ಆ್ಯಪ್ನಗರ

ವೇದಾ ನದಿಯಿಂದ ಪಿಳ್ಳೇನಹಳ್ಳಿ ಕಟ್ಟೆಗೆ ಹರಿದ ಗಂಗೆ

ಪ್ರತಿ ವರ್ಷವೂ ಬೇಸಿಗೆಯಲ್ಲಿ ಬಾದಿಸುವ ನೀರಿನ ಬರದಿಂದಾಗಿ ಕಂಗೆಟ್ಟ ಪಿಳ್ಳೇನಹಳ್ಳಿಯ ಗ್ರಾಮಸ್ಥರು ವೇದಾ ನದಿಯಿಂದ ಪಂಪ್‌ ಸೆಟ್‌ ಮೂಲಕ ಕೆರೆಯನ್ನು ತುಂಬಿಸುವ ಕಾಯಕಕ್ಕೆ ಕೈ ಹಾಕಿದ್ದಾರೆ.

Vijaya Karnataka 16 Nov 2018, 5:00 am
ಸಖರಾಯಪಟ್ಟಣ :ಪ್ರತಿ ವರ್ಷವೂ ಬೇಸಿಗೆಯಲ್ಲಿ ಬಾದಿಸುವ ನೀರಿನ ಬರದಿಂದಾಗಿ ಕಂಗೆಟ್ಟ ಪಿಳ್ಳೇನಹಳ್ಳಿಯ ಗ್ರಾಮಸ್ಥರು ವೇದಾ ನದಿಯಿಂದ ಪಂಪ್‌ ಸೆಟ್‌ ಮೂಲಕ ಕೆರೆಯನ್ನು ತುಂಬಿಸುವ ಕಾಯಕಕ್ಕೆ ಕೈ ಹಾಕಿದ್ದಾರೆ.
Vijaya Karnataka Web from the veda river to the pillenahalli pit torn to the ground
ವೇದಾ ನದಿಯಿಂದ ಪಿಳ್ಳೇನಹಳ್ಳಿ ಕಟ್ಟೆಗೆ ಹರಿದ ಗಂಗೆ


ಸಮೀಪದ ಪಿಳ್ಳೇನಹಳ್ಳಿಯ ಹಳೇ ಪಿಳ್ಳೇನಹಳ್ಳಿಯ ಕಟ್ಟೆಯಲ್ಲಿ ಸುಮಾರು ನಾಲ್ಕೈದು ವರ್ಷಗಳಿಂದ ನೀರಿಲ್ಲದೇ ಜನ,ಜಾನುವಾರ ಪರಿತಪಿಸುವಂತಾಗಿತ್ತು. ಆದರೆ ಇಂದು ಅಯ್ಯನಕೆರೆ ಕೋಡಿ ಬಿದ್ದು ನೀರು ಹರಿದು ವೇದಾ ನದಿಗೆ ಸೇರುವ ಹಳ್ಳದಿಂದ ಎರೆಡು ಪಂಪು ಸೆಟ್ಟುಗಳನ್ನು ಜೋಡಿಸಿ ಸಾವಿರದ ಮುನ್ನೂರೈದಡಿ ಉದ್ದದ ಪೈಪಲೈನನ್ನು ಗ್ರಾಮಸ್ಥರೇ ಸಿದ್ಧಪಡಿಸಿ ನೀರು ತುಂಬಿಸುತ್ತಿದ್ದಾರೆ.

ಸಖರಾಯಪಟ್ಟಣ ಹೋಬಳಿಯೂ ಅನೇಕ ಅಭಿವೃದ್ಧಿ ಕಾರ್ಯಗಳಿಗೆ ವೇದಿಕೆ ಕೈಜೋಡಿಸುತ್ತದೆ. ಹಳೇ ಪಿಳ್ಳೇನಹಳ್ಳಿ ಕಟ್ಟೆಯು ಬಹಳ ವರ್ಷಗಳಿಂದ ನೀರಿಲ್ಲದೆ ಬಿಕೋ ಎನ್ನುತ್ತಿತ್ತು. ರೈತರು ಮಾಡಿದ ಕೆಲಸದಿಂದ ಜನಜಾನುವಾರುಗಳಿಗೆ ಕುಡಿಯಲು ನೀರಾಗಿ ಅಂತರ್ಜಲವೂ ವೃದ್ಧಿಸುತ್ತದೆ. ರೈತರು ಇಂತಿಷ್ಟಕ್ಕೆ ಬಿಡದೆ ಕಟ್ಟೆಯನ್ನು ಅಚ್ಚುಕಟ್ಟು ಮಾಡಿ ಇನ್ನು ಹೆಚ್ಚಿನ ನೀರು ಸಂಗ್ರಹಿಸಲು ಸಹಕರಿಸಬೇಕಾಗಿದೆ ಎನ್ನುತ್ತಾರೆಜಿಲ್ಲಾ ರಕ್ಷ ಣಾ ವೇದಿಕೆಯ ಅಧ್ಯಕ್ಷ ದಿನೇಶ್‌ ಶಿವಪುರ.

ಗ್ರಾಮಸ್ಥರೆಲ್ಲರೂ ಸೇರಿ ಪಿಳ್ಳೇನಹಳ್ಳಿ ಗ್ರಾ.ಪಂ. ನ ಪಿಡಿಒ ನಾಗರಾಜರವರಿಗೆ ಕಟ್ಟೆಯನ್ನು ಅಭಿವೃದ್ಧಿಪಡಿಸಲು ಮನವಿ ಸಲ್ಲಿಸಲಾಯಿತು. ಸುರೇಶ್‌, ಬರತ್‌, ಶೇಕರ್‌, ಮೂರ್ತಿ, ಗಿರೀಶ್‌, ಶಶಿಕುಮಾರ್‌, ರಾಮಜ್ಜ, ಇನ್ನು ಹಲವಾರು ರೈತರು ಹಾಜರಿದ್ದರು.

------------------

ರೈತರೇ ಮುಂದಾಗಿ ಕಟ್ಟೆಯನ್ನು ತುಂಬಿಸುತ್ತಿರುವುದು ನಿಜಕ್ಕೂ ಸಂತೋಷದ ಸಂಗತಿ. ಈ ಭಾಗದ ಜನರಿಗೆ ಈ ಕಟ್ಟೆಯೇ ಜೀವನಾಡಿ. ಇದಕ್ಕೆ ಶಾಶ್ವತವಾದ ಪೈಪ್‌ಲೈನ್‌ ವ್ಯವಸ್ಥೆಯನ್ನು ಅಧಿಕಾರಿಗಳೊಂದಿಗೆ ಮತ್ತು ಗ್ರಾ.ಪಂ.ವಂದಿಗೆ ಚರ್ಚಿಸಿ ಈ ಕಟ್ಟೆ ಅಭಿವೃದ್ಧಿಪಡಿಸಲು ಬದ್ಧ .

-ರುದ್ರಮೂರ್ತಿ, ತಾ.ಪಂ.ಸದಸ್ಯ

---------------

ಕಟ್ಟೆ ತುಂಬುವುದರಿಂದ ಪಿಳ್ಳೇನಹಳ್ಳಿ, ಕಂಚುಗಾರನಹಳ್ಳಿ ,ನಾಗೇನಹಳ್ಳಿ ದನಗಳಿಗೆ ಮತ್ತು ಮೇಕೆಗಳಿಗೆ ಕುಡಿಯಲು ನೀರಾಗಿ ಇದಲ್ಲದೆ ಕಾಡು ಪ್ರಾಣಿಗಳಿಗೂ ಅನುಕೂಲವಾಗಲಿದೆ. ಇನ್ನು ಕಟ್ಟೆ ಭರ್ತಿಯಾದಲ್ಲಿ ಅಂತರ್ಜಲ ಮಟ್ಟವೂ ಸುಧಾರಿಸಿ ರೈತಾಪಿ ವರ್ಗ ನಿಟ್ಟುಸಿರು ಬಿಡಲು ಸಹಕಾರವಾಗುತ್ತವೆ.

-ಗುರುಶಾಂತಪ್ಪ ,ರೈತ ಮುಖಂಡ

-----------

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ