ಆ್ಯಪ್ನಗರ

ಮಲೆನಾಡಿನಾದ್ಯಂತ ಬಾರಿ ಮಳೆ, ಜನಜೀವನ ಅಸ್ತವ್ಯಸ್ತ

ಮಲೆನಾಡಿನಾದ್ಯಂತ ಸೋಮವಾರದಿಂದ ಬಾರಿ ಮಳೆಯಾಗುತ್ತಿದ್ದು ಜನಜೀವನ ಅಸ್ತವ್ಯಸ್ಥಗೊಂಡಿದೆ.

Vijaya Karnataka 4 Sep 2019, 5:00 am
ಕೊಟ್ಟಿಗೆಹಾರ: ಮಲೆನಾಡಿನಾದ್ಯಂತ ಸೋಮವಾರದಿಂದ ಬಾರಿ ಮಳೆಯಾಗುತ್ತಿದ್ದು ಜನಜೀವನ ಅಸ್ತವ್ಯಸ್ಥಗೊಂಡಿದೆ.
Vijaya Karnataka Web frequent rains and livelihood disruption
ಮಲೆನಾಡಿನಾದ್ಯಂತ ಬಾರಿ ಮಳೆ, ಜನಜೀವನ ಅಸ್ತವ್ಯಸ್ತ


ಗ್ರಾಮಸ್ಥರು ಭಯಬೀತರಾಗಿದ್ದು ಕೆಲದಿನಗಳ ಹಿಂದೆ ಗುಡ್ಡಕುಸಿತವಾದಂತಹ ಘಟನೆ ಮತ್ತೆ ಮರುಕಳಿಸಬಹುದೆಂಬ ಆತಂಕ ಮೂಡಿದೆ. ಕೆಲವರು ಊರುಗಳನ್ನು ತೊರೆದು ಸಂಬಂಧಿಕರ ಮನೆಗಳಿಗೆ ಹೋಗುತ್ತಿರುವ ದೃಶ್ಯ ಕಂಡು ಬಂತು.

ಸೋಮವಾರದಿಂದ ಮಳೆ ಜತೆಗೆ ಭೂಮಿಯಲ್ಲಿಗುಡುಗಿದ ಶಬ್ಧ ಕೇಳಿ ಬರುತ್ತಿದ್ದು ಗುಡ್ಡ ಕುಸಿತವಾದ ಸಂದರ್ಭ ಕೂಡ ಈ ರೀತಿಯ ಶಬ್ಧ ಬಂದಿದ್ದು ಜನರೆಲ್ಲಭಯಭೀತರಾಗಿದ್ದಾರೆ.

ಮೂಡಿಗೆರೆ ತಾಲೂಕಿನ ಗ್ರಾಮಗಳಾದ ಬೈರಾಪುರ, ದೇವರಮನೆ, ಕೊಟ್ಟಿಗೆಹಾರ, ಚಾರ್ಮಾಡಿ, ಜಾವಳಿ, ಮಲೆಮನೆ, ಸುಂಕಸಾಲೆ, ನಿಡುವಾಳೆ, ಕೂವೆ, ಹಿರೆಬೈಲ್‌, ಕಳಸ ಮೊದಲಾದ ಭಾಗಗಳಲ್ಲಿಧಾರಾಕಾರ ಮಳೆಯಾಗುತ್ತಿದ್ದು ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ