ಆ್ಯಪ್ನಗರ

ವೃದ್ಧೆಯ ಸರ ಕಿತ್ತು ಪರಾರಿ

ಮೂಡಿಗೆರೆ ತಾಲೂಕಿನÜ ಗೋಣಿಬೀಡು ಠಾಣಾ ವ್ಯಾಪ್ತಿಯ ಮಣ್ಣಿಕೆರೆ ಎಂಬಲ್ಲಿಮಹಿಳೆಯೊಬ್ಬರ ಸರ ಕಿತ್ತು ಪರಾರಿಯಾದ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ.

Vijaya Karnataka 11 Sep 2019, 5:00 am
ಕೊಟ್ಟಿಗೆಹಾರ: ಮೂಡಿಗೆರೆ ತಾಲೂಕಿನÜ ಗೋಣಿಬೀಡು ಠಾಣಾ ವ್ಯಾಪ್ತಿಯ ಮಣ್ಣಿಕೆರೆ ಎಂಬಲ್ಲಿಮಹಿಳೆಯೊಬ್ಬರ ಸರ ಕಿತ್ತು ಪರಾರಿಯಾದ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ.
Vijaya Karnataka Web growing old
ವೃದ್ಧೆಯ ಸರ ಕಿತ್ತು ಪರಾರಿ


ಜನ್ನಾಪುರ ಸಮೀಪದ ಮಣ್ಣಿಕೆರೆ ಗ್ರಾಮದ ವೃದ್ಧೆ ಮೀನಾಕ್ಷಮ ಮಂಗಳವಾರ ಮಧ್ಯಾಹ್ನ 12-30 ಸುಮಾರಿಗೆ ಒಬ್ಬರೇ ಮನೆಯಲ್ಲಿದ್ದ ವೇಳೆ ಇಬ್ಬರು ಮುಸುಕಿದಾರಿ ವ್ಯಕ್ತಿಗಳು ಮನೆಗೆ ನುಗ್ಗಿ ಅವರನ್ನು ಬೆದರಿಸಿ ಸುಮಾರು 35 ಗ್ರಾಂ ಚಿನ್ನದ ಸರವನ್ನು ಕಿತ್ತು ಪರಾರಿಯಾಗಿದ್ದಾರೆ. ಕುತ್ತಿಗೆಯಲ್ಲಿದ್ದ ತಾಳಿ ಸರವನ್ನು ಕಿತ್ತಿರುವುದರಿಂದ ಕುತ್ತಿಗೆಯಲ್ಲಿಗಾಯವಾಗಿದ್ದು, ಚಿಕಿತ್ಸೆ ನೀಡಲಾಗಿದೆ.

ಈ ಬಗ್ಗೆ ಗೋಣಿಬೀಡು ಠಾಣೆಯಲ್ಲಿಮೀನಾಕ್ಷಮ್ಮ ಅವರ ಮಗ ರಾಜು ದೂರು ನೀಡಿದ್ದು ಘಟನಾ ಸ್ಥಳಕ್ಕೆ ಚಿಕ್ಕಮಗಳೂರು ಡಿಎಸ್ಪಿ ಬಿ.ಎಸ್‌ ಅಂಗಡಿ, ಮೂಡಿಗೆರೆ ವೃತ್ತ ನಿರೀಕ್ಷಕ ರಘು, ಗೋಣಿಬೀಡು ಪಿಎಸ್‌ಐ ರಾಕೇಶ್‌, ಮೂಡಿಗೆರೆ ಪಿಎಸ್‌ಐ ರಮೇಶ್‌, ಸಿಬ್ಬಂದಿಗಳಾದ ಗಿರೀಶ್‌, ಮಂಜುನಾಥ್‌, ರವೀಂದ್ರ, ಸಂತೋಷ್‌ ಬೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಆರಂಭಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ