ಆ್ಯಪ್ನಗರ

ಅತಿವೃಷ್ಟಿ ನಿರಾಶ್ರಿತರ ಬೀದಿಪಾಲು ಮಾಡಿದ ಸರಕಾರ: ದುಗ್ಗಪ್ಪಗೌಡ

ಅತಿವೃಷ್ಟಿ, ಪ್ರವಾಹದಿಂದ ಮನೆ, ಆಸ್ತಿ ಕಳೆದುಕೊಂಡು ನಿರಾಶ್ರಿತರಾದವರಿಗೆ ಸೂಕ್ತ ಪರಿಹಾರಧನ ಬಿಡುಗಡೆ ಮಾಡದೇ ಪ್ರಧಾನಿ ನರೇಂದ್ರ ಮೋದಿ ಸಂತ್ರಸ್ತರನ್ನು ಬೀದಿಪಾಲು ಮಾಡಿದ್ದಾರೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಡಿ.ಅರ್‌.ದುಗ್ಗಪ್ಪಗೌಡ ಆಕ್ರೋಶ ವ್ಯಕ್ತಪಡಿಸಿದರು.

Vijaya Karnataka 14 Sep 2019, 5:00 am
ಮೂಡಿಗೆರೆ: ಅತಿವೃಷ್ಟಿ, ಪ್ರವಾಹದಿಂದ ಮನೆ, ಆಸ್ತಿ ಕಳೆದುಕೊಂಡು ನಿರಾಶ್ರಿತರಾದವರಿಗೆ ಸೂಕ್ತ ಪರಿಹಾರಧನ ಬಿಡುಗಡೆ ಮಾಡದೇ ಪ್ರಧಾನಿ ನರೇಂದ್ರ ಮೋದಿ ಸಂತ್ರಸ್ತರನ್ನು ಬೀದಿಪಾಲು ಮಾಡಿದ್ದಾರೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಡಿ.ಅರ್‌.ದುಗ್ಗಪ್ಪಗೌಡ ಆಕ್ರೋಶ ವ್ಯಕ್ತಪಡಿಸಿದರು.
Vijaya Karnataka Web government making street for ultra refugees duggappagouda
ಅತಿವೃಷ್ಟಿ ನಿರಾಶ್ರಿತರ ಬೀದಿಪಾಲು ಮಾಡಿದ ಸರಕಾರ: ದುಗ್ಗಪ್ಪಗೌಡ


ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿ, ಅತಿವೃಷ್ಟಿಯಿಂದ ರಾಜ್ಯದ 17 ಜಿಲ್ಲೆಗಳು ಮುಳುಗಿ ಹೋಗಿದ್ದರೂ ಕೇಂದ್ರ, ರಾಜ್ಯ ಸರಕಾರಗಳು ನಿರಾಶ್ರಿತರಿಗೆ ಪರಿಹಾರ ನೀಡುವಲ್ಲಿವಿಫಲವಾಗಿವೆ. ಕೇಂದ್ರ ಸರಕಾರ ಅತಿವೃಷ್ಟಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ ದೊಡ್ಡ ಮಟ್ಟದಲ್ಲಿಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಜಿಲ್ಲೆಯಲ್ಲಿಮಹಾಮಳೆಗೆ ಸುಮಾರು 55 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿಶೇ.70ರಷ್ಟು ಬೆಳೆದ ಕಾಫಿ, ಅಡಕೆ, ಮೆಣಸು, ಬಾಳೆ, ಶುಂಠಿ, ಭತ್ತ ಬೆಳೆ ಹಾನಿಯಾಗಿದೆ. ಒಟ್ಟು 10 ಸಾವಿರ ಕೋಟಿಗೂ ಹೆಚ್ಚು ನಷ್ಟವುಂಟಾಗಿದೆ. ಬಣಕಲ್‌, ಬಾಳೂರು ಮತ್ತು ಕಳಸ ಹೋಬಳಿಗಳಲ್ಲಿಭೂ ಕುಸಿತದಿಂದ ತೋಟ, ಗದ್ದೆ, ಮನೆಗಳನ್ನು ಕಳೆದುಕೊಂಡು ಜನ ಬೀದಿ ಪಾಲಾಗಿದ್ದಾರೆ. ನಿರಾಶ್ರಿತರು ಬದುಕು ಕಟ್ಟಿಕೊಳ್ಳಲು ಬದಲಿ ಭೂಮಿ, ಮನೆ ನೀಡಿ, ಮನೆ ನಿರ್ಮಾಣಕ್ಕೆ ಪ್ರತಿ ಕುಟುಂಬಕ್ಕೆ 20 ಲಕ್ಷ ರೂ. ನೀಡಬೇಕು. ಬೆಳೆ ಪರಿಹಾರ ನೀಡಲು ಹಳೆಯ ಮಾರ್ಗಸೂಚಿ ಬಳಸದೇ ಹೆಚ್ಚಿನ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

ರಾಷ್ಟ್ರೀಕೃತ ಬ್ಯಾಂಕ್‌, ಸಹಕಾರ ಸಂಘಗಳು, ಮೈಕ್ರೋ ಫೈನಾನ್ಸ್‌ ಮೂಲಕ ಬೆಳೆಗಾರರು ಮತ್ತು ನಿರಾಶ್ರಿತರು ಪಡೆದಿರುವ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು. ಮನೆ ಕಳೆದುಕೊಂಡು ಬೀದಿ ಪಾಲಾಗಿರುವ ಕುಟುಂಬಗಳಿಗೆ ತಾತ್ಕಾಲಿಕವಾಗಿ ಬಾಡಿಗೆ ಮನೆ ಮಾಡಿಕೊಳ್ಳಲು ತಿಂಗಳಿಗೆ 10 ಸಾವಿರ, ಮನೆ ಮಾಲೀಕರಿಗೆ ಮುಂಗಡವಾಗಿ ಪಾವತಿಸಲು 50 ಸಾವಿರ ನೀಡಬೇಕು. ಬಣಕಲ್‌, ಗುಡ್ಡಹಟ್ಟಿ ಮತ್ತು ಬಿ.ಹೊಸಳ್ಳಿ ಗ್ರಾಮದ ಫಲವತ್ತಾದ ಭೂಮಿಯಲ್ಲಿಅರಣ್ಯ ಇಲಾಖೆ ಅಕೇಶಿಯಾ ಪ್ಲಾಂಟೇಷನ್‌ ಅನ್ನು ಅರಣ್ಯವೆಂದು ಘೋಷಿಸಿರುವುದನ್ನು ಡಿ ನೋಟಿಫೈ ಮಾಡಿ ನಿರಾಶ್ರಿತರಿಗೆ ಭೂಮಿ ಮತ್ತು ಮನೆ ನೀಡಬೇಕು. ಈ ಪ್ರಕ್ರಿಯೆಗಾಗಿ ರಾಜ್ಯ ಸರಕಾರ ಉನ್ನತ ಮಟ್ಟದ ಅಧಿಕಾರಿಗಳ ತಂಡವನ್ನು ತಾಲೂಕಿಗೆ ಕಳುಹಿಸಿ ಸಮಗ್ರ ರೂಪುರೇಷೆ ತಯಾರಿಸಿ, ಪರಿಹಾರ ಒದಗಿಸಬೇಕು. ಒಂದು ವಾರದಲ್ಲಿಪರಿಹಾರ ಒದಗಿಸಲು ಮುಂದಾಗದಿದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ನಿರಾಶ್ರಿತರೊಂದಿಗೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ರೈತ ಸಂಘದ ತಲೂಕು ಅಧ್ಯಕ್ಷ ಪಿ.ಕೆ.ನಾಗೇಶ್‌, ಜಿಲ್ಲಾಕಾರ್ಯಾಧ್ಯಕ್ಷ ದಯಾಕರ್‌, ಮಧುಗುಂಡಿ ನಿರಾಶ್ರಿರಾದ ಉದೇಶ್‌, ರಾಕೇಶ್‌, ಪ್ರಾಣೇಶ್‌, ಪ್ರವೀಣ್‌, ದಿನೇಶ್‌, ಮಧುಸೂದನ್‌, ನಟೇಶ್‌, ಸತೀಶ, ವೆಂಕಟೇಶ್‌, ಸಂದೀಪ್‌ ಉಪಸ್ಥಿತರಿದ್ದರು.


ಅಧಿಕಾರಿಗಳಿಂದ ಒತ್ತಡ

ಸುದ್ದಿಗೋಷ್ಠಿಯಲ್ಲಿಮಧುಗುಂಡಿ ಗ್ರಾಮದ ಸುರೇಶ್‌ ಮತ್ತು ಶಿವಕುಮಾರ್‌ ಮಾತನಾಡಿ, ಗ್ರಾಮದಲ್ಲಿ72 ಕುಟುಂಬ ವಾಸವಾಗಿದ್ದವು. ಬಹುತೇಕ ಕುಟುಂಬದವರು ಜಮೀನು ಹೊಂದಿದ್ದರು. ಮಹಾಮಳೆಯಿಂದ ಜಮೀನು, ಮನೆಗಳು ನಾಶವಾಗಿವೆ. ಗ್ರಾಮದ ಜನರೆಲ್ಲರೂ ಬಿದರಹಳ್ಳಿಯ ಕಾಳಜಿ ಕೇಂದ್ರದಲ್ಲಿವಾಸವಾಗಿದ್ದೇವೆ. 17 ಮಕ್ಕಳು ಶಾಲೆಗೆ ಹೋಗಲು ಸಾಧ್ಯವಾಗದೇ ಕಾಳಜಿ ಕೇಂದ್ರದಲ್ಲೇ ಉಳಿದಿವೆ. ಕೆಲ ಮಕ್ಕಳನ್ನು ಸಂಬಂಧಿಗಳ ಮನೆಯಲ್ಲಿರಿಸಿ ಶಾಲೆಗೆ ಕಳಿಸಲಾಗುತ್ತಿದೆ. ಮನೆ ಕಳೆದುಕೊಂಡಿರುವ ನಮಗೆ ಬಾಡಿಗೆ ಮನೆಗೆ ಹೋಗಲು ಅಧಿಕಾರಿಗಳು ತಿಳಿಸುತ್ತಾರೆ. ಆದರೆ ಮನೆ ಮಾಲೀಕರು 50 ಸಾವಿರ ರೂ. ಮುಂಗಡ ಹಣ, 10 ಸಾವಿರ ರೂ. ಬಾಡಿಗೆ ಕೇಳುತ್ತಿದ್ದಾರೆ. ಅಧಿಕಾರಿಗಳು 5 ಸಾವಿರ ತಿಂಗಳ ಬಾಡಿಗೆ ಹಣ ಕೊಡುವುದಾಗಿ ಹೇಳಿದ್ದಾರೆ. ಅಧಿಕಾರಿಗಳು ನಮ್ಮನ್ನು ಕಾಳಜಿ ಕೇಂದ್ರದಿಂದ ಹೊರ ದಬ್ಬಲು ಪ್ರಯತ್ನಿಸುತ್ತಿದ್ದಾರೆ ಎಂದು ಗೋಳು ತೋಡಿಕೊಂಡರು.

**

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ