ಆ್ಯಪ್ನಗರ

ಠಾಣೆ ಮೆಟ್ಟಿಲೇರಿದ ಗ್ರಾ.ಪಂ.ಗಲಾಟೆ

ತಾಲೂಕಿನ ಎಮ್ಮೆದೊಡ್ಡಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿಬುಧವಾರ ಅಧ್ಯಕ್ಷರು ಹಾಗು ಕರ ವಸೂಲಿಗಾರ ನಡುವಿನ ಮಾತಿನ ಚಕಮಕಿ ನಡೆದು ಕೊನೆಗೆ ಪ್ರಕರಣ ಪೊಲೀಸ್‌ ಠಾಣೆ ಮೆಟ್ಟಿಲೇರಿದ ಪ್ರಸಂಗ ನಡೆಯಿತು, ಅಲ್ಲದೇ ಆಕ್ರೋಶಗೊಂಡ ಸಾರ್ವಜನಿಕರಿಂದ ಪಂಚಾಯಿತಿಗೆ ಬೀಗವನ್ನೂ ಜಡಿಯಲಾಯಿತು.

Vijaya Karnataka 23 Jan 2020, 5:00 am
ಕಡೂರು : ತಾಲೂಕಿನ ಎಮ್ಮೆದೊಡ್ಡಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿಬುಧವಾರ ಅಧ್ಯಕ್ಷರು ಹಾಗು ಕರ ವಸೂಲಿಗಾರ ನಡುವಿನ ಮಾತಿನ ಚಕಮಕಿ ನಡೆದು ಕೊನೆಗೆ ಪ್ರಕರಣ ಪೊಲೀಸ್‌ ಠಾಣೆ ಮೆಟ್ಟಿಲೇರಿದ ಪ್ರಸಂಗ ನಡೆಯಿತು, ಅಲ್ಲದೇ ಆಕ್ರೋಶಗೊಂಡ ಸಾರ್ವಜನಿಕರಿಂದ ಪಂಚಾಯಿತಿಗೆ ಬೀಗವನ್ನೂ ಜಡಿಯಲಾಯಿತು.
Vijaya Karnataka Web 22KDR1_35


ಗ್ರಾಮ ಪಂಚಾಯಿತಿ ಅಧ್ಯಕ್ಷ ಬುಧವಾರ ಬೆಳಗ್ಗೆ ಕಚೇರಿಗೆ ಬಂದ ಸಂದರ್ಭ ಶಾಂತಿನಗರ ಗ್ರಾಮದ ರೈತ ಮಹಿಳೆಯೊಬ್ಬರು ತಮ್ಮ ಕೋಳಿಫಾರಂ ಪರವಾನಗಿ ಸಂಬಂಧ ಮಾಹಿತಿ ಪಡೆಯಲು ಕಚೇರಿಗೆ ಬಂದಿದ್ದರು. ತಮನ್ನು ವ್ರತಾ ಅಲೆದಾಡಿಸಲಾಗುತ್ತಿದೆ ಎಂದು ದೂರಿದರು.

ಈ ಸಂದರ್ಭ ಅಧ್ಯಕ್ಷ ಆನಂದ್‌ ಮತ್ತು ಕರವಸೂಲಿಗಾರ ಚಂದ್ರಾನಾಯ್ಕ ನಡುವೆ ಮಾತಿನ ಚಕಮಕಿ ನಡೆದಿದ್ದು, ರೈತಾಪಿ ವರ್ಗದವರನ್ನು ಅಲೆದಾಡಿಸದಂತೆ ಕೆಲಸ ಮಾಡಿ ಕೊಡಿ ಎಂದು ಅಧ್ಯಕ್ಷ ಹೇಳಿದ್ದಾರೆ. ಆಗ ಕರವಸೂಲಿಗಾರ ಚಂದ್ರಾನಾಯ್ಕ ಅವರು ಇದೆಲ್ಲಾಸುಳ್ಳು, ನಿಯಾಮಾನುಸಾರ ಮಾಡಲು ಕಷ್ಟವಿದೆ ಎಂದು ಸಮಜಾಯಿಸಿ ನೀಡಿದ್ದಾರೆ. ಹೀಗೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಅದೇ ಸಂದರ್ಭ ಗ್ರಾಮದ ಇತರೆ ಕೆಲವು ಜನರು ತಮ್ಮ ದೂರನ್ನು ಅಧ್ಯಕ್ಷರ ಬಳಿ ನಿವೇದಿಸಿಕೊಂಡಾಗ ಕರವಸೂಲಿಗಾರ ಮತ್ತು ಗ್ರಾಮಸ್ಥರ ನಡುವೆ ಮಾತಿಗೆ ಮಾತು ಬೆಳೆದು ಕೈಕೈ ಮಿಲಾಯಿಸುವ ಹಂತಕ್ಕೂ ತಲುಪಿತು ಎಂದು ಹೇಳಲಾಗಿದೆ. ಈ ಸಂದರ್ಭ ಜನರು ಪಂಚಾಯಿತಿ ಕಚೇರಿಗೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದರು.

ಕಡೂರು ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿ ನಂತರ ಕಚೇರಿಯ ಬೀಗ ತೆರವುಗೊಳಿಸಿದರು. ಘಟನೆ ಸಂಬಂಧ ಗ್ರಾಮದ ಇಬ್ಬರು ಹಾಗೂ ಕರವಸೂಲಿಗಾರ ಮತ್ತು ಅವರ ಪುತ್ರಿ ಕಡೂರು ಸಾರ್ವಜನಿಕ ಆಸ್ಪತ್ರೆಯಲ್ಲಿಒಳರೋಗಿಗಳಾಗಿ ದಾಖಲಾಗಿದ್ದಾರೆ. ಪೊಲೀಸರು ಗ್ರಾಮಸ್ಥರು ಮತ್ತು ಕರವಸೂಲಿಗಾರರ ಕಡೆಯಿಂದ ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.

--------------

ಘಟನೆ ಸಂಬಂಧ ತಮಗೆ ಎರಡೂ ಕಡೆಯಿಂದ ದೂರು ಬಂದಿದ್ದು, ತಾವು ಪಂಚಾಯಿತಿ ಕಚೇರಿಗೆ ಭೇಟಿ ನೀಡಿ ವಾಸ್ತವ ವರದಿಯನ್ನು ಜಿ.ಪಂ ಸಿಇಓ ಅವರಿಗೆ ಸಲ್ಲಿಸುತ್ತೇನೆ.

-ಡಾ. ದೇವರಾಜನಾಯ್ಕ ,ತಾ.ಪಂ ಕಾರ್ಯನಿರ್ವಾಹಣಾಧಿಕಾರಿ


-----------

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ