ಆ್ಯಪ್ನಗರ

ಮಾನವ ಸಂಪತ್ತು ಸದ್ಬಳಕೆಯಾದಾಗ ಉತ್ತಮ ಸಮಾಜ

ಮಾನವ ಸಂಪತ್ತು ಜಗತ್ತಿನ ಶ್ರೇಷ್ಠ ಸಂಪತ್ತಾಗಿದ್ದು, ಇದರ ಸದ್ಬಳಕೆಯಾದಾಗ ಸುಸ್ಥಿರ ಸಮಾಜ ನಿರ್ಮಾಣ ಮಾಡಬಹುದು ಎಂದು ಜೆಸಿಐ ಚಿಕ್ಕಮಗಳೂರು ಮಲ್ನಾಡ್‌ ಘಟಕದ ಅಧ್ಯಕ್ಷ ಆರ್‌.ವಿ.ರಘುನಂದನ್‌ ಹೇಳಿದರು.

Vijaya Karnataka 7 Jan 2019, 5:00 am
ಚಿಕ್ಕಮಗಳೂರು: ಮಾನವ ಸಂಪತ್ತು ಜಗತ್ತಿನ ಶ್ರೇಷ್ಠ ಸಂಪತ್ತಾಗಿದ್ದು, ಇದರ ಸದ್ಬಳಕೆಯಾದಾಗ ಸುಸ್ಥಿರ ಸಮಾಜ ನಿರ್ಮಾಣ ಮಾಡಬಹುದು ಎಂದು ಜೆಸಿಐ ಚಿಕ್ಕಮಗಳೂರು ಮಲ್ನಾಡ್‌ ಘಟಕದ ಅಧ್ಯಕ್ಷ ಆರ್‌.ವಿ.ರಘುನಂದನ್‌ ಹೇಳಿದರು.
Vijaya Karnataka Web CKM-6rudrap4


ಜೆಸಿಐ ಚಿಕ್ಕಮಗಳೂರು ಮಲ್ನಾಡ್‌ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಶನಿವಾರ ಅವರು ಮಾತನಾಡಿದರು.

ಸಂಸ್ಥೆಯ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿ ಕಾರ್ಯನಿರ್ವಹಿಸಬೇಕಿದೆ. ಮೂಲ ಉದ್ದೇಶಗಳಿಗೆ ಚ್ಯುತಿ ಬಾರದ ಹಾಗೆ ಚಿಕ್ಕಮಗಳೂರಿನ ಘನತೆಯನ್ನು ಎತ್ತಿ ಹಿಡಿಯುವುದರ ಜತೆಗೆ ತಾನೂ ಬೆಳೆದು ತನ್ನವರನ್ನೂ ಬೆಳೆಸುವ ಗುರಿ ಹೊಂದಿದ್ದೇವೆ. ವ್ಯಕ್ತಿತ್ವ ವಿಕಸನ ತರಬೇತಿ, ಪರಿಣಾಮಕಾರಿ ಭಾಷಣಕಲೆ, ಶಾಲಾ ಮಕ್ಕಳಿಗೆ ಪರೀಕ್ಷೆ ನಿಭಾಯಿಸುವ ಕಲೆಯ ತರಬೇತಿ, ಆರೋಗ್ಯ ಶಿಬಿರ, ಯೋಗ ಶಿಬಿರ, ಪರಿಸರ ಸ್ವಚ್ಛತೆ, ರಸ್ತೆ ಸುರಕ್ಷಾ ನಿಯಮ ಮತ್ತಿತರೆ ಯೋಜನೆಗಳನ್ನು ಹಮ್ಮಿಕೊಂಡಿದ್ದು, ಕಾರ್ಯರೂಪಕ್ಕೆ ತರಲು ಮುಂದಾಗಿದ್ದೇವೆ ಎಂದು ಹೇಳಿದರು.

ಜೆಸಿಐ ಸಂಸ್ಥೆಯ ವಲಯ ಅಧ್ಯಕ್ಷ ಜೀಸಿ ಸೆನೆಟರ್‌ ಜೆಫಿನ್‌ ಜಾಯ್‌ ಮಾತನಾಡಿ, ಶಾಲಾ ಕಾಲೇಜು ಮುಗಿದ ನಂತರ ಸಮಾಜದಲ್ಲಿ ಹೇಗೆ ಬದುಕಬೇಕು, ವ್ಯವಹರಿಸಬೇಕು, ಸಮಾಜಕ್ಕೆ ಹೇಗೆ ಕೊಡುಗೆ ನೀಡಬೇಕು ಎಂದು ವಿವರಿಸಲು ಯಾವುದೇ ಶಿಕ್ಷ ಕರಿರುವುದಿಲ್ಲ. ಇಂತಹ ಗೊಂದಲ ನಿವಾರಣೆ ಮಾಡಿ ಸಮಾಜದಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸಲು 1905ರಲ್ಲಿ ಆರಂಭಿಸಿರುವ ಸಂಸ್ಥೆಯೇ ಜೆಸಿಐ ಆಗಿದೆ ಎಂದರು.

ಪದಾಧಿಕಾರಿಗಳಿಗೆ ಪದಗ್ರಹಣ ಬೋಧಿಸಿ ಮಾತನಾಡಿದ ವಲಯ ಉಪಾಧ್ಯಕ್ಷ ಸೋಮೇಶ್‌, 20 ನೂತನ ಸದಸ್ಯರನ್ನು ಸೇರ್ಪಡೆಗೊಳಿಸುವ ಮೂಲಕ ಚಿಕ್ಕಮಗಳೂರಿನ ಜೇಸಿಐನ ನೂತನ ಅಧ್ಯಕ್ಷ ರಘುನಂದನ್‌ ಹೊಸ ಇತಿಹಾಸ ಬರೆದಿದ್ದಾರೆ. ಇದು ಹೀಗೆ ಮುಂದುವರಿಯಲಿ. ಪ್ರತಿಯೊಬ್ಬರಲ್ಲೂ ನಾಯಕತ್ವ ಗುಣವಿದೆ. ಆದರೆ, ಅವರಿಗೆ ಸರಿಯಾದ ವೇದಿಕೆ ಸಿಕ್ಕಿರುವುದಿಲ್ಲ. ಇಂತಹ ಕೊರತೆಯನ್ನು ಜೇಸಿಐ ಸಂಸ್ಥೆ ನೀಗಿಸಲಿದೆ ಎಂದು ಹೇಳಿದರು.

ಸಂಸ್ಥಾಪಕ ಅಧ್ಯಕ್ಷ ವೇಣುಗೋಪಾಲ್‌ ಮಾತನಾಡಿದರು. ನಿಕಟ ಪೂರ್ವ ಅಧ್ಯಕ್ಷ ಕೆ.ಮೋಹಿದ್ದೀನ್‌ ಇಕ್ಬಾಲ್‌ ಅವರು ತಮ್ಮ ಅವಧಿಯಲ್ಲಿ ಮಾಡಿರುವ ಸಾಧನೆಯ ಕಿರು ಪರಿಚಯ ಮಾಡಿಕೊಟ್ಟರು. ನೂತನ ಕಾರ್ಯದರ್ಶಿ ಪ್ರದೀಪ್‌, ಅನಿಲ್‌ ಆನಂದ್‌, ಗಿರಿಧರ್‌ ರಾಜ್‌ ಅರಸ್‌, ಚೇತನ್‌, ವಿಷ್ಣುವರ್ಧನ್‌, ಕೃಷ್ಣ ಮೂರ್ತಿ, ಹರ್ಷವರ್ಧನ್‌, ಅಣ್ಣ ನಾಯಕ್‌, ಗೋಪಾಲ್‌ ಕೃಷ್ಣ, ಗುರುಮೂರ್ತಿ, ಶಿವಕುಮಾರ್‌, ರಾಧೇಶ್‌, ಸಾಕೇತ್‌ ರಾಮ್‌, ವಿಶ್ವಾಸ್‌, ಮದನ್‌, ಜೇಸಿ ರೈಟ್ಸ್‌ ಪೂಜಾ, ವಾಣಿ ಉಮೇಶ್‌, ಶ್ವೇತಾ ಆನಂದ್‌ ಹಾಜರಿದ್ದರು. ಚೈತ್ರಾ ಸ್ವಾಗತಿಸಿ, ವಿಷ್ಣುವರ್ಧನ್‌ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ