ಆ್ಯಪ್ನಗರ

ವೃತ್ತ ವಿಸ್ತರಣೆಗೆ ಗಾಂಧಿ ಪ್ರತಿಮೆ ತೆರವು

ಪಟ್ಟಣದ ಗಾಂಧಿ ವೃತ್ತದಲ್ಲಿರುವ ಗಾಂಧಿ ಪ್ರತಿಮೆಯನ್ನು ವೃತ್ತ ವಿಸ್ತರಣೆ ಸಲುವಾಗಿ ಪೊಲೀಸರು, ತಹಸೀಲ್ದಾರ್‌ ಸಮ್ಮುಖದಲ್ಲಿಗ್ರಾಮ ಪಂಚಾಯಿತಿ ನೌಕರರು ಜಾಗರೂಕತೆಯಿಂದ ತೆರವುಗೊಳಿಸಿ, ಗ್ರಾಮ ಪಂಚಾಯಿತಿಗೆ ಸ್ಥಳಾಂತರಿಸಿದರು.

Vijaya Karnataka 19 Sep 2019, 10:18 pm
ಅಜ್ಜಂಪುರ: ಪಟ್ಟಣದ ಗಾಂಧಿ ವೃತ್ತದಲ್ಲಿರುವ ಗಾಂಧಿ ಪ್ರತಿಮೆಯನ್ನು ವೃತ್ತ ವಿಸ್ತರಣೆ ಸಲುವಾಗಿ ಪೊಲೀಸರು, ತಹಸೀಲ್ದಾರ್‌ ಸಮ್ಮುಖದಲ್ಲಿಗ್ರಾಮ ಪಂಚಾಯಿತಿ ನೌಕರರು ಜಾಗರೂಕತೆಯಿಂದ ತೆರವುಗೊಳಿಸಿ, ಗ್ರಾಮ ಪಂಚಾಯಿತಿಗೆ ಸ್ಥಳಾಂತರಿಸಿದರು.
Vijaya Karnataka Web gandhi statue cleared for circle expansion
ವೃತ್ತ ವಿಸ್ತರಣೆಗೆ ಗಾಂಧಿ ಪ್ರತಿಮೆ ತೆರವು


ಕಳೆದ 1 ವರ್ಷದಿಂದ ವೃತ್ತ ವಿಸ್ತರಣೆಗೆ ಗಾಂಧಿ ಪ್ರತಿಮೆ ಅಡ್ಡಿ ಬಂದಿದ್ದು ಸಾಧಕ-ಬಾಧಕ, ಪತ್ರ ವ್ಯವಹಾರ ಮೂಲಕ ಗ್ರಾಮ ಪಂಚಾಯಿತಿ ಆಡಳಿತ ಕೊನೆಗೂ ಗಾಂಧಿ ಪ್ರತಿಮೆ ತೆರವುಗೊಳಿಸಿರುವುದನ್ನು ಸಾರ್ವಜನಿಕರು ಪ್ರಶಂಸಿದರು.ತರೀಕೆರೆ-ಬುಕ್ಕಾಂಬುಧಿ-ಹೊಸದುರ್ಗ-ಬೀರೂರು ಮಾರ್ಗಕ್ಕೆ ಸಂಪರ್ಕಿಸುವ ಸುಮಾರು 24 ವರ್ಷಗಳ ಹಿಂದೆ ನಿರ್ಮಿಸಿದ್ದ ಗಾಂಧಿ ಪ್ರತಿಮೆಯನ್ನು ಗ್ರಾಮ ಪಂಚಾಯಿತಿ ನೌಕರರು ಜಾಗ್ರತೆಯಿಂದ ತೆರವುಗೊಳಿಸಿದರು.

ವೃತ್ತ ವಿಸ್ತರಣೆಗೆ ಹಲವು ಅಡ್ಡಿ ಆತಂಕಗಳು ಎದುರಾಗಿದ್ದವು. ಶಾಸಕ ಡಿ.ಎಸ್‌. ಸುರೇಶ್‌, ಪ್ರತಿಮೆ ತೆರವುಗೊಳಿಸುವುದು ಸ್ಥಳೀಯ ಗ್ರಾಮ ಪಂಚಾಯಿತಿ ಆಡಳಿತ. ಅವರು ತೆರವುಗೊಳಿಸಿದರೆ ವೃತ್ತ ವಿಸ್ತರಣೆಗೆ ಸಹಕರಿಸಲಾಗುವುದು. ಹಾಗೆಯೇ ನನೆಗುದಿಗೆ ಬಿದ್ದಿರುವ ರಸ್ತೆ ವಿಸ್ತರಣೆ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದ್ದರು.ಹಲವು ಪಟ್ಟಭದ್ರ ಹಿತಾಸಕ್ತಿಗಳು ವೃತ್ತ ವಿಸ್ತರಣೆ ಮತ್ತು ರಸ್ತೆ ಅಗಲೀಕರಣಕ್ಕೆ ಸಹಕರಿಸದೆ ಪಟ್ಟಣದ ಏಳ್ಗೆಗೆ ತೊಂದರೆ ಉಂಟು ಮಾಡಿದ್ದರು. ಗಾಂಧಿ ವೃತ್ತ ಟ್ರಾಫಿಕ್‌ನಿಂದ ನಲುಗಿದ್ದು, ವೃತ್ತ ವಿಸ್ತರಣೆ ಮಾಡಲೇಬೇಕಾಗಿರುವುದು ಅನಿವಾರ್ಯವಾಗಿತ್ತು. ನಾಲ್ಕು ಪ್ರಮುಖ ರಸ್ತೆಗಳು ವೃತ್ತವನ್ನು ದಾಟಿ ಹೋಗಬೇಕಾಗಿದ್ದು ಆಗಾಗ್ಗೆ ಇಲ್ಲಿಅಪಘಾತಗಳು ಸಂಭವಿಸುತ್ತಿದ್ದವು.ತಹಸೀಲ್ದಾರ್‌ ವೈ. ವಿಶ್ವೇಶ್ವರೆಡ್ಡಿ, ಪಿಎಸ್‌ಐ ರಫೀಕ್‌, ಪಿಡಿಒ ಶ್ರೀನಿವಾಸ್‌, ಗ್ರಾ.ಪಂ. ಅಧ್ಯಕ್ಷೆ ಚನ್ನಬಸಮ್ಮ, ಉಪಾಧ್ಯಕ್ಷೆ ಸುನಂದ, ಗ್ರಾಮ ಪಂಚಾಯಿತಿ ಸದಸ್ಯರು ಹಾಜರಿದ್ದು ಗಾಂಧಿ ಪ್ರತಿಮೆ ತೆರವುಗೊಳಿಸಲು ಸಹಕರಿಸಿದರು.

ಎಷ್ಟು ಅಡಿ ವಿಸ್ತರಣೆ : ಗಾಂಧಿ ಪ್ರತಿಮೆ ತೆರವುಗೊಳಿಸಿದ ನಂತರ ವೃತ್ತವನ್ನು ಎಷ್ಟು ಅಡಿ ವಿಸ್ತರಣೆ ಮಾಡುತ್ತಾರೆ ಎಂಬುದು ತಿಳಿದಿಲ್ಲ. ಸಂಬಂಧಿಸಿದ ಇಲಾಖೆ ಎಂಜಿನಿಯರ್‌ ಅವರನ್ನು ಗ್ರಾಮ ಪಂಚಾಯಿತಿಗೆ ಕರೆಯಿಸಿ, ಸಾರ್ವಜನಿಕರೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ವೃತ್ತ ವಿಸ್ತರಣೆ ನಂತರ ಇದೇ ಸ್ಥಳದಲ್ಲಿಬೃಹತ್‌ ಗಾಂಧಿ ಪ್ರತಿಮೆ ನಿರ್ಮಿಸಲು ರಸ್ತೆ ಕಾಮಗಾರಿ ಗುತ್ತಿಗೆದಾರರು ಒಪ್ಪಿದ್ದಾರೆ ಎಂದು ತಹಸೀಲ್ದಾರ್‌ ವಿಶ್ವೇಶ್ವರರೆಡ್ಡಿ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ