ಕೊಪ್ಪ : ಶುದ್ಧ ಹೃದಯವಿದ್ದಾಗ ಉತ್ತಮ ಸಾಹಿತ್ಯ ರಚನೆ ಸಾಧ್ಯ ಎಂದು ಹಾಸನದ ಶ್ರೀ ಆದಿಚುಂಚನಗಿರಿ ಶಾಖಾ ಮಠದ ಕಾರ್ಯದರ್ಶಿ ಶ್ರೀ ಶಂಭೂನಾತ ಸ್ವಾಮೀಜಿ ಹೇಳಿದರು.
ತಾಲೂಕಿನ ಸಮೀಪದ ಕುಪ್ಪಳ್ಳಿಯ ಹೇಮಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ರಾಜ್ಯ ಮಟ್ಟದ ಮಕ್ಕಳ ಸಾಹಿತ್ಯ ರಚನಾ ಮತ್ತು ರಂಗ ಕಮ್ಮಟ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.
ಮಕ್ಕಳಲ್ಲಿ ಅಪಾರವಾದ ಪ್ರತಿಭೆ ಅಡಗಿದೆ. ಅವರ ಮನಸ್ಸಿನೊಳಗಿನ ಮಲ್ಲಿಗೆಯು ಅರಳಿ ಸುವಾಸನೆ ಬೀರಿದಾಗ ಕಮ್ಮಟಕ್ಕೆ ಒಂದು ಅರ್ಥ ಬರುತ್ತದೆ. ಅವರು ಶ್ರದ್ಧೆಯಿಂದ ನಿರಂತರ ಅಧ್ಯಯನ ಕೈಗೊಳ್ಳಬೇಕು. ಅವರು ಕಮ್ಮಟದಿಂದ ಸಾಹಿತ್ಯಾಭಿಮಾನಿಯಾಗಿ, ಸುಸಂಸ್ಕೃತರಾಗಿ, ಒಳ್ಳೆಯ ಪ್ರಜೆಯಾಗಿ ಮತ್ತು ಒಳ್ಳೆಯ ಮನುಷ್ಯರಾಗಿ ರೂಪುಗೊಳ್ಳಬೇಕು. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಆಶ್ರಯ ನೀಡಿ ಸಲಹುವುದು ಶ್ರೀ ಮಠದ ಆಶಯವಾಗಿದೆ ಎಂದರು.
ಶೃಂಗೇರಿ ಶಾಖಾ ಮಠದ ಕಾರ್ಯದರ್ಶಿ ಶ್ರೀ ಗುಣನಾಥ ಸ್ವಾಮೀಜಿ ಮಾತನಾಡಿ, ಇಲ್ಲಿ ಸಂಪನ್ಮೂಲ ವ್ಯೆಕ್ತಿ ಮಕ್ಕಳ ಮನಸ್ಸಿನಲ್ಲಿ ಸಾಹಿತ್ಯವೆಂಬ ಸಕ್ಕರೆ ತುಂಬಿದ್ದಾರೆ. ಮಕ್ಕಳು ಅದನ್ನು ಮೆಲುಕು ಹಾಕುತ್ತಾ ಉತ್ತಮ ಸಾಹಿತಿಗಳಾಗಬೇಕು ಎಂದರು.
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಬೋಳುವಾರು ಮಹಮ್ಮದ್ ಕುಂಞ್ಞ ಮಾತನಾಡಿ, ಸಮಾಜದ ಎಲ್ಲ ಮಕ್ಕಳಿಗೆ ಇಂತಹ ಅವಕಾಶ ಲಭಿಸಬೇಕು. ಮುಂದಿನ 10 ವರ್ಷ ನಂತರ ಇವರಲ್ಲಿ ಕನಿಷ್ಟ 6 ಮಂದಿ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪ್ರಶಸ್ತಿ ಪುರಸ್ಕಾರ ಪಡೆಯುವುದರಲ್ಲಿ ಸಂಶಯವಿಲ್ಲ ಎಂದರು.
ಕಮ್ಮಟದ ನಿರ್ದೇಶಕ ಬೇಲೂರು ರಘುನಂದನ್ ಮಾತನಾಡಿ, ಈ ಭಾಗದಲ್ಲಿ ಮಕ್ಕಳ ರಂಗಭೂಮಿಯ ಅವಶ್ಯಕತೆಯಿದೆ. ಮಕ್ಕಳ ಬರಹದಿಂದ ಅವರು ಸಮಾಜದ ಪ್ರತಿ ಘಟನೆಯನ್ನು ಗಮನಿಸುತ್ತಿದ್ದಾರೆ ಎಂಬ ಅಂಶ ತಿಳಿಯಿತು. ಅವರ ಪ್ರತಿಭೆಯ ಖಜಾನೆಯ ಬೀಗದ ಕೀಲಿ ತೆಗೆಯುವ ಕಾರ್ಯ ಮಾಡಲಾಗಿದೆ. ಬರಹ ಮತ್ತು ಪ್ರಯೋಗ ಒಟ್ಟಿಗೆ ಆಗಬೇಕಿದೆ. ಮಠ ಮಾನ್ಯ ಇಂತಹ ಕಾರ್ಯಕ್ರಮವನ್ನು ಪ್ರೋತ್ಸಾಹಿಸಿದಾಗ ಮಕ್ಕಳ ಪ್ರತಿಭೆಯ ಅನಾವರಣವಾಗುತ್ತದೆ ಎಂದರು.
ಮಕ್ಕಳ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಚ.ನಾ.ಅಶೋಕ್ ಹಾಜರಿದ್ದರು.
ಕಾರ್ಯಕ್ರಮದಲ್ಲಿ ಶಿಬಿರಾರ್ಥಿ, ಸಂಪನ್ಮೂಲ ವ್ಯೆಕ್ತಿ ಮತ್ತು ಸಹಕರಿಸಿದವರನ್ನು ಗೌರವಿಸಲಾಯಿತು.
ವೇದಿಕೆ ಕಾರ್ಯಕ್ರಮಕ್ಕೆ ಮೊದಲು ಮಕ್ಕಳೆ ಬರೆದು ಪ್ರದರ್ಶಿಸಿದ ಡಬ್ಬ, ಮಾನವ ಉನ್ಮಾದ, ದೂಡದಿರಿ ಹೊರಗೆ ಹೆತ್ತವರನ್ನು, ಶೇ.100 ಅಂಕ ಮತ್ತಿತರ ಪುಟ್ಟ ನಾಟಕ ಜನರನ್ನು ಮಂತ್ರಮುಗ್ಧರನ್ನಾಗಿಸಿದವು.
ನೀಲ ಸ್ವಾಮಿ ಸ್ವಾಗತಿಸಿ, ಲಕ್ಷ್ಮೀ ನಾರಾಯಣ್ ನಿರೂಪಿಸಿ, ಮನೋಹರ್ ವಂದಿಸಿದರು.
ತಾಲೂಕಿನ ಸಮೀಪದ ಕುಪ್ಪಳ್ಳಿಯ ಹೇಮಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ರಾಜ್ಯ ಮಟ್ಟದ ಮಕ್ಕಳ ಸಾಹಿತ್ಯ ರಚನಾ ಮತ್ತು ರಂಗ ಕಮ್ಮಟ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.
ಮಕ್ಕಳಲ್ಲಿ ಅಪಾರವಾದ ಪ್ರತಿಭೆ ಅಡಗಿದೆ. ಅವರ ಮನಸ್ಸಿನೊಳಗಿನ ಮಲ್ಲಿಗೆಯು ಅರಳಿ ಸುವಾಸನೆ ಬೀರಿದಾಗ ಕಮ್ಮಟಕ್ಕೆ ಒಂದು ಅರ್ಥ ಬರುತ್ತದೆ. ಅವರು ಶ್ರದ್ಧೆಯಿಂದ ನಿರಂತರ ಅಧ್ಯಯನ ಕೈಗೊಳ್ಳಬೇಕು. ಅವರು ಕಮ್ಮಟದಿಂದ ಸಾಹಿತ್ಯಾಭಿಮಾನಿಯಾಗಿ, ಸುಸಂಸ್ಕೃತರಾಗಿ, ಒಳ್ಳೆಯ ಪ್ರಜೆಯಾಗಿ ಮತ್ತು ಒಳ್ಳೆಯ ಮನುಷ್ಯರಾಗಿ ರೂಪುಗೊಳ್ಳಬೇಕು. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಆಶ್ರಯ ನೀಡಿ ಸಲಹುವುದು ಶ್ರೀ ಮಠದ ಆಶಯವಾಗಿದೆ ಎಂದರು.
ಶೃಂಗೇರಿ ಶಾಖಾ ಮಠದ ಕಾರ್ಯದರ್ಶಿ ಶ್ರೀ ಗುಣನಾಥ ಸ್ವಾಮೀಜಿ ಮಾತನಾಡಿ, ಇಲ್ಲಿ ಸಂಪನ್ಮೂಲ ವ್ಯೆಕ್ತಿ ಮಕ್ಕಳ ಮನಸ್ಸಿನಲ್ಲಿ ಸಾಹಿತ್ಯವೆಂಬ ಸಕ್ಕರೆ ತುಂಬಿದ್ದಾರೆ. ಮಕ್ಕಳು ಅದನ್ನು ಮೆಲುಕು ಹಾಕುತ್ತಾ ಉತ್ತಮ ಸಾಹಿತಿಗಳಾಗಬೇಕು ಎಂದರು.
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಬೋಳುವಾರು ಮಹಮ್ಮದ್ ಕುಂಞ್ಞ ಮಾತನಾಡಿ, ಸಮಾಜದ ಎಲ್ಲ ಮಕ್ಕಳಿಗೆ ಇಂತಹ ಅವಕಾಶ ಲಭಿಸಬೇಕು. ಮುಂದಿನ 10 ವರ್ಷ ನಂತರ ಇವರಲ್ಲಿ ಕನಿಷ್ಟ 6 ಮಂದಿ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪ್ರಶಸ್ತಿ ಪುರಸ್ಕಾರ ಪಡೆಯುವುದರಲ್ಲಿ ಸಂಶಯವಿಲ್ಲ ಎಂದರು.
ಕಮ್ಮಟದ ನಿರ್ದೇಶಕ ಬೇಲೂರು ರಘುನಂದನ್ ಮಾತನಾಡಿ, ಈ ಭಾಗದಲ್ಲಿ ಮಕ್ಕಳ ರಂಗಭೂಮಿಯ ಅವಶ್ಯಕತೆಯಿದೆ. ಮಕ್ಕಳ ಬರಹದಿಂದ ಅವರು ಸಮಾಜದ ಪ್ರತಿ ಘಟನೆಯನ್ನು ಗಮನಿಸುತ್ತಿದ್ದಾರೆ ಎಂಬ ಅಂಶ ತಿಳಿಯಿತು. ಅವರ ಪ್ರತಿಭೆಯ ಖಜಾನೆಯ ಬೀಗದ ಕೀಲಿ ತೆಗೆಯುವ ಕಾರ್ಯ ಮಾಡಲಾಗಿದೆ. ಬರಹ ಮತ್ತು ಪ್ರಯೋಗ ಒಟ್ಟಿಗೆ ಆಗಬೇಕಿದೆ. ಮಠ ಮಾನ್ಯ ಇಂತಹ ಕಾರ್ಯಕ್ರಮವನ್ನು ಪ್ರೋತ್ಸಾಹಿಸಿದಾಗ ಮಕ್ಕಳ ಪ್ರತಿಭೆಯ ಅನಾವರಣವಾಗುತ್ತದೆ ಎಂದರು.
ಮಕ್ಕಳ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಚ.ನಾ.ಅಶೋಕ್ ಹಾಜರಿದ್ದರು.
ಕಾರ್ಯಕ್ರಮದಲ್ಲಿ ಶಿಬಿರಾರ್ಥಿ, ಸಂಪನ್ಮೂಲ ವ್ಯೆಕ್ತಿ ಮತ್ತು ಸಹಕರಿಸಿದವರನ್ನು ಗೌರವಿಸಲಾಯಿತು.
ವೇದಿಕೆ ಕಾರ್ಯಕ್ರಮಕ್ಕೆ ಮೊದಲು ಮಕ್ಕಳೆ ಬರೆದು ಪ್ರದರ್ಶಿಸಿದ ಡಬ್ಬ, ಮಾನವ ಉನ್ಮಾದ, ದೂಡದಿರಿ ಹೊರಗೆ ಹೆತ್ತವರನ್ನು, ಶೇ.100 ಅಂಕ ಮತ್ತಿತರ ಪುಟ್ಟ ನಾಟಕ ಜನರನ್ನು ಮಂತ್ರಮುಗ್ಧರನ್ನಾಗಿಸಿದವು.
ನೀಲ ಸ್ವಾಮಿ ಸ್ವಾಗತಿಸಿ, ಲಕ್ಷ್ಮೀ ನಾರಾಯಣ್ ನಿರೂಪಿಸಿ, ಮನೋಹರ್ ವಂದಿಸಿದರು.