ಆ್ಯಪ್ನಗರ

ನೆಲಕಚ್ಚಿದ ಕಾಫಿ, ಬೆಳೆಗಾರ ಹೈರಾಣ

ಕಾಫಿ ಕಾಯಿಗಟ್ಟುವ ಸಂದರ್ಭ ಅತಿವೃಷ್ಟಿಯಿಂದಾಗಿ ಕಾಫಿ ಕಾಯಿ ಕೊಳೆತು ನೆಲಕ್ಕೆ ಉದುರಿದ ಪರಿಣಾಮ ಕಾಫಿ ಫಸಲು ನೆಲಕಚ್ಚಿದ್ದು, ಬೆಳೆಗಾರರ ಬದುಕು ದುಸ್ತರವಾಗಿದೆ.

Vijaya Karnataka 18 Dec 2019, 5:00 am
ವಿ.ಜೆ. ರಾಜೇಶ್‌ ಆಲ್ದೂರು:ಕಾಫಿ ಕಾಯಿಗಟ್ಟುವ ಸಂದರ್ಭ ಅತಿವೃಷ್ಟಿಯಿಂದಾಗಿ ಕಾಫಿ ಕಾಯಿ ಕೊಳೆತು ನೆಲಕ್ಕೆ ಉದುರಿದ ಪರಿಣಾಮ ಕಾಫಿ ಫಸಲು ನೆಲಕಚ್ಚಿದ್ದು, ಬೆಳೆಗಾರರ ಬದುಕು ದುಸ್ತರವಾಗಿದೆ.
Vijaya Karnataka Web grounded coffee grower hirana
ನೆಲಕಚ್ಚಿದ ಕಾಫಿ, ಬೆಳೆಗಾರ ಹೈರಾಣ


ಆಲ್ದೂರಿನ ಸುತ್ತಮುತ್ತಲಿನ ಅರೇಬಿಕಾ ಕಾಫಿ ತೋಟಗಳಲ್ಲಿಕಾಫಿ ಕಟಾವು ಪ್ರಾರಂಭವಾಗಿ ತಿಂಗಳು ಕಳೆದಿದೆ. ಆದರೆ ಈ ಸಮಯದಲ್ಲಿಕೆಲವು ಕಾಫಿ ತೋಟಗಳಲ್ಲಿಅರೇಬಿಕಾ ಕಾಫಿ ಹೂ ಅರಳಿ ನಿಂತಿದೆ. ಆದರೆ, ಬೆಳೆಗಾರರನ್ನು ಚಿಂತೆಗೆ ತಳ್ಳಿದೆ. ಹವಾಮಾನ ವೈಪರೀತ್ಯದಿಂದಾಗಿ ಈ ವರ್ಷ ಅಕಾಲಿಕವಾಗಿ ಆಗಾಗ ಮಳೆ ಸುರಿಯುತ್ತಿದ್ದು ಕಳೆದ 15 ದಿನಗಳ ಹಿಂದೆ ಮಳೆ ಬಿದ್ದ ಪರಿಣಾಮ ಕೆಲವು ಕಾಫಿ ತೋಟಗಳಲ್ಲಿಕಾಫಿ ಹೂವಾಗಿದೆ. ಮಾರ್ಚ್-ಏಪ್ರಿಲ್‌ನಲ್ಲಿಮಳೆ ಬಿದ್ದಾಗ ಸಹಜವಾಗಿ ಕಾಫಿ ಹೂ ಅರಳುವ ಸಮಯ. ಆದರೆಕಾಫಿ ಕಟಾವಿನ ಸಂಧರ್ಭದಲ್ಲಿಕಾಫಿ ಹೂವಾದರೆ ಮಾರ್ಚ್ ತಿಂಗಳಲ್ಲಿಆ ಗಿಡ ಹೂಬಿಡುವುದಿಲ್ಲ, ಕಾಫಿ ಕಾಯಿ ಕಟ್ಟುವುದಿಲ್ಲ. ಇದರಿಂದ ಆ ವರ್ಷದ ಕಾಫಿ ಫಸಲು ಕೈತಪ್ಪುತ್ತದೆ.

ಈ ಬಾರಿ ಕಾಫಿ ಹೂ ಅರಳುವ ಸಮಯದಲ್ಲಿಉತ್ತಮ ಮಳೆಯಾಗದ ಕಾರಣ ಕಾಫಿ ಫಸಲಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತ್ತು. ಇನ್ನೇನು ಈ ಬಾರಿ ಬರಗಾಲದ ಛಾಯೆ ಆವರಿಸಿತು ಎನ್ನುವಷ್ಟರಲ್ಲಿಜೂನ್‌ ತಿಂಗಳಲ್ಲಿಬಿದ್ದ ಮಳೆ ಬೆಳೆಗಾರರನ್ನು ಕೊಂಚ ನಿರಾಳವಾಗಿಸಿತು. ಆದರೆ ಜುಲೈ -ಆಗಸ್ಟ್‌ ತಿಂಗಳಲ್ಲಿಎಡಬಿಡದೆ ಸುರಿದ ಮಳೆ ಕಾಫಿ ಉದ್ಯಮವನ್ನು ಸಂಕಷ್ಟಕ್ಕೆ ಸಿಲುಕಿಸಿತು. ಜುಲೈ -ಆಗಸ್ಟ್‌ ತಿಂಗಳಲ್ಲಿಕಾಫಿ ಕಾಯಿಗಟ್ಟುವ ಸಮಯ. ಈ ಸಂದರ್ಭ ಸುರಿದ ಭಾರಿ ಮಳೆಗೆ ಕಾಫಿ ತೋಟಗಳಲ್ಲಿಶೀತ ಹೆಚ್ಚಾಗಿ ಕಾಫಿ ಫಸಲು ನೆಲಕ್ಕುದುರಿದ್ದು ಈ ವರ್ಷದ ಕಾಫಿ ಫಸಲಿನ ಮೇಲೆ ಭಾರಿ ಪೆಟ್ಟು ನೀಡಿದೆ. ಪ್ರತಿವರ್ಷವೂ ಬೆಳೆಗಾರರು ಈ ಬಾರಿಯಾದರೂ ಉತ್ತಮ ಧಾರಣೆ ಸಿಗುತ್ತದೆ ಎಂಬ ಆಶಾಭಾವನೆಯಿಂದ ತೋಟಗಳ ನಿರ್ವಹಣೆ ಮಾಡುತ್ತಿದ್ದು ಧಾರಣೆ ಏರಿಕೆ ಮಾತ್ರ ಕಾಣುತ್ತಿಲ್ಲ.ಇದು ಬೆಳೆಗಾರರ ನೆಮ್ಮದಿಯನ್ನು ಕಸಿದುಕೊಂಡಿದೆ. ಸಧ್ಯದ ಪರಿಸ್ಥಿತಿಯಲ್ಲಿಕಾಫಿ ತೋಟಗಳ ನಿರ್ವಹಣೆಯ ಬೆಳೆಗಾರರಿಗೆ ಸವಾಲಾಗಿದೆ ಮುಂದಿನÜ ಕೆಲವೇ ವರ್ಷಗಳಲ್ಲಿಮಲೆನಾಡಿನ ಬೆಳೆಗಾರರ ಜೀವನಾಡಿಯಾದ ಅರೇಬಿಕಾ ಕಾಫಿ ಉದ್ಯಮ ಕಣ್ಮರೆಯಾಗುವುದರಲ್ಲಿಸಂದೇಹವಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ