ಆ್ಯಪ್ನಗರ

ಸೂರ್ಯ ನಮಸ್ಕಾರದಿಂದ ಉತ್ತಮ ಆರೋಗ್ಯ

ಪ್ರತಿ ದಿನ ಮುಂಜಾನೆ ಸೂರ್ಯ ನಮಸ್ಕಾರ ಮಾಡುವುದರಿಂದ ಸದೃಢ ಆರೋಗ್ಯ ಸಾಧ್ಯ ಎಂದು ರಾಜೀವ್‌ ಗಾಂಧಿ ಸಂಸ್ಕೃತ ಕಾಲೇಜಿನ ಮೀಮಾಂಸ ವಿಭಾಗದ ಮುಖ್ಯಸ್ಥ ಸೂರ್ಯ ನಾರಾಯಣಭಟ್‌ ಹೇಳಿದರು.

Vijaya Karnataka 13 Feb 2019, 5:00 am
ಶೃಂಗೇರಿ : ಪ್ರತಿ ದಿನ ಮುಂಜಾನೆ ಸೂರ್ಯ ನಮಸ್ಕಾರ ಮಾಡುವುದರಿಂದ ಸದೃಢ ಆರೋಗ್ಯ ಸಾಧ್ಯ ಎಂದು ರಾಜೀವ್‌ ಗಾಂಧಿ ಸಂಸ್ಕೃತ ಕಾಲೇಜಿನ ಮೀಮಾಂಸ ವಿಭಾಗದ ಮುಖ್ಯಸ್ಥ ಸೂರ್ಯ ನಾರಾಯಣಭಟ್‌ ಹೇಳಿದರು.
Vijaya Karnataka Web CKM-12SRI3


ಶ್ರೀಮಠದ ಆವರಣದಲ್ಲಿ ಪತಂಜಲಿ ಯೋಗ ಶಿಕ್ಷ ಣ ಸಮಿತಿ ರಥಸಪ್ತಮಿ ಪ್ರಯುಕ್ತ ಮಂಗಳವಾರ ಏರ್ಪಡಿಸಿದ್ದ ಸಾಮೂಹಿಕ 108 ಸೂರ್ಯ ನಮಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರಾತಃ ಕಾಲದಲ್ಲಿ ಸೂರ್ಯದೇವನು ಸೃಷ್ಟಿಕರ್ತ ಬ್ರಹ್ಮನಂತೆ ಕಾರ್ಯ ನಿರ್ವಹಿಸುತ್ತಾನೆ. ಮಧ್ಯಾಹ್ನ ಲಯಕರ್ತ ಮಹೇಶ್ವರನಂತೆ ಕಂಗೊಳಿಸಿ, ಸಂಧ್ಯಾ ಕಾಲದಲ್ಲಿ ಮಹಾ ವಿಷ್ಣುವಿನಂತೆ ಪ್ರಶಾಂತವಾಗಿ ಕಾರ್ಯ ನಿರ್ವಹಿಸುತ್ತಾನೆ. ಭಗವಾನ್‌ ಸೂರ್ಯದೇವ ಕಣ್ಣಿಗೆ ಗೋಚರಿಸುವ ದೇವನಾಗಿದ್ದು, ರಥ ಸಪ್ತಮಿ ದಿನದಂದು ಅವನ ಪ್ರಥಮ ಕಿರಣ ದೇಹದ ಮೇಲೆ ಬೀಳುವುದರಿಂದ ಉಲ್ಲಾಸ ಹಾಗೂ ಉತ್ತಮ ಆರೋಗ್ಯ ನೀಡುತ್ತದೆ ಎಂದರು.

ಪತಂಜಲಿ ಯೋಗ ಶಿಕ್ಷ ಣ ಸಂಸ್ಥೆಯ ಅಧ್ಯಕ್ಷ ಡಾ.ವೀರಪ್ಪಗೌಡ ಮಾತನಾಡಿ, ಯೋಗದಿಂದ ಉತ್ತಮ ಆರೋಗ್ಯ , ಮಾನಸಿಕ ನೆಮ್ಮದಿ ಪಡೆಯಬಹುದು. ಕಳೆದ ಒಂದು ದಶಕದಿಂದ ಪತಂಜಲಿ ಯೋಗ ಶಿಕ್ಷ ಣ ಸಂಸ್ಥೆಯು ರಥ ಸಪ್ತಮಿ ದಿನದಂದು ಸೂರ್ಯ ನಮಸ್ಕಾರ ಆಯೋಜಿಸುತ್ತಿದೆ ಎಂದರು.

ಸಂಸ್ಥೆಯ ಎ.ಡಿ.ಉಮೇಶ್‌, ನಾಗೇಶ್‌ ಕಾಮತ್‌ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ