ಆ್ಯಪ್ನಗರ

ದೇವನೂರಲ್ಲಿ ಗ್ರಾಮಾಯಣ ಚಿತ್ರೀಕರಣ

ಗ್ರಾಮೀಣ ಸೊಗಡಿನ ಗ್ರಾಮಾಯಣ ಚಲನಚಿತ್ರದ ಚಿತ್ರೀಕರಣಕ್ಕೆ ಕಡೂರು ತಾಲೂಕಿನ ದೇವನೂರು ಸಂಪೂರ್ಣ ಸಜ್ಜಾಗಿದೆ. ಅ.23 ರಿಂದ ನವೆಂಬರ್‌ 18ರವರೆಗೆ ಚಿತ್ರೀಕರಣ ನಡೆಯಲಿದ್ದು ಸ್ಥಳೀಯರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಸಹಕರಿಸಬೇಕು ಎಂದು ನಟ ವಿನಯ್‌ರಾಜಕುಮಾರ್‌ ಮನವಿ ಮಾಡಿದರು.

Vijaya Karnataka 20 Oct 2018, 5:00 am
ಚಿಕ್ಕಮಗಳೂರು : ಗ್ರಾಮೀಣ ಸೊಗಡಿನ ಗ್ರಾಮಾಯಣ ಚಲನಚಿತ್ರದ ಚಿತ್ರೀಕರಣಕ್ಕೆ ಕಡೂರು ತಾಲೂಕಿನ ದೇವನೂರು ಸಂಪೂರ್ಣ ಸಜ್ಜಾಗಿದೆ. ಅ.23 ರಿಂದ ನವೆಂಬರ್‌ 18ರವರೆಗೆ ಚಿತ್ರೀಕರಣ ನಡೆಯಲಿದ್ದು ಸ್ಥಳೀಯರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಸಹಕರಿಸಬೇಕು ಎಂದು ನಟ ವಿನಯ್‌ರಾಜಕುಮಾರ್‌ ಮನವಿ ಮಾಡಿದರು.
Vijaya Karnataka Web gramayan shooting in devanur
ದೇವನೂರಲ್ಲಿ ಗ್ರಾಮಾಯಣ ಚಿತ್ರೀಕರಣ


ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚಿತ್ರೀಕರಣದ ಪ್ರಯುಕ್ತ ದೇವನೂರು ಪದವಿಪೂರ್ವ ಕಾಲೇಜು ಮೈದಾನದಲ್ಲಿ ಶನಿವಾರ ಗ್ರಾಮಸ್ಥರನ್ನೊಳಗೊಂಡ ಸೌಹಾರ್ದ ಕಾರ‍್ಯಕ್ರಮ ಆಯೋಜಿಸಲಾಗಿದೆ. ಇದರಲ್ಲಿ ತಂದೆ, ನಟ ರಾಘವೇಂದ್ರ ರಾಜಕುಮಾರ್‌ ಪಾಲ್ಗೊಳ್ಳುವರು ಎಂದರು.

ಗ್ರಾಮೀಣ ಯುವಜನತೆ ನಗರಗಳ ಕಡೆ ಆಕರ್ಷಿತರಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಹಳ್ಳಿಯಲ್ಲಿದ್ದುಕೊಂಡೇ ಸಾಧನೆ ಮಾಡಬಹುದು ಎಂಬುದನ್ನು ತೋರಿಸುವ ಚಿತ್ರ ಕಥೆಯನ್ನೊಳಗೊಂಡ ಈ ಚಿತ್ರದಲ್ಲಿ ತಮ್ಮದು ನಾಯಕನ ಪಾತ್ರ. ಚಿತ್ರದಲ್ಲಿ ಅಪ್ಪಟ ಗ್ರಾಮೀಣ ಸೊಗಡನ್ನು ಬಿಂಬಿಸಲಾಗುತ್ತದೆ. ಗ್ರಾಮೀಣ ಸೊಗಡನ್ನು ಸೊಗಸಾಗಿ ಕಟ್ಟಿಕೊಡುವ ಉದ್ದೇಶದಿಂದ ಸ್ಥಳೀಯ ಜನರಿಗೆ ಹೆಚ್ಚು ಅವಕಾಶ ಮಾಡಿಕೊಡಲು ಉದ್ದೇಶಿಸಲಾಗಿದೆ. ದೇವನೂರು ಮತ್ತು ಸುತ್ತಮುತ್ತಲಿನ ಜನರನ್ನೇ ವಿವಿಧ ಪಾತ್ರಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.

ನಿರ್ದೇಶಕ ದೇವನೂರು ಚಂದ್ರು ಮಾತನಾಡಿ, ಈ ತಲೆಮಾರಿನ ಕಣ್ಣಿನಲ್ಲಿ ಹಳ್ಳಿಗಳು ಹೇಗಿವೆ ಎಂಬುದು ಕಥಾ ವಸ್ತುವಾಗಿದೆ. ಗ್ರಾಮೀಣ ಚಹರೆ ಬದಲಾಗುತ್ತಿರುವುದು, ಅಲ್ಲಿನ ಹಬ್ಬ ಹರಿದಿನಗಳೂ, ಸಂಸ್ಕೃತಿ, ಪುರಾತನ ದೇವಸ್ಥಾನಗಳು, ಭಾಷೆ ಸೇರಿದಂತೆ ಹಳ್ಳಿಯ ನೈಜ ಸೊಗಡಿಗೆ ಎಲ್ಲಿಯೂ ಧಕ್ಕೆ ಬರದಂತೆ ಚಿತ್ರವನ್ನು ಕಟ್ಟಿಕೊಡಬೇಕು ಎಂಬ ಉದ್ದೇಶ ಹೊಂದಲಾಗಿದೆ. ಇದನ್ನು ಸ್ಥಳೀಯ ಗ್ರಾಮಸ್ಥರಿಂದ ಮಾಡಿಸಿದರೆ ಪರಿಣಾಮಕಾರಿಯಾಗಿರುತ್ತದೆ ಎಂಬ ಕಾರಣಕ್ಕೆ ಜ್ಯೂನಿಯರ್‌ ಕಲಾವಿದರ ಬದಲಿಗೆ ಸ್ಥಳೀಯರಿಗೆ ಅವಕಾಶ ನೀಡಲಾಗುತ್ತಿದೆ ಎಂದರು.

ಹವ್ಯಾಸಿ ಕಲಾವಿದರಾದ ಶ್ರೀನಿವಾಸ ಪ್ರಭು, ರಂಗಭೂಮಿ ಕಲಾವಿದ ಸಂಪತ್‌, ಡೇಸಾ ಬೂರಾ ಬೂರಾ ಸಿನೆಮಾ ನಾಯಕ ನಟ ಪ್ರಶಾಂತ್‌ ಮತ್ತಿತರರು ಅಭಿನಯಿಸುವರು. ಹಿರಿಯ ನಟಿ ಅಪರ್ಣ 30 ವರ್ಷಗಳ ನಂತರ ಗ್ರಾಮಾಯಣದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಹೇಳಿದರು.ನಾಯಕ ನಟಿ ಅಮೃತ ಅಯ್ಯರ್‌ ಮಾತನಾಡಿ, ಹಳ್ಳಿಯ ಯುವತಿಯೊಬ್ಬಳು ಕಾಲೇಜಿನಲ್ಲಿ ಕಲಿಯುತ್ತ ಪುರುಷರಿಗೆ ಸಮನಾಗಿ ಸಾಧನೆ ಮಾಡಿ ತೋರಿಸಬಲ್ಲಳು ಎಂಬುದು ನನ್ನ ಪಾತ್ರ. ಕನ್ನಡದಲ್ಲಿ ಇದು ತಮ್ಮ ಮೊದಲ ಚಿತ್ರ. ಈಗಾಗಲೇ ಎರಡು ತಮಿಳು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ ಎಂದರು. ಕಡೂರು ಕಿರಣ್‌ ಹಾಜರಿದ್ದರು.

---------------
ಗ್ರಾಮಸ್ಥರಿಗೆ ಮನವಿ

ಚಿತ್ರೀಕರಣದ ಸಂದರ್ಭ ಜನ ಮೊಬೈಲ್‌ಗಳಲ್ಲಿ ದೃಶ್ಯಗಳನ್ನು ಚಿತ್ರೀಕರಿಸಬಾರದು. ಚಿತ್ರೀಕರಿಸಿದ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದರೆ ಚಿತ್ರ ಕುತೂಹಲ ಕಳೆದುಕೊಳ್ಳುತ್ತದೆ. ಇದರಿಂದ ಒಂದು ಚಿತ್ರದ ಹಿಂದಿರುವ ಕಲಾವಿದರು, ತಂತ್ರಜ್ಞರು, ಕಾರ್ಮಿಕರಿಗೆ ಅನ್ಯಾಯವಾಗುತ್ತದೆ. ಗ್ರಾಮಸ್ಥರು ಮತ್ತು ಸ್ಥಳೀಯರು ಇದಕ್ಕೆ ಸಹಕರಿಸಬೇಕು.

ದೇವನೂರು ಚಂದ್ರು, ನಿರ್ದೇಶಕ

---------------------------

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ