ಆ್ಯಪ್ನಗರ

ಕಾಯಿಲೆ ಉಲ್ಬಣಿಸುವ ಮುನ್ನವೇ ಚಿಕಿತ್ಸೆ ಪಡೆಯಿರಿ

ಆರಂಭಿಕ ಹಂತದಲ್ಲಿ ಕಾಣಿಸಿಕೊಳ್ಳುವ ರೋಗಗಳು ಉಲ್ಬಣವಾಗುವುದಕ್ಕಿಂತ ಮುಂಚೆ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುವುದು ಸೂಕ್ತ ಎಂದು ದಾವಣಗೆರೆಯ ಎಸ್‌ಎಸ್‌ಐಎಂಎಸ್‌ ಸ್ಪರ್ಶ್‌ ಆಸ್ಪತ್ರೆಯ ವೈದ್ಯ ಡಾ. ಜಿ.ವಿ. ಕಿರಣ್‌ ಹೇಳಿದರು.

Vijaya Karnataka 18 Jul 2019, 9:44 pm
ಕಡೂರು : ಆರಂಭಿಕ ಹಂತದಲ್ಲಿ ಕಾಣಿಸಿಕೊಳ್ಳುವ ರೋಗಗಳು ಉಲ್ಬಣವಾಗುವುದಕ್ಕಿಂತ ಮುಂಚೆ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುವುದು ಸೂಕ್ತ ಎಂದು ದಾವಣಗೆರೆಯ ಎಸ್‌ಎಸ್‌ಐಎಂಎಸ್‌ ಸ್ಪರ್ಶ್‌ ಆಸ್ಪತ್ರೆಯ ವೈದ್ಯ ಡಾ. ಜಿ.ವಿ. ಕಿರಣ್‌ ಹೇಳಿದರು.
Vijaya Karnataka Web CKM-17KDR1


ಪಟ್ಟಣದ ಪಾಂಡುರಂಗ ಕಲ್ಯಾಣ ಮಂಟಪದಲ್ಲಿ ಭಾವಸಾರ ವಿಜನ್‌ ಇಂಡಿಯಾ ಕಡೂರು, ಭಾವಸಾರ ಸಮಾಜ ಮತ್ತು ಸ್ಪರ್ಶ್‌ ಆಸ್ಪತ್ರೆಯ ಸಹಯೋಗದೊಂದಿಗೆ ಸಾರ್ವಜನಿಕರಿಗೆ ಏರ್ಪಡಿಸಿದ್ದ ಉಚಿತ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಮೂಳೆ ಮತ್ತು ಕೀಲು ತಪಾಸಣಾ ಶಿಬಿರದಲ್ಲಿ ಪ್ರಮುಖವಾಗಿ ಬುಜ, ಮೊಣಕಾಲು, ಕೀಲು ಮತ್ತು ಬೆನ್ನು ನೋವು ಸಮಸ್ಯೆಗಳಿಗೆ ಮೂಲಭೂತ ತಪಾಸಣೆ ಮತ್ತು ತಜ್ಞ ವೈದ್ಯರ ಸಲಹೆ ಪ್ರಮುಖವಾಗಿರುತ್ತದೆ. ಮೂಳೆ, ಕೀಲು ರೋಗಗಳು ಅನೇಕ ಕಾರಣಗಳಿಂದ ಬರಬಹುದು, ಪೊ್ಲೕರೈಡ್‌ ಮಿಶ್ರಿತ ನೀರು ಕುಡಿಯುವುದರಿಂದ, ಅನುವಂಶಿಯವಾಗಿ ರೋಗವು ಬರುಬಹುದು. ಸರಿಯಾದ ಸಮಯಕ್ಕೆ ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆ ಪಡೆದರೆ ರೋಗವನ್ನು ದೂರವಿಡಲು ಸಾಧ್ಯ ಎಂದರು.

ತಾಲೂಕು ಭಾವಸಾರ ಸಮಾಜದ ಅಧ್ಯಕ್ಷ ಕೆ. ಮೂರ್ತಿರಾವ್‌ ಮಾತನಾಡಿದರು.

ಅಧ್ಯಕ್ಷ ತೆ ವಹಿಸಿದ್ದ ತಾ. ಭಾವಸಾರ ವಿಜನ್‌ ಇಂಡಿಯಾ ಅಧ್ಯಕ್ಷ ಕೆ.ಎಂ. ಸತೀಶ್‌ ಮಾತನಾಡಿ, ವಿಜನ್‌ ಅನೇಕ ಸಾರ್ವಜನಿಕವಾಗಿ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ. ಇಂದು ನಡೆದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಸುಮಾರು 450 ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳ ತಪಾಸಣೆ ನಡೆಸಲಾಗಿದೆ ಎಂದರು. ವಿಜನ್‌ ಏರಿಯಾ ಗೌರ್ನರ್‌ರಾದ ಕೆ.ಎನ್‌. ಮಂಜುನಾಥರಾವ್‌ ಬಾಂಗ್ರೆ, ಕಾರ್ಯದರ್ಶಿ ನಾಗರಾಜ್‌ ಸ್ಫಟಿಕೆ, ಎಂ.ಎನ್‌. ಪುಂಡಲೀಕರಾವ್‌, ಕಡೂರು ದೇವೇಂದ್ರ, ಜ್ಯೋತಿದೇವೇಂದ್ರ, ರವಿಶಂಕರ್‌, ಪಾಂಡುರಂಗರಾವ್‌, ಕೃಷ್ಣಮೂರ್ತಿ, ವೈದ್ಯರಾದ ಡಾ. ಪ್ರವೀಣ್‌, ಡಾ. ಆಶಿಷ್‌ ಮತ್ತು ಸ್ಪರ್ಶ್‌ ಆಸ್ಪತ್ರೆಯ ಸಿಬ್ಬಂದಿ ವರ್ಗ ಸೇರಿದಂತೆ ವಿಜನ್‌ನ ಕಾರ್ಯಕರ್ತರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ