ಆ್ಯಪ್ನಗರ

ಸಂಕ್ರಾಂತಿ, ಹೂ, ಹಣ್ಣು ತುಸು ದುಬಾರಿ

ಸಂಕ್ರಾಂತಿ ಹಬ್ಬಕ್ಕಾಗಿ ನಗರದಲ್ಲಿ ಖರೀದಿ ಭರಾಟೆ ಜೋರಾಗಿದ್ದು, ಹೂವು , ಕಬ್ಬಿನ ಜಲ್ಲೆ ಹಾಗೂ ಹಣ್ಣುಗಳು ಎಂದಿಗಿಂತ ಇಂದು ತುಸು ದುಬಾರಿಯಾಗಿ ಮಾರಾಟವಾದವು.

Vijaya Karnataka Web 15 Jan 2019, 5:00 am
ಚಿಕ್ಕಮಗಳೂರು : ಸಂಕ್ರಾಂತಿ ಹಬ್ಬಕ್ಕಾಗಿ ನಗರದಲ್ಲಿ ಖರೀದಿ ಭರಾಟೆ ಜೋರಾಗಿದ್ದು, ಹೂವು , ಕಬ್ಬಿನ ಜಲ್ಲೆ ಹಾಗೂ ಹಣ್ಣುಗಳು ಎಂದಿಗಿಂತ ಇಂದು ತುಸು ದುಬಾರಿಯಾಗಿ ಮಾರಾಟವಾದವು.
Vijaya Karnataka Web CKM-14RUDRAP7


ಯಾವುದೇ ಹಬ್ಬ ಬಂತೆಂದರೆ ಒಂದೆರಡು ದಿನ ವ್ಯಾಪಾರ, ವಹಿವಾಟು ನಗರದಲ್ಲಿ ಭರ್ಜರಿಯಾಗಿ ನಡೆಯುವುದು ಸಹಜ. ಹನುಮಂತಪ್ಪ ವೃತ್ತ, ಕನ್ನಿಕಾಪರಮೇಶ್ವರಿ ದೇವಾಲಯ ಆವರಣ,ಎಂಇಎಸ್‌ ಎದುರು, ಆಜಾದ್‌ ಪಾರ್ಕ್‌ ಸಮೀಪದಲ್ಲಿ ಅತಿ ಹೆಚ್ಚು ವಹಿವಾಟು ನಡೆಯಿತು. ಈ ಪ್ರದೇಶದಲ್ಲಿ ಟ್ರಾಫಿಕ್‌ ನಿಯಂತ್ರಣ ಮಾಡಲು ಸಂಚಾರಿ ಪೊಲೀಸರು ಹರಸಾಹಸ ಪಟ್ಟರು.

ಸಂಕ್ರಾಂತಿ ಹಬ್ಬಕ್ಕೆ ವಿಶೇಷವಾಗಿ ಕಬ್ಬು ಹಾಗೂ ಎಳ್ಳನ್ನು ಖರೀದಿಸಲು ಜನ ಮುಗಿಬಿದ್ದಿದ್ದರು. ಒಂದು ಕಬ್ಬಿನ ಗಣೆ ಅಥವಾ ಕೋಲಿಗೆ 40 ರಿಂದ 50 ರೂ. ಮಾರು ಸೇವಂತಿಗೆ ಹೂವಿಗೆ 50 ರೂ., ಚೆಂಡು ಹೂ 30 ರಿಂದ 40, ಸೇಬು 100 ರೂ., ದಾಳಿಂಬೆ 200 ರೂ. ಬಾಳೆಹಣ್ಣು ಕಿಲೋ 60 ರಿಂದ 80 ರೂ., ಕಿತ್ತಲೆ 50 ರೂ. ಹೀಗೆ ತರಹೇವಾರಿ ಬೆಲೆಯಲ್ಲಿ ಮಾರಾಟವಾಯಿತು.

ನಗರದ ಹನುಮಂತಪ್ಪ ವೃತ್ತದ ಆಸುಪಾಸಿನಲ್ಲಿ ಅಂದಾಜು 1 ಲಾರಿ ಲೋಡಿಗಿಂತಲೂ ಅಧಿಕವಾದ ಕಬ್ಬು ಸಂಗ್ರಹ ಮಾಡಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ