮಂದಿಗೆ ಕೊರೊನಾ ಸೋಂಕು ದೃಡುವ ಮೂಲಕ ಜಿಲ್ಲೆಯಲ್ಲಿ ಈವರೆಗೆ ಒಟ್ಟು 2112 ಮಂದಿಗೆ ಕೊರೊನಾ ಪಾಸಿಟಿವ್‌ ಆದಂತೆ ಆಗಿದೆ.
Vijaya Karnataka Web jpg - 2020-07-16T103953.826


ಇನ್ನು 79 ಸೋಂಕಿತರ ಪೈಕಿ ಚಿಕ್ಕಮಗಳೂರು 31, ತರೀಕೆರೆ 19, ಕಡೂರು 25, ಮೂಡಿಗೆರೆ 2, ಶೃಂಗೇರಿಯಲ್ಲಿ 2 ಕೇಸ್ ದೃಡಪಟ್ಟಿದೆ. ಇಂದು 9 ಮಂದಿ ಕೊರೊನಾ ರೋಗದಿಂದ ಗುಣಹೊಂದಿ ಬಿಡುಗಡೆಯಾಗಿ ಮನೆಗೆ ತೆರಳಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 746 ಸಕ್ರಿಯಯ ಪ್ರಕರಣ ಸದ್ಯ ಇದ್ದು 1323 ಮಂದಿ ಕೊರೊನಾದಿಂದ ಗುಣಮುಖ ಹೊಂದಿ ಮನೆಗೆ ತೆರಳಿದ್ದಾರೆ. ಇನ್ನು ಇಂದು ಐವರು ಸಾವನಪ್ಪುವ ಮೂಲಕ ಜಿಲ್ಲೆಯಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ 43ಕ್ಕೆ ಏರಿಕೆಯಾಗಿದೆ.

ಅನ್‌ಲಾಕ್‌ ಬಳಿಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ರಾಜ್ಯ ಜಿಲ್ಲೆಗಳಲ್ಲೂ ಕೊರೊನಾ ಆರ್ಭಟಿಸುತ್ತಿದೆ. ಸದ್ಯ ಭಾರತವು ಕೊರೊನಾ ಲಸಿಕೆಯನ್ನ ಅತೋ ಶೀಘ್ರದಲ್ಲೇ ಹೊರತರುವ ಭರವಸೆಯನ್ನ ವ್ಯಕ್ತಪಡಿಸಿದೆ. ಹೀಗಾಗಿ ಮುಂಜಾಗ್ರತಾ ಕ್ರಮ ವಹಿಸುವುದು ಉತ್ತಮ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ