ಆ್ಯಪ್ನಗರ

ಹಣ್ಣಿನ ಗಿಡ ನೆಟ್ಟರೆ ನೈಸರ್ಗಿಕ ಅರಣ್ಯ ವಿಸ್ತಾರ

ಪ್ಲಾಸ್ಟಿಕ್‌ ಮುಕ್ತ ಸ್ವಚ್ಛ ಭಾರತ ನಿರ್ಮಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು ಎಂದು ವನ್ಯಜೀವಿ ಪರಿಪಾಲಕ ಸತೀಶ್‌ಗೌಡ ಹೇಳಿದರು.

Vijaya Karnataka 6 Jun 2019, 5:00 am
ಚಿಕ್ಕಮಗಳೂರು: ಪ್ಲಾಸ್ಟಿಕ್‌ ಮುಕ್ತ ಸ್ವಚ್ಛ ಭಾರತ ನಿರ್ಮಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು ಎಂದು ವನ್ಯಜೀವಿ ಪರಿಪಾಲಕ ಸತೀಶ್‌ಗೌಡ ಹೇಳಿದರು.
Vijaya Karnataka Web CKM-5SHIVUP1


ಮತ್ತೋಡಿ ಭದ್ರಾವನ್ಯಜೀವಿ ವಿಭಾಗ, ಮುತ್ತೋಡಿ ಪ್ರದೇಶಿಕ ವಲಯ ಅರಣ್ಯ, ಹೊಯ್ಸಳ ಅಡ್ವೆಂಚರ್‌ ಕ್ಲಬ್‌ ಮತ್ತು ಯುವಸ್ಪಂದನದಿಂದ ಬುಧವಾರ ಏರ್ಪಡಿಸಿದ್ದ ವಿಶ್ವಪರಿಸರ ದಿನಾಚರಣೆ ಮತ್ತು ಸ್ವಚ್ಛತಾ ಕಾರ್ಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅತಿಯಾದ ಪ್ಲಾಸ್ಟಿಕ್‌ ಬಳಕೆಯಿಂದ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಪ್ರಾಣಿ ಪಕ್ಷಿಗಳು ಪ್ಲಾಸ್ಟಿಕ್‌ ತಿಂದು ಸಾಯುತ್ತಿರುವುದು ಆತಂಕಕಾರಿಯಾಗಿದೆ. ಅರಣ್ಯ ಪ್ರದೇಶದಲ್ಲಿ ಹಣ್ಣು ಬಿಡುವ ಗಿಡಗಳನ್ನು ಹೆಚ್ಚಾಗಿ ಬೆಳೆಸಿ ನೈಸರ್ಗಿಕ ಬೀಜ ಪ್ರಸಾರ ಆಗುವಂತೆ ಮಾಡುವುದರಿಂದ ನೈಸರ್ಗಿಕ ಅರಣ್ಯ ವಿಸ್ತಾರವಾಗಲಿದೆ ಎಂದರು.

ಯವ ಸ್ಪಂದನ ಕೇಂದ್ರದ ಜೋಕಿಮ್‌ ಅಲ್ವಿನ್‌ ಮಾತನಾಡಿ ಇಂದಿನ ಯುವಕರ ಮಾನಸಿಕ ಆರೋಗ್ಯ ಸ್ಥಿತಿ ಉತ್ತಮವಾಗಿರಬೇಕಾದರೆ ಅಲ್ಲಿ ಸ್ವಚ್ಛ ಪರಿಸರ ಇರಬೇಕು ಎಂದರು. ಡಿಆರ್‌ಎಫ್‌ಒ ಸಂಪತ್‌, ರಂಗಸ್ವಾಮಿ, ತೀರ್ಥೇಶ್‌, ವಿಶ್ವನಾಥ್‌, ಧರ್ಮೇಶ್‌, ಸಂತೋಷ್‌, ಮಣಿ, ಸತೀಶ್‌, ಬಸವರಾಜ್‌ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ