ಆ್ಯಪ್ನಗರ

ಹಸಿರು ಶಾಂತಿ, ಸಮೃದ್ಧಿಯ ಸಂಕೇತ: ರಂಭಾಪುರಿ ಶ್ರೀ

ಎಲ್ಲಿ ಹಸಿರಿದೆಯೋ ಅಲ್ಲಿ ತನ್ನಷ್ಟಕ್ಕೆ ತಾನೇ ಸಮೃದ್ಧಿ ನಿರ್ಮಾಣಗೊಳ್ಳುತ್ತದೆ. ಒಂದು ಗಿಡ ಕಡಿದರೆ ಎರಡು ಗಿಡ ನೆಟ್ಟು ಬೆಳೆಸುವ ಭಾವನೆ ಬರಬೇಕು ಎಂದು ಬಾಳೆಹೊನ್ನೂರಿನ ಶ್ರೀಮದ್ರಂಭಾಪುರಿ ಶ್ರೀಗಳು ಹೇಳಿದರು.

Vijaya Karnataka 18 Jun 2019, 5:00 am
ಚಿಕ್ಕಮಗಳೂರು: ಎಲ್ಲಿ ಹಸಿರಿದೆಯೋ ಅಲ್ಲಿ ತನ್ನಷ್ಟಕ್ಕೆ ತಾನೇ ಸಮೃದ್ಧಿ ನಿರ್ಮಾಣಗೊಳ್ಳುತ್ತದೆ. ಒಂದು ಗಿಡ ಕಡಿದರೆ ಎರಡು ಗಿಡ ನೆಟ್ಟು ಬೆಳೆಸುವ ಭಾವನೆ ಬರಬೇಕು ಎಂದು ಬಾಳೆಹೊನ್ನೂರಿನ ಶ್ರೀಮದ್ರಂಭಾಪುರಿ ಶ್ರೀಗಳು ಹೇಳಿದರು.
Vijaya Karnataka Web CKM-17RUDRAP1


ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನ ನಗರದ ಉಪ್ಪಳ್ಳಿ ಬಡಾವಣೆಯಲ್ಲಿ ಜ್ಞಾನರಶ್ಮಿ ಶಿಕ್ಷ ಣ ಟ್ರಸ್ಟ್‌, ಶ್ರೀ ದೇವಿ ಗುರುಕುಲ, ಶ್ರೀ ಪಾರ್ವತಿ ಮಹಿಳಾ ಮಂಡಳಿ, ಜಂಗಮ ಬಳಗÜ ಹಾಗೂ ಉಪ್ಪಳ್ಳಿ ಗ್ರಾಮಸ್ಥರ ಸಹಯೋಗದೊಂದಿಗೆ ಇತ್ತೀಚೆಗೆ ಆಯೋಜಿಸಿದ್ದ 'ಹಸಿರು ಪಾದಯಾತ್ರೆ'ಯಲ್ಲಿ ಸಸ್ಯಾರೋಪಣ ಮಾಡಿ ನೂರಾರು ಸಸಿಗಳನ್ನು ವಿತರಿಸಿ ಆಶೀರ್ವಚನ ನೀಡಿದರು.

ಮಳೆಬೆಳೆ ಕಾಲಕಾಲಕ್ಕೆ ಬರಬೇಕಾದರೆ ಕಾಡನ್ನು ಸಂರಕ್ಷಿಸಬೇಕು. ಸರ್ವರಲ್ಲೂ ಪರಿಸರ ಕಾಳಜಿ ಹೊಮ್ಮಬೇಕು. ಮರಗಿಡಗಳನ್ನು ನೆಟ್ಟು ಪೋಷಿಸಬೇಕು. ವಿಶ್ವಪರಿಸರ ದಿನಾಚರಣೆಯನ್ನು ಕಾಟಾಚಾರಕ್ಕೆ ಆಚರಿಸದೆ ನಿಜವಾದ ಪರಿಸರ ಕಾಳಜಿಯ ಪ್ರತೀಕವಾಗಬೇಕು. ಪ್ರತಿಷ್ಠಾನ ಪರಿಸರ ಕಾರ‍್ಯಕ್ರಮಕ್ಕೆ ಹೊಸ ಆಯಾಮ ಕೊಡುವ ಪ್ರಯತ್ನ ನಡೆಸುತ್ತಿರುವುದು ಅನುಕರಣೀಯ. ನಗರದ ಹೊರವಲಯದಲ್ಲಿ ನಾಲ್ಕುವರ್ಷದಿಂದ ಹಸಿರು ಕಾರ‍್ಯಕ್ರಮ ವೈಶಿಷ್ಟ್ಯಪೂರ್ಣವಾಗಿ ನಡೆಸಿಕೊಂಡು ಬರುತ್ತಿದೆ. ಕಾಡೆ ನಾಡಿನ ಸಂಪತ್ತು ಎಂಬುದನ್ನು ಮರೆಯಬಾರದು ಎಂದರು.

ಜಿ.ಪಂ. ಸದಸ್ಯೆ ಕವಿತಾಲಿಂಗರಾಜ್‌ ಕಾರ‍್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನದ ಅಧ್ಯಕ್ಷೆ ಗೌರಮ್ಮಬಸವೇಗೌಡ ಸಮಾರಂಭದ ಅಧ್ಯಕ್ಷ ತೆ ವಹಿಸಿದ್ದರು. ಕಾರಾರ‍ಯಧ್ಯಕ್ಷ ಪ್ರಭುಲಿಂಗಶಾಸ್ತ್ರಿ ನಿರೂಪಿಸಿದರು. ಜ್ಞಾನರಶ್ಮಿ ಶಿಕ್ಷ ಣ ಟ್ರಸ್ಟ್‌ ಕಾರ‍್ಯದರ್ಶಿ ನಂದಕುಮಾರ್‌ ಸ್ವಾಗತಿಸಿ, ಉಪ್ಪಳ್ಳಿ ನಂದೀಶ್‌ ವಂದಿಸಿದರು. ಸುಧಾ, ತಾರಾ, ರೇಖಾ ತಂಡ ವೇದಘೋಷ ಮಾಡಿದ್ದು, ರಮ್ಯತಂಡ ಪ್ರಾರ್ಥಿಸಿತು.

ಪ್ರಥಮ ಬಾರಿಗೆ ಉಪ್ಪಳ್ಳಿಗೆ ಆಗಮಿಸಿದ ಜಗದ್ಗುರುಗಳನ್ನು ಮಂಗಳವಾದ್ಯ, ಛತ್ರಿಚಾಮರ, ಪೂರ್ಣಕುಂಭದೊಂದಿಗೆ ಕರೆತರಲಾಯಿತು. ಪ್ರಕಾಶ್‌ ದಂಪತಿ ಪಾದಪೂಜೆ ನೆರವೇರಿಸಿದರು. ಉಪ್ಪಳ್ಳಿಯ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಬಿಲ್ವಪತ್ರೆ ಹಾಗು ಸಂಪಿಗೆ ಸಸಿನೆಡುವ ಮೂಲಕ ಸಸ್ಯಾರೋಪಣ ಕಾರ‍್ಯಕ್ಕೆ ಶ್ರೀಗಳು ಚಾಲನೆ ನೀಡಿದರು. ನಂತರ ಹಸಿರು ಪಾದಯಾತ್ರೆ ನಡೆಯಿತು. ಗ್ರಾಮದ ಮುಖಂಡರು ಗಹ್ರಾಮಸ್ಥರು ಈ ಸಂದರ್ಭದಲ್ಲಿ ಹಾಜರಿದ್ದರು.

ಡಾ.ದಯಾನಂದಮೂರ್ತಿಶಾಸ್ತ್ರಿ ನೇತೃತ್ವದ ಶ್ರೀ ದೇವಿಗುರುಕುಲ ತಂಡ, ರಮ್ಯ ನೇತೃತ್ವದ ಉಪ್ಪಳ್ಳಿ ಪಂಚಾಚಾರ್ಯ ಬಳಗ, ಮತ್ತು ಪಾರ್ವತಿ ಮಹಿಳಾ ಮಂಡಳಿ ಸುಮಿತ್ರಾಶಾಸ್ತ್ರಿ ತಂಡದಿಂದ ಸಂಗೀತ ಕಾರ‍್ಯಕ್ರಮ ನಡೆಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ