ಆ್ಯಪ್ನಗರ

ದುಶ್ಚಟ ತ್ಯಜಿಸಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಿ

ದುಶ್ಚಟಗಳ ಸಹವಾಸದಿಂದ ಹಾದಿ ತಪ್ಪಿದವರು ವಿಷವರ್ತುಲದಿಂದ ಹೊರಬಂದು ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ ಮೂಲಕ ಸಮಾಜದಲ್ಲಿ ತಲೆಎತ್ತಿ ಬಾಳುವಂತಾಗಬೇಕು ಎಂದು ರಾಜ್ಯ ಜನಜಾಗೃತಿ ವೇದಿಕೆ ನಿರ್ದೇಶಕ ವಿವೇಕ್‌ ವಿನ್ಸೆಂಟ್‌ ಪಾಯಸ್‌ ಆಶಿಸಿದರು.

Vijaya Karnataka 26 Jun 2019, 5:00 am
ಬೀರೂರು: ದುಶ್ಚಟಗಳ ಸಹವಾಸದಿಂದ ಹಾದಿ ತಪ್ಪಿದವರು ವಿಷವರ್ತುಲದಿಂದ ಹೊರಬಂದು ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ ಮೂಲಕ ಸಮಾಜದಲ್ಲಿ ತಲೆಎತ್ತಿ ಬಾಳುವಂತಾಗಬೇಕು ಎಂದು ರಾಜ್ಯ ಜನಜಾಗೃತಿ ವೇದಿಕೆ ನಿರ್ದೇಶಕ ವಿವೇಕ್‌ ವಿನ್ಸೆಂಟ್‌ ಪಾಯಸ್‌ ಆಶಿಸಿದರು.
Vijaya Karnataka Web CKM-25BRR3


ಪಟ್ಟಣದ ತರಳಬಾಳು ಕಲ್ಯಾಣ ಮಂದಿರದಲ್ಲಿ ಶನಿವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಮ್ಮಿಕೊಂಡಿದ್ದ 1374ನೇ ಮದ್ಯವರ್ಜನ ಶಿಬಿರದ ಸಮಾರೋಪದಲ್ಲಿ ಮಾತನಾಡಿದರು. ಮದ್ಯವ್ಯಸನ, ತಂಬಾಕು ಸೇವನೆಯಿಂದ ಮುಕ್ತರಾಗುವ ಸದುದ್ದೇಶದಿಂದ ನೀವು ಶಿಬಿರಾರ್ಥಿಗಳಾಗಿ ಕಳೆದ ಒಂದು ವಾರದಿಂದ ಪಾಲ್ಗೊಂಡಿದ್ದೀರಿ, ಹೊರಗೆ ನಿಮಗಾಗಿ ಇಬ್ಬರು ಕಾಯುವವರಿದ್ದಾರೆ, ಒಬ್ಬರು ಪತ್ನಿ, ಮತ್ತೊಬ್ಬರು ನಿಮ್ಮನ್ನು ಸಹವಾಸದಿಂದ ಚಟಗಳ ಕಡೆ ಸೆಳೆಯುವ 'ಹಿತೈಷಿಗಳು'. ನೀವು ಪತ್ನಿಯ ಕಡೆ ನಡೆದರೆ ಇಲ್ಲಿನ ಅಗ್ನಿಪರೀಕ್ಷೆಯಲ್ಲಿ ಗೆದ್ದು ಹೊಸಬದುಕು ಕಟ್ಟುವ ಕಡೆ ಸಾಗಿದ್ದೀರಿ ಎಂದು ಅರ್ಥ. ಇಲ್ಲವಾದರೆ ನಿಮ್ಮ ಬದುಕು ದುರಂತದಲ್ಲಿ ಮುಗಿಯಲಿದೆ ಎಂದು ಎಚ್ಚರಿಸಿದರು.

ಸಾನ್ನಿಧ್ಯ ವಹಿಸಿದ್ದ ಬೀರೂರು ರಂಭಾಪುರಿ ಖಾಸಾ ಶಾಖಾಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಸಂಸ್ಕೃತಿ, ಪರಂಪರೆ, ತತ್ತ್ವ, ಸಿದ್ಧಾಂತಗಳನ್ನು ನಾವು ಮೆಟ್ಟಿ ಮೇಲೆ ಬಂದೆವು, ನಮ್ಮ ಬದುಕು ಅವನತಿಯತ್ತ ಸಾಗಿದೆ.ನಾವು ಸಂಸ್ಕಾರ ಅರಿತು ಧರ್ಮದಿಂದ ನಡೆದರೆ ದಾರಿದ್ರ್ಯ ನಾಶವಾಗಿ ಸುಭಿಕ್ಷ ದೊರೆಯಲಿದೆ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಪ್ರಕಾಶ್‌ರಾವ್‌, ಪುರಸಭೆ ಮಾಜಿ ಅಧ್ಯಕ್ಷೆ ಸವಿತಾರಮೇಶ್‌ ಮಾತನಾಡಿದರು. ಶಿಬಿರ ಆಯೋಜನ ಸಮಿತಿಯ ಅಧ್ಯಕ್ಷ ಸಿ.ಸಿ.ಕುಮಾರ್‌ ಅಧ್ಯಕ್ಷ ತೆ ವಹಿಸಿ ಮಾತನಾಡಿದರು. ರಾಜ್ಯ ಜನಜಾಗೃತಿ ವೇದಿಕೆ ಅಧ್ಯಕ್ಷ ಸತೀಶ್‌ ಹೊನವಳ್ಳಿ, ತಾಲೂಕು ಯೋಜನಾಧಿಕಾರಿ ಕರುಣಾಕರ ಆಚಾರ್ಯ, ಬೀರೂರು ವಲಯ ಮೇಲ್ವಿಚಾರಕ ಆರ್‌. ನಾಗರಾಜ್‌, ವಿವಿಧ ದೇವಾಲಯ ಸಮಿತಿಗಳು, ಸಂಘ-ಸಂಸ್ಥೆಗಳ ಅಧ್ಯಕ್ಷ ರು, ಸದಸ್ಯರು, ಸೇವಾಪ್ರತಿನಿಧಿಗಳು, ಪ್ರಗತಿಬಂಧು ಒಕ್ಕೂಟದ ಸದಸ್ಯೆಯರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ