ಆ್ಯಪ್ನಗರ

ದೇವರ ಆರಾಧನೆಯಿಂದ ನೆಮ್ಮದಿ

ಭಗವಂತನನ್ನು ಭಕ್ತಿಯಿಂದ ಆರಾಧಿಸಿದರೆ ಸ್ವಾಮಿಯು ಒಲಿಯುತ್ತಾನೆ ಎಂದು ಶ್ರೀಮಠದ ಸದ್ವಿದ್ಯಾ ಸಂಜೀವಿನಿ ಸಂಸ್ಕೃತ ಪಾಠಶಾಲೆಯ ನಾಗರಾಜಭಟ್‌ ಹೇಳಿದರು.

Vijaya Karnataka 20 Dec 2018, 5:00 am
ಶೃಂಗೇರಿ: ಭಗವಂತನನ್ನು ಭಕ್ತಿಯಿಂದ ಆರಾಧಿಸಿದರೆ ಸ್ವಾಮಿಯು ಒಲಿಯುತ್ತಾನೆ ಎಂದು ಶ್ರೀಮಠದ ಸದ್ವಿದ್ಯಾ ಸಂಜೀವಿನಿ ಸಂಸ್ಕೃತ ಪಾಠಶಾಲೆಯ ನಾಗರಾಜಭಟ್‌ ಹೇಳಿದರು.
Vijaya Karnataka Web CKM-19SRI7


ಅವರು ಮಂಗಳವಾರ ಶ್ರೀಮಠದ ಪ್ರವಚನ ಮಂದಿರದಲ್ಲಿ ಗೀತಾಜಯಂತಿ ಅಂಗವಾಗಿ ಏರ್ಪಡಿಸಿದ್ದ ಭಗವದ್ಗೀತ ಸಮರ್ಪಣಾ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

ಭಗವಂತನ ಅನುಗ್ರಹ ಬಯಸಿ ಪೂಜಿಸಿದರೆ ನಮ್ಮ ಕಷ್ಟ ಕಾರ್ಪಣ್ಯಗಳು ದೂರಾಗಿ ಮನಸ್ಸಿಗೆ ಶಾಂತಿ ನೆಮ್ಮದಿ ದೊರಕುತ್ತದೆ. ಆದರೆ, ಸ್ವಾಮಿಯ ಪ್ರಾರ್ಥನೆ ಸ್ವಾರ್ಥರಹಿತವಾಗಿ, ಭಕ್ತಿಯಿಂದ ಇರಬೇಕು. ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಅನೇಕ ವಿಚಾರವನ್ನು ತಿಳಿಸಿದ್ದಾನೆ. ಇಚ್ಛೆಯನ್ನು ಪೂರೈಸಿಕೊಳ್ಳುವುದು,ದೇವರನ್ನು ಅಪಾರವಾಗಿ ಭಕ್ತಿಯಿಂದ ಪೂಜಿಸುವುದು ಸಮರ್ಪಣಾ ಭಾವದಿಂದ ಮಾಡಿದರೆ ನಮಗೆ ಭಗವಂತ ಒಲಿಯುತ್ತಾನೆ ಎಂದರು.

ಈ ಸಂದರ್ಭ ಭಗವದ್ಗೀತೆ ಕಂಠಪಾಠ ಮಾಡಿ ಜಗದ್ಗುರುಗಳ ಎದುರು ಅರ್ಪಿಸಿದ ಭಕ್ತಾದಿಗಳು, ಮತ್ತಿತರರು ಇದ್ದರು. ಗೀತಾ ಜಯಂತಿ ಅಂಗವಾಗಿ ಮಹಿಳೆಯರು ಭಗವದ್ಗೀತೆಯ 18 ಅಧ್ಯಾಯವನ್ನು ಪಠಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ