ಆ್ಯಪ್ನಗರ

ಕುಡಿಯೋ ನೀರು ಕೊಡಿ ಸ್ವಾಮಿ

ಪಟ್ಟಣದ ರೈಸ್‌ ಮಿಲ್‌ ರಸ್ತೆ ವಾರ್ಡ್‌ ನಂ 1ರಲ್ಲಿ ಕುಡಿಯಲು ನೀರೊದಗಿಸುವ ಬೋರ್‌ವೆಲ್‌ ಕೆಟ್ಟು ಹೋಗಿ ಒಂದು ವಾರ ಕಳೆದಿದ್ದು ,ವಾಸಿಗಳು ನೀರಿಗಾಗಿ ಪರದಾಡುವಂತಾಗಿದೆ.

Vijaya Karnataka 4 Apr 2019, 5:00 am
ಆಲ್ದೂರು : ಪಟ್ಟಣದ ರೈಸ್‌ ಮಿಲ್‌ ರಸ್ತೆ ವಾರ್ಡ್‌ ನಂ 1ರಲ್ಲಿ ಕುಡಿಯಲು ನೀರೊದಗಿಸುವ ಬೋರ್‌ವೆಲ್‌ ಕೆಟ್ಟು ಹೋಗಿ ಒಂದು ವಾರ ಕಳೆದಿದ್ದು ,ವಾಸಿಗಳು ನೀರಿಗಾಗಿ ಪರದಾಡುವಂತಾಗಿದೆ.
Vijaya Karnataka Web CKM-3ALDUR3A


ಇಲ್ಲಿನ ರೈಸ್‌ ಮಿಲ್‌ ರಸ್ತೆಗೆ ನೀರೊದಗಿಸುವ ನೀರಿನ ಮೂಲವಾಗಿರುವ ಬೋರ್‌ವೆಲ್‌ ಕಳೆದ ವಾರ ಹಾಳಾಗಿದ್ದು, ಜನ ಹನಿ ನೀರಿಗಾಗಿ ಪರದಾಡುವಂತಾಗಿದೆ. ಈ ಭಾಗದಲ್ಲಿ ಪದೆ ಪದೇ ಮೋಟಾರ್‌ ಹಾಳಾÜಗುತ್ತಿದ್ದು ವರ್ಷದಲ್ಲಿ 5- 6 ಬಾರಿ ರಿಪೇರಿ ಮಾಮೂಲಾಗಿದೆ. ಜನ ಕೊಡ ಹಿಡಿದು ನೀರಿಗಾಗಿ ಅಲೆದಾಡುವಂತಾಗಿದೆ.

ಈ ಭಾಗದ ಗ್ರಾ ಪಂ ಸದಸ್ಯರು ತಲೆಕೆಡಿಸಿಕೊಂಡಿಲ್ಲ. ನಿವಾಸಿಗಳ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಬೋರ್‌ವೆಲ್‌ ಬಿಟ್ಟರೆ ನೀರಿಗೆ ಬೇರೆ ವ್ಯವಸ್ಥೆಯಿಲ್ಲ. ಚುನಾವಣೆಯಲ್ಲಿ ಗೆದ್ದು ಹೋಗುತ್ತಾರೆ. ಜನರ ಸಮಸ್ಯೆಗಳನ್ನು ಬಗೆಹರಿಸುವ ಬಗ್ಗೆ ಗಮನ ಹರಿಸುತ್ತಿಲ್ಲ ಎಂಬುದು ನಿವಾಸಿಗಳ ಆಕ್ರೋಶ.

ಆಲ್ದೂರು ಪಟ್ಟಣಕ್ಕೆ ಶ್ವಾಶ್ವತ ಕುಡಿಯುವ ನೀರಿನ ಯೋಜನೆ ಮರೀಚಿಕೆಯಾಗಿದೆ. ಕೆಲವರು ನೀರಿನ ಬವಣೆಯಿಂದಾಗಿ ದುಡ್ಡುಕೊಟ್ಟು ಟ್ಯಾಂಕರ್‌ನಲ್ಲಿ ನೀರು ತರಿಸಿಕೊಳ್ಳುತ್ತಿದ್ದಾರೆ. ಬಡವರು ಹಣ ಕೊಟ್ಟು ನೀರು ತರಿಸಿಕೊಳ್ಳಲು ಸಾಧ್ಯವೇ ? ಆಲ್ದೂರು ಸುತ್ತಮುತ್ತ ಸುಗ್ಗಿ ಹಬ್ಬ ಪ್ರಾರಂಭವಾಗಿದ್ದು ಹಬ್ಬದ ಸ್ವಚ್ಛತೆಗೆ ನೀರಿಲ್ಲದೆ ಕೊಡ ಹಿಡಿದು ನೀರಿಗೆ ಅಲೆಯುವ ಪರಿಸ್ಥಿತಿ ಬಂದಿದೆ. ಶೀಘ್ರವಾಗಿ ಈ ಭಾಗಕ್ಕೆ ಮತ್ತೊಂದು ಬೋರ್‌ವೆಲ್‌ ವ್ಯವಸ್ಥೆ ಮಾಡಬೇಕು ಎಂದು ನಿವಾಸಿ ವೆಂಕಟೇಶ್‌ ಒತ್ತಾಯಿಸಿದ್ದಾರೆ.

--------------

ನಾಳೆ ಬೋರ್‌ವೆಲ್‌ ರಿಪೇರಿಯಾಗುತ್ತದೆ. ಇಲ್ಲವಾದಲ್ಲಿ ಟ್ಯಾಂಕರ್‌ ಮೂಲಕ ನೀರು ಕೊಡಿಸುವ ವ್ಯವಸ್ಥೆ ಮಾಡುತ್ತೇನೆ . ಈ ಭಾಗಕ್ಕೆ ಮತ್ತೊಂದು ಬೋರ್‌ವೆಲ್‌ ಕೊರೆಸುವ ಬಗ್ಗೆ ಎಂಜಿನಿಯರ್‌ ಜೊತೆ ಮಾತನಾಡಿದ್ದು ಚುನಾವಣೆ ನೀತಿ ಸಂಹಿತೆ ಮುಗಿದ ನಂತರ ಇನ್ನೊಂದು ಬೋರ್‌ವೆಲ್‌ ಕೊರೆಸಲಾಗವುದು.

-ನಗೀನಾ ನೂರ್‌, ಗ್ರಾ ಪಂ ಸದಸ್ಯೆ

---------

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ